ಬ್ರೇಕಿಂಗ್ ನ್ಯೂಸ್
28-08-21 04:54 pm Mangaluru Correspondent ಕ್ರೈಂ
ಮಂಗಳೂರು, ಆಗಸ್ಟ್ 28 : ಆಟೋ ಚಾಲನೆ ಮಾಡುತ್ತಿದ್ದ ಯುವಕನಿಗೆ ರಾತ್ರಿ ಹೊತ್ತಲ್ಲಿ ವಿಡಿಯೋ ಕರೆ ಬಂದಿತ್ತು. ಯುವತಿಯೊಬ್ಬಳು ಬೆತ್ತಲಾಗುತ್ತಲೇ ಆಟೋ ಚಾಲಕನ ಬಳಿ ಬಟ್ಟೆ ಬಿಚ್ಚುವಂತೆ ಹೇಳಿದ್ದಳು. ಯುವತಿ ಹೇಳಿದ್ದೇ ತಡ, ತಾನೇನೂ ಕಮ್ಮಿಯಿಲ್ಲ ಎಂದು ಬೆತ್ತಲಾಗಿದ್ದ. ಬಳಿಕ ಆಕೆಯೊಂದಿಗೆ ಸೆಕ್ಸ್ ಚಾಟಿಂಗ್ ನಡೆಸಿದ್ದ. ಆದರೆ, ಕೆಲವು ದಿನಗಳ ಬಳಿಕ ಆಟೋ ಚಾಲಕನ ವೀಡಿಯೋ ಬಯಲಾಗಿತ್ತು.
ಇದೊಂದು ಹೊಸ ಮಾದರಿಯ ಹೈಟೆಕ್ ಹನಿಟ್ರ್ಯಾಪ್ ಆಗಿದ್ದು ಅದರಲ್ಲಿ ಆಟೋ ಚಾಲಕ ಸಿಕ್ಕಿಬಿದ್ದಿದ್ದಾನೆ. ಶ್ರೀಮಂತರನ್ನೇ ಟಾರ್ಗೆಟ್ ಮಾಡುತ್ತಿದ್ದ ಹನಿಟ್ರ್ಯಾಪ್ ಜಾಲ ಈಗ ಜನಸಾಮಾನ್ಯರ ಬೆನ್ನು ಬಿದ್ದಿದೆ. ಕಡಬ ತಾಲೂಕಿನ ಆಟೋ ಚಾಲಕನೊಬ್ಬ ಹುಡುಗಿಯ ಬಣ್ಣನೆ ಮಾತಿಗೆ ಮರುಳಾಗಿ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿದ್ದ.

ವಾಟ್ಸಪ್ ಕರೆ, ಮೆಸೇಜ್ ಮೂಲಕ ಆಟೋ ಚಾಲಕನಿಗೆ ಪರಿಚಯವಾಗಿದ್ದ ಹುಡುಗಿ ಇತ್ತೀಚೆಗೆ ರಾತ್ರಿ ವೇಳೆ ವಿಡಿಯೋ ಕಾಲ್ ಮಾಡಿದ್ದಳು. ತನ್ನನ್ನು ತಾನು ಯುವತಿ ಅರೆ ಬೆತ್ತಲು ಮಾಡಿಕೊಂಡಿದ್ದು, ಆಟೋ ಚಾಲಕನಿಗೂ ಬೆತ್ತಲಾಗುವಂತೆ ಪ್ರೇರಣೆ ನೀಡಿದ್ದಳು. ಬಳಿಕ ಅಶ್ಲೀಲ ಚಾಟಿಂಗನ್ನೂ ಮಾಡಿದ್ದ. ಗುರುತು ಪರಿಚಯ ಇರದಿದ್ದರೂ, ಹುಡುಗಿ ಜೊತೆ ಸಲುಗೆಯ ಮಾತನಾಡಿದ್ದ.
ಆದರೆ, ಬೆತ್ತಲೆ ವಿಡಿಯೋವನ್ನು ರೆಕಾರ್ಡ್ ಮಾಡಿದ್ದ ತಂಡ ಹಣಕ್ಕಾಗಿ ಡಿಮ್ಯಾಂಡ್ ಇಟ್ಟಿದೆ. ಆದರೆ ಆಟೋ ಚಾಲಕ ಇದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ. ವಾರ ಕಳೆಯುವಷ್ಟರಲ್ಲಿ ಆಟೋ ಚಾಲಕನ ಬೆತ್ತಲೆ ವಿಡಿಯೋ ಜಾಲತಾಣದಲ್ಲಿ ಬಂದಿತ್ತು. ಈತನ ವಿಡಿಯೋವನ್ನು ದುಷ್ಕರ್ಮಿಗಳು ಹರಿಯಬಿಟ್ಟಿದ್ದರು. ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣ ಹೆಚ್ಚುತ್ತಿದ್ದು, ಹುಡುಗಿ ಮಾತು ಕೇಳಿ ಬೆತ್ತಲಾಗಲು ಹೋದರೆ ಇಡೀ ಸಮಾಜದ ಮುಂದೆ ಬೆತ್ತಲಾಗುವ ಸ್ಥಿತಿ ಬರುತ್ತದೆ.
Mangalore Honey trap on WhatsApp Auto-driver goes naked video goes viral. She was introduced to him via Whatsapp calls and then she came naked on video call told him to go naked.
03-02-26 11:53 am
Bangalore Correspondent
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
Manjeshwar Murder: ಆಸ್ತಿ ವಿಚಾರದಲ್ಲಿ ಗಲಾಟೆ ; ಬ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
03-02-26 11:55 am
HK News Desk
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
03-02-26 11:31 am
Mangalore Correspondent
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm