ಬ್ರೇಕಿಂಗ್ ನ್ಯೂಸ್
01-10-21 08:06 pm Mangaluru Correspondent ಕ್ರೈಂ
ಉಳ್ಳಾಲ, ಅ.1: ಕಳೆದ ವಾರವಷ್ಟೇ ಅಪರಿಚಿತ ವ್ಯಕ್ತಿಯೊಬ್ಬ ಸೋಮೇಶ್ವರದ ಮನೆ, ಮನೆಗಳಿಗೆ ಕ್ರೈಸ್ತ ಧರ್ಮ ಪ್ರಚಾರದ ಕರಪತ್ರಗಳನ್ನ ಹಂಚಿದ ಪ್ರಕರಣ ನಡೆದಿದ್ದು ಇದರ ಬೆನ್ನಲ್ಲೇ ಇಂದು ತೊಕ್ಕೊಟ್ಟಿನ ಮನೆಗಳಿಗೂ ವ್ಯಕ್ತಿಯೋರ್ವ ಅಂತಹದೇ ಕರಪತ್ರಗಳನ್ನ ಹಂಚಿದ್ದಾನೆ.
ತೊಕ್ಕೊಟ್ಟು ಜಂಕ್ಷನ್ನಲ್ಲಿರುವ ವಿನಮ್ರ ಬಾರಿನ ಪಕ್ಕದ ಕಿರು ರಸ್ತೆಯಲ್ಲಿರುವ ಆರು ಮನೆಗಳಿಗೆ ಇಂದು ಮಧ್ಯಾಹ್ನ ಅಪರಿಚಿತ ವ್ಯಕ್ತಿ ಕ್ರೈಸ್ತ ಧರ್ಮಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನ ಹಂಚಿದ್ದಾನೆ. ಸ್ಥಳೀಯರಾದ ದಯಾನಂದ್ ಎಂಬವರ ಮನೆಗೇಟಲ್ಲಿ ಅಪರಿಚಿತ ವ್ಯಕ್ತಿ ಸ್ಟಿಕ್ಕರ್, ಕರಪತ್ರಗಳನ್ನ ಇರಿಸಿದ್ದು ಅದನ್ನು ಕಿತ್ತೆಸೆದು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಕರಪತ್ರ, ಪುಸ್ತಕಗಳನ್ನ ವಶಕ್ಕೆ ಪಡೆದಿದ್ದಾರೆ.


ಹೆಗಲಿಗೆ ಬ್ಯಾಗ್ ಹಾಕಿದ್ದ ಸುಮಾರು 45 ವರ್ಷದ ವ್ಯಕ್ತಿಯೋರ್ವ ಕರಪತ್ರ, ಪುಸ್ತಕಗಳನ್ನ ಗೇಟಲ್ಲಿ ಇರಿಸಿದ್ದಾನೆಂದು ಸ್ಥಳೀಯರು ಹೇಳಿದ್ದಾರೆ. ಅಲ್ಲದೆ, ವಿಚಾರವನ್ನ ಬಜರಂಗದಳದ ಪ್ರಮುಖರಿಗೂ ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿ ತೊಕ್ಕೊಟ್ಟು ಪರಿಸರದ ಇನ್ನಷ್ಟು ಮನೆಗಳಿಗೆ ಕರಪತ್ರಗಳನ್ನು ಹಂಚಿರುವ ಬಗ್ಗೆ ಬಜರಂಗದಳ ಕಾರ್ಯಕರ್ತರು ಸಂಶಯ ವ್ಯಕ್ತಪಡಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಕಳೆದ ವಾರ ಸೆ.24ರಂದು ಸೋಮೇಶ್ವರದ ರೈಲ್ವೇ ನಿಲ್ದಾಣದ ಹಿಂದಿನ ಬೀಚ್ ರಸ್ತೆಯ ಮನೆಗಳ ಗೇಟ್ ಗಳಲ್ಲಿ ಸಂಪರ್ಕದ ಮೊಬೈಲ್ ಸಂಖ್ಯೆ ನಮೂದಿಸಿದ ಕನ್ನಡ, ಮಳಯಾಲಂನಲ್ಲಿ ಮುದ್ರಿತ ಕರಪತ್ರ, ಪುಸ್ತಕ, ಸ್ಟಿಕ್ಕರ್ ಗಳನ್ನ ಅಪರಿಚಿತನೊಬ್ಬ ಇರಿಸಿ ಹೋಗಿದ್ದ. ಬಜರಂಗದಳ ಕಾರ್ಯಕರ್ತರು ಕರಪತ್ರ ಹಂಚಿದ್ದ ವ್ಯಕ್ತಿಯ ಶೋಧ ಕಾರ್ಯವನ್ನೂ ನಡೆಸಿದ್ದರು.
ಇಂದು ಅದೇ ರೀತಿಯ ಪುಸ್ತಕ, ಕರಪತ್ರಗಳನ್ನು ತೊಕ್ಕೊಟ್ಟಿನ ಪರಿಸರದ ಮನೆಗಳ ಗೇಟ್ ಗಳಲ್ಲಿ ಇರಿಸಲಾಗಿದೆ. ಘಟನೆ ಕುರಿತಂತೆ ಬಜರಂಗದಳ ಉಳ್ಳಾಲ ನಗರ ಸಂಚಾಲಕ ಅರ್ಜುನ್ ಮಾಡೂರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದು ಅಪರಿಚಿತ ವ್ಯಕ್ತಿಯ ಬಂಧನಕ್ಕೆ ಆಗ್ರಹಿಸಿದ್ದಾರೆ.
ಸೋಮೇಶ್ವರ ; ಮನೆ, ಮನೆಗೆ ಕ್ರೈಸ್ತ ಧರ್ಮ ಪ್ರಚೋದಿತ ಕರಪತ್ರ, ಪುಸ್ತಕ ಹಂಚಿದ ಅಪರಿಚಿತ ! ಬಜರಂಗದಳ ಕಾರ್ಯಕರ್ತರ ಆಕ್ರೋಶ
Christian Letters, Bible, and Magazine found at outside homes in Thokottu after Someshwara VHP demands arrest. Recently the same were found in houses at Someshwara.
07-11-25 09:59 pm
HK News Desk
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm