ಬ್ರೇಕಿಂಗ್ ನ್ಯೂಸ್
12-09-21 12:59 pm Mangaluru Correspondent ಕ್ರೈಂ
ಮಂಗಳೂರು, ಸೆ.12: ಹಳೇ ಸೇಡು ತೀರಿಸಿಕೊಂಡು ಯುವತಿಯನ್ನು ಕಿಡ್ನಾಪ್ ಮಾಡಿಕೊಂಡು ಹೋಗಿದ್ದ ಯುವಕ ಮತ್ತು ಆತನ ಜೊತೆ ಪರಾರಿಯಾಗಿದ್ದ ಯುವತಿಯನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾಲ್ ಬಾಗ್ ನಲ್ಲಿ ತಂದೆ, ತಾಯಿ ಜೊತೆಗಿದ್ದು ಮಂಗಳೂರು ಯುನಿವರ್ಸಿಟಿಯಲ್ಲಿ ಎಂಎಸ್ಸಿ ಕಲಿಯುತ್ತಿದ್ದ ಹುಡುಗಿ ರೇಷ್ಮಾ ಸೆ.23 ರಂದು ನಾಪತ್ತೆಯಾಗಿದ್ದಳು. ಆನಂತರ, ಆಕೆ ತನ್ನ ತಾಯಿ ಕಡೆಯ ಸಂಬಂಧಿಕನೇ ಆಗಿದ್ದ ಅಕ್ಬರ್ ಆಲಿ ಎಂಬವನ ಜೊತೆ ತೆರಳಿದ್ದು ತಿಳಿದುಬಂದಿತ್ತು. ಆದರೆ, ಅದಕ್ಕೂ ಮೊದಲೇ ಹೆತ್ತವರು ನಾಪತ್ತೆ ಜೊತೆಗೆ ಚಿನ್ನದ ಸರ, ಉಂಗುರ, 90 ಸಾವಿರ ನಗದನ್ನು ಹೊತ್ತೊಯ್ದಿದ್ದಾಗಿ ದೂರು ದಾಖಲಿಸಿದ್ದರು. ಎರಡು ದಿನದ ಹಿಂದಷ್ಟೇ ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥ ಆಗಿದ್ದು ಎರಡು ದಿನದಲ್ಲೇ ನಾಪತ್ತೆಯಾಗಿದ್ದಾಗಿ ದೂರಿನಲ್ಲಿ ತಿಳಿಸಿದ್ದರು.
ಪೊಲೀಸರು ಕೇಸು ದಾಖಲಿಸಿ, ಹುಡುಕಾಟ ನಡೆಸಿದ್ದರು. ಆನಂತರ, ಹುಡುಗಿಯನ್ನು ತಾಯಿಯ ಅಣ್ಣ ಮತ್ತು ಆತನ ಸಂಬಂಧಿಕರೇ ಸೇರಿ ಹಳೇ ಸೇಡು ತೀರಿಸಿಕೊಳ್ಳಲು ಈ ರೀತಿ ಕಿಡ್ನಾಪ್ ಮಾಡಿದ್ದರು. ಆಕೆಯನ್ನು ಮನವೊಲಿಸಿ, ಸೋದರ ಸಂಬಂಧಿಯಾಗಿದ್ದ ಅಕ್ಬರ್ ಆಲಿ ಎಂಬಾತನ ಜೊತೆಗೆ ಮದುವೆ ಮಾಡಲು ಮುಂದಾಗಿದ್ದು ತಿಳಿದುಬಂದಿತ್ತು. ಅಲ್ಲದೆ, ಹುಡುಗಿ ರೇಷ್ಮಾ ಕೂಡ ತಾನು ಮೇಜರ್ ಆಗಿದ್ದು ಯಾರ ಜೊತೆಗೆ ಮದುವೆಯಾಗಬೇಕೆಂದು ನಾನೇ ನಿರ್ಧರಿಸುತ್ತೇನೆ ಎಂದು ಹೇಳಿಕೆ ನೀಡಿದ್ದರಿಂದ ಹೆತ್ತವರು ಕೂಡ ಅಸಹಾಯಕರಾಗಿದ್ದರು. ಗದಗ ಮೂಲದವರೇ ಆಗಿದ್ದರೂ ತಾಯಿ ಮೂಲತಃ ಮುಸ್ಲಿಂ ಆಗಿದ್ದು ಹಿಂದು ವ್ಯಕ್ತಿಯನ್ನು ಮದುವೆಯಾಗಿ ಮಂಗಳೂರಿನಲ್ಲಿ ನೆಲೆಸಿದ್ದರು. ಮದುವೆಯಾಗಿ 22 ವರ್ಷಗಳ ನಂತರ ಹಳೆಯ ದ್ವೇಷವನ್ನು ಸೋದರ ಸಂಬಂಧಿಗಳು ಸೇರಿ ಆಕೆಯ ಮಗಳನ್ನು ಮತ್ತೆ ತಮ್ಮದೇ ಹುಡುಗನಿಗೆ ಮದುವೆ ಮಾಡುವ ಮೂಲಕ ತೀರಿಸಿಕೊಂಡಿದ್ದರು.
ಆದರೆ, ಹುಡುಗಿ ಹೆತ್ತವರು ಅಕ್ಬರ್ ಆಲಿ ಬಗ್ಗೆ ಸಂಶಯಿಸಿದ್ದಲ್ಲದೆ, ನಿಶ್ಚಿತಾರ್ಥ ವೇಳೆ ಕೊಟ್ಟಿದ್ದ ಚಿನ್ನಾಭರಣ ಮತ್ತು ಮಗಳ ಖಾತೆಯಲ್ಲಿಟ್ಟಿದ್ದ ಇನ್ಶೂರೆನ್ಸ್ ಹಣವನ್ನು ತೆಗೆದುಕೊಂಡು ಹೋಗಿದ್ದಾಗಿ ದೂರು ನೀಡಿದ್ದರಿಂದ ಕಳ್ಳತನದ ಕೇಸು ದಾಖಲಾಗಿತ್ತು. ಕಳವು ಪ್ರಕರಣದಲ್ಲಿ ಪೊಲೀಸರು ಇದೀಗ ಅಕ್ಬರ್ ಆಲಿ ಮತ್ತು ರೇಷ್ಮಾಳನ್ನು ಹುಬ್ಬಳ್ಳಿಯಲ್ಲಿ ಬಂಧಿಸಿ, ಮಂಗಳೂರಿಗೆ ಕರೆತಂದಿದ್ದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯ ಇಬ್ಬರಿಗೂ ನ್ಯಾಯಾಂಗ ಬಂಧನ ನೀಡಿ
The girl who went missing from Ballalbagh in the city and was found married to a boy from another community recently is in custody of the police along with her husband. Newly married Reshma and her husband Akram are in Barke police custody on the accusation of theft.
20-03-26 06:10 pm
HK News Staffer
ಫೇಸ್ಬುಕ್ ಪೋಸ್ಟ್ನಿಂದ ಹುಟ್ಟಿದ ಜೀವಭಯ ; ನೀಲಿ ‘ಡ...
20-03-26 12:02 pm
ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪ...
20-03-26 12:00 pm
ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿ ; 26...
20-03-26 10:03 am
ಗ್ಯಾಸ್ ಸಿಲಿಂಡರ್ ಅಭಾವ; ಬಹುತೇಕ ಹೋಟೆಲ್ ಗಳು ಬಂದ್...
19-03-26 05:01 pm
20-03-26 05:32 pm
HK News Staffer
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
20-03-26 11:26 pm
HK News Staffer
ಮಂಗಳೂರು ಪೊಲೀಸರ ತನಿಖೆಯ ಮೇಲೆ ನಂಬಿಕೆ ಇಲ್ಲ, ಇವರದ್...
20-03-26 09:44 pm
Peace Festival in Udupi Amid Protests; High C...
20-03-26 07:54 pm
Mohan C Lazarus Udupi, Protest: ಹಿಂಜಾವೇ ಪ್ರತಿ...
20-03-26 07:36 pm
Sandesh PG, Inspector: ಮೂಡುಬಿದ್ರೆ ಇನ್ಸ್ ಪೆಕ್ಟ...
20-03-26 06:56 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm