ಬ್ರೇಕಿಂಗ್ ನ್ಯೂಸ್
29-09-21 05:50 pm Headline Karnataka News Network ಕ್ರೈಂ
ಬೆಂಗಳೂರು, ಸೆ. 29: ಹಣಕ್ಕಾಗಿ ವಕೀಲರೊಬ್ಬರನ್ನು ಅಪಹರಿಸಿ 30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಬಿಲ್ಡರ್, ಫೈನಾನ್ಷಿಯರ್, ಐಟಿ ಕಂಪನಿ ಮಾಲೀಕ, ಗ್ಯಾಂಗ್ ಆರ್ಟಿಸ್ಟ್ ಮತ್ತು ಬೌನ್ಸರ್ಗಳು ಸೇರಿದಂತೆ 9 ಮಂದಿಯ ಗ್ಯಾಂಗ್ ಅನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಿಗಳರ ಪಾಳ್ಯ ಕರಿಹೋಬನಹಳ್ಳಿ ವಾಸಿ ಸಿದ್ದೇಶ್ (31), ಡಾಲರ್ಸ್ ಕಾಲೋನಿ 2ನೆ ಮೈನ್ ವಾಸಿ ವಿಜಯ್ಕುಮಾರ್.ಜಿ (33), ಬೊಮ್ಮನಹಳ್ಳಿ ನಿವಾಸಿ ಸಂಜಯ್.ಎಸ್ ಅಲಿಯಾಸ್ ಸಂಜು (27), ಶಾಂತಿಪ್ರಿಯ ಲೇಔಟ್ನ ನೆಲ್ಸನ್ಕುಮಾರ್.ಎಫ್ ಅಲಿಯಾಸ್ ನೆಲ್ಸನ್ (23), ಕತ್ರಿಗುಪ್ಪೆಯ ಯುಗಾನಂದ್.ಜಿ (22), ಬೆಟ್ಟಹಳ್ಳಿ ಲೇಔಟ್ ವಾಸಿ ನರೇಶ್ (30), ಜಗಜೀವನರಾಂ ನಗರದ ಅರುಣ್ಕುಮಾರ್.ಎಲ್ ಅಲಿಯಾಸ್ ಅರುಣ (29), ನ್ಯೂ ಗುಡ್ಡದಹಳ್ಳಿಯ ಯುವರಾಜ್.ಆರ್ (31), ಚಿಕ್ಕಮಧುರೆ ಗ್ರಾಮದ ಅಶೋಕ.ಕೆ(31) ಬಂತ ಆರೋಪಿಗಳು.

ನಾಗರಬಾವಿ ಮುಖ್ಯರಸ್ತೆ ಸ್ವಾತಿ ಹೊಟೇಲ್ ಬಳಿ ಸೆಪ್ಟೆಂಬರ್ 20 ರಂದು ಬೆಳಗ್ಗೆ 11.30ರ ಸಮಯದಲ್ಲಿ ವಕೀಲರಾದ ಅಭಯ್ ಆರ್. ಕುಲಕರ್ಣಿ ಎಂಬುವವರನ್ನು ಹಣಕಾಸಿನ ವಿಚಾರಕ್ಕೆ ಈ ಆರೋಪಿಗಳು 2 ಫಾಚ್ರ್ಯೂನರ್ ಕಾರುಗಳಲ್ಲಿ ಬಂದು ಅಪಹರಿಸಿ ಅಕ್ರಮ ಬಂಧನದಲ್ಲಿಟ್ಟಿದ್ದರು.
ನಂತರ ಮೊಬೈಲ್ ಮೂಲಕ ಅಭಯ್ ಆರ್.ಕುಲಕರ್ಣಿ ಅವರ ತಮ್ಮ ವರುಣ್ ಆರ್.ಕುಲಕರ್ಣಿ ಎಂಬುವವರಿಗೆ ಕರೆ ಮಾಡಿ 30 ಲಕ್ಷ ರೂ. ಹಣ ಕೊಡುವಂತೆ ಒತ್ತಾಯಿಸಿದ್ದರು. ಅಲ್ಲದೆ ಬಂಧನದಲ್ಲಿಟ್ಟಿದ್ದ ವ್ಯಕ್ತಿಗೆ ಹಾಕಿ ಸ್ಟಿಕ್ ಹಾಗೂ ಕೈಮುಷ್ಠಿಯಿಂದ ಗುದ್ದಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ್ದರು.

ಈ ಸಂಬಂಧ ವರುಣ್ ಆರ್.ಕುಲಕರ್ಣಿ ಅವರು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ 2 ಬಿಳಿ ಬಣ್ಣದ ಫಾಚ್ರ್ಯೂನರ್ ಕಾರು, 1 ಹಾಕಿ ಸ್ಟಿಕ್, 9 ವಿವಿಧ ಕಂಪೆನಿಗಳ ಮೊಬೈಲ್ ಫೆಪೊನ್ಗಳನ್ನು ವಶಪಡಿಸಿಕೊಂಡು ಅಪಹರಣಕ್ಕೊಳಕಾಗಿದ್ದ ವಕೀಲರನ್ನು ಪೊಲೀಸರು ರಕ್ಷಿಸಿದ್ದಾರೆ.
ಬೆಂಗಳೂರು ಪಶ್ಚಿಮ ವಿಭಾಗದ ಉಪ ಪೊಲೀಸ್ ಕಮೀಷನರ್ ಡಾ.ಸಂಜೀವ್ ಎಂ.ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಕೆಂಗೇರಿ ಗೇಟ್ ಉಪ ವಿಭಾಗದ ಸಹಾಯಕಪೊಲೀಸ್ ಕಮೀಷನರ್ ಯು.ಡಿ.ಕೃಷ್ಣಕುಮಾರ್ ನಿರ್ದೇಶನದಲ್ಲಿ ಅನ್ನಪೂರ್ಣೇಶ್ವರಿ ಠಾಣೆ ಇನ್ಸ್ಪೆಕ್ಟರ್ ಲೋಹಿತ್ ಅವರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
Bengaluru Kidnap Lawyer Kidnap Bengaluru Police Stunt Actors Sandalwood
11-05-26 09:36 pm
HK News Staffer
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
11-05-26 08:05 pm
HK News Staffer
ಗೋವಾ ಸಮುದ್ರದಲ್ಲಿ ಕಾರವಾರದ ಮೀನುಗಾರಿಕಾ ಬೋಟ್ ಪಲ್ಟ...
11-05-26 06:20 pm
ವಾಯುವ್ಯ ಪಾಕಿಸ್ತಾನದಲ್ಲಿ ಭೀಕರ ಭಯೋತ್ಪಾದಕ ದಾಳಿ;...
11-05-26 02:14 pm
ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯ ಗಾಳಿ ; ಬಿಜೆಪಿ ಅಧಿಕ...
10-05-26 09:38 pm
ರಾಹುಲ್ ಗಾಂಧಿ ಸಮ್ಮುಖದಲ್ಲೇ ಪೂರ್ಣ ವಂದೇ ಮಾತರಂ ಹಾಡ...
10-05-26 09:15 pm
12-05-26 12:05 am
Mangalore Correspondent
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
11-05-26 04:58 pm
HK News Staffer
ಉಪ್ಪಿನಂಗಡಿಯಲ್ಲಿ ಭೀಕರ ಅಪಘಾತ; ಕಾರು-ಬೈಕ್ ಡಿಕ್ಕಿ,...
11-05-26 01:08 pm
ಬೆಳ್ತಂಗಡಿ ; ಕ್ಯಾಂಟೀನ್ ನಲ್ಲಿ ವೇಶ್ಯಾವಾಟಿಕೆ ದಂಧೆ...
11-05-26 01:06 pm
ತ್ರಿಶ್ಶೂರಿನಿಂದ ಚಿನ್ನಾಭರಣ ಕದ್ದು ಮಂಗಳೂರಿಗೆ ಬಂದು...
09-05-26 10:29 pm
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm