ಬ್ರೇಕಿಂಗ್ ನ್ಯೂಸ್
17-08-21 02:34 pm Mangaluru Correspondent ಕ್ರೈಂ
ಮಂಗಳೂರು, ಆಗಸ್ಟ್ 17: ಲಿಥುವಾನಿಯಾದಲ್ಲಿ ಕೆಲಸ ಇದೆಯೆಂದು ಹೇಳಿ ಮಹಿಳೆಯೊಬ್ಬರಿಂದ ಎರಡು ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ನಕಲಿ ಏಜನ್ಸಿಯನ್ನು ಪೊಲೀಸರು ಪತ್ತೆ ಮಾಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ನಗರದ ಬಲ್ಮಠದಲ್ಲಿ ಜೀರೇ ಪಾತ್ ವೇ ಅಬ್ರಾಡ್ ಅಫೀಸ್ ಎಂಬ ಹೆಸರಲ್ಲಿ ಕಚೇರಿ ಮಾಡಿಕೊಂಡಿದ್ದ ಜೆರಿ ಇಥಿಲ್ ಸಿಖಾ ಎಂಬಾತನನ್ನು ಬಂಧಿಸಲಾಗಿದೆ. ಕಳೆದ ಎಪ್ರಿಲ್ ತಿಂಗಳಲ್ಲಿ ಆರೋಪಿ ಜೆರಿ, ಲಿಥುವಾನಿಯಾದಲ್ಲಿ ಆಫೀಸ್ ಕೆಲಸದ ಬಗ್ಗೆ ವರ್ಕ್ ವೀಸಾ ಇದೆ. ಅದಕ್ಕಾಗಿ 5 ಲಕ್ಷ 50 ಸಾವಿರ ರೂಪಾಯಿ ಹಣ ಕೊಡಬೇಕು ಎಂದು ಮಹಿಳೆಯೊಬ್ಬರನ್ನು ನಂಬಿಸಿದ್ದಾರೆ. ಅಲ್ಲದೆ, ತಿಂಗಳಿಗೆ 3 ಲಕ್ಷ 50 ಸಾವಿರ ರೂ. ಸಂಬಳ ಇದೆಯೆಂದು ಹೇಳಿದ್ದರು.
ಇದನ್ನು ನಂಬಿದ ಕಾವೂರು ಮೂಲದ ಮಹಿಳೆ ತನ್ನ ಚಿನ್ನಾಭರಣ ಅಡವಿಟ್ಟು ಒಂದು ಲಕ್ಷ ನಗದು ನೇರವಾಗಿ ಮತ್ತು ಒಂದು ಲಕ್ಷ ರೂ. ಹಣವನ್ನು ನೆಫ್ಟ್ ಮೂಲಕ ಆರೋಪಿಯ ಕಚೇರಿಯ ಬ್ಯಾಂಕ್ ಖಾತೆಗೆ ಸಲ್ಲಿಸಿದ್ದ. ಈ ಬಗ್ಗೆ ದೂರುದಾರ ವ್ಯಕ್ತಿ ಇತ್ತೀಚೆಗೆ ಕೆಲವರಲ್ಲಿ ವಿಚಾರಿಸಿದಾಗ ಜೀರೇ ಪಾತ್ ವೇ ಸಂಸ್ಥೆಯ ಬಗ್ಗೆ ಸಂಶಯ ಮೂಡಿತ್ತು. ಅಲ್ಲದೆ, ಕಳೆದ ವಾರ ಪೊಲೀಸರು ಅಧಿಕೃತ ವೀಸಾ ಏಜನ್ಸಿಗಳ ಬಗ್ಗೆ ಪಟ್ಟಿ ಬಿಡುಗಡೆಗೊಳಿಸಿದ್ದರು. ಇದರಲ್ಲಿ ಜಿರೇ ಪಾತ್ ವೇ ಸಂಸ್ಥೆಯ ಹೆಸರು ಉಲ್ಲೇಖ ಆಗಿರದ ಕಾರಣ ದೂರುದಾರ ಮಹಿಳೆಗೆ ಸಂಶಯ ಬಂದು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಅದರಂತೆ, ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
The Mangalore police have arrested owner of Jireh Pathway Abraod travel agency for cheating woman of Three lakhs stating to send her aboard for Job in Lithuania. The arrested has been identified as Jireh Sika.
22-07-25 11:10 pm
Bangalore Correspondent
GST Notices: ಜಿಎಸ್ಟಿ ತೆರಿಗೆ ನೋಟಿಸ್ ; ವ್ಯಾಪಾರಸ...
22-07-25 10:41 pm
GST Notice, Union Minister Pralhad Joshi: ರಾಜ...
22-07-25 10:30 pm
Mandya Bakery, Cake, Sealed: ಕಲರ್ ಫುಲ್ ಕೇಕ್ ನ...
22-07-25 03:02 pm
Dharmasthala Case, SIT, BJP: ಧರ್ಮಸ್ಥಳ ಪ್ರಕರಣ...
21-07-25 10:38 pm
22-07-25 07:21 pm
HK News Desk
Shashi Tharoor, Thiruvananthapuram: ಶಶಿ ತರೂರ್...
22-07-25 03:04 pm
ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಗೆ ತಡೆ ;...
22-07-25 12:58 pm
ಕೇರಳ ಮಾಜಿ ಮುಖ್ಯಮಂತ್ರಿ, ಶತಾಯುಷಿ, ಸಿಪಿಎಂ ಸ್ಥಾಪಕ...
21-07-25 11:23 pm
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
23-07-25 12:00 pm
Mangalore Correspondent
Dharmasthala SIT Latest News; ಧರ್ಮಸ್ಥಳ ಎಸ್ಐಟಿ...
23-07-25 10:19 am
Puttur Bus News; ಮಂಗಳೂರು-ಪುತ್ತೂರು ಬಸ್ ನಲ್ಲಿ ಯ...
22-07-25 11:13 pm
ಧರ್ಮಸ್ಥಳ ಕೇಸ್ ; ಸಹಾಯವಾಣಿ ಆರಂಭಿಸುವಂತೆ ರಾಜ್ಯ ಸರ...
22-07-25 10:57 pm
Mangalore Yathicorp AI: ಯತಿಕಾರ್ಪ್ ಸಂಸ್ಥೆಯಿಂದ...
22-07-25 09:42 pm
23-07-25 11:36 am
Udupi Correspondent
Mangalore CCB Police, Arrest, Crime: ಸಿಸಿಬಿ ಕ...
22-07-25 09:45 pm
Kalaburagi Jewellery Robbery, Arrest: ಕಲಬುರಗಿ...
22-07-25 12:38 pm
BJP MLA Prabhu Chauhan Son, Rape; ಮದುವೆ ಆಗ್ತೀ...
21-07-25 11:01 pm
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm