ಬ್ರೇಕಿಂಗ್ ನ್ಯೂಸ್
01-07-21 12:55 pm Headline Karnataka News Network ಕ್ರೈಂ
ಚಿಕ್ಕಮಗಳೂರು, ಜುಲೈ 01: ಮೂರೇ ಮೂರು ತಿಂಗಳ ಹಿಂದೆ ಹಸೆಮಣೆ ಏರಿದ್ದವಳು ಇಂದು ಶವವಾಗಿ ಪತ್ತೆಯಾಗಿದ್ದಾಳೆ.
ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ತಮ್ಮ ಮಗಳಿಗೆ ಮದುವೆ ಮಾಡಿಸಿದ್ರು ಅದು ಪ್ರಯೋಜನವಾಗಿಲ್ಲ, ಯಾಕಂದರೆ ತನ್ನ ಗಂಡ ಇನ್ನೊಬ್ಬಳ ಒಟ್ಟಿಗೆ ಸಂಬಂಧ ಬೆಳೆಸಿಕೊಂಡಿದ್ದ. ಅದನ್ನು ಪ್ರಶ್ನಿಸಿದ್ದಕ್ಕೆ ಹೆಂಡತಿ ಸ್ಮಶಾನ ಸೇರಿದ್ದಾಳೆ.
ಕಟ್ಟಿಕೊಂಡ ಗಂಡನ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದೇ ಆಕೆಗೆ ಜೀವಕ್ಕೆ ಮುಳುವಾಗಿದೆ. ಮನೆ ಮುಂದಿನ ನೀರಿನ ತೊಟ್ಟಿಯೇ ಜೀವಕ್ಕೆ ಉರುಳಾಗಿದೆ. ಮಗಳಿಗೆ ಯಾವುದಕ್ಕೂ ಕೊರತೆಯಾಗಬಾರದೆಂದು ಮನೆ ಮಾರಿ ಮದುವೆ ಮಾಡಿಕೊಟ್ಟಿದ್ದ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.
ಹಾಸನ ಜಿಲ್ಲೆ ಬೇಲೂರಿನ ಸೀಮ್ರಾನಾ ಬಾನು ಮೂರು ತಿಂಗಳ ಹಿಂದಷ್ಟೆ ಚಿಕ್ಕಮಗಳೂರಿನ ಫೈರೋಜ್ ಎಂಬುವವನ ಜೊತೆ ವಿವಾಹವಾಗಿದ್ದರು. 3 ತಿಂಗಳು ಕಳೆಯುವಷ್ಟರಲ್ಲಿ ಹೆಣವಾಗಿದ್ದಾಳೆ. ಗಂಡನ ಮನೆಯ ನೀರಿನ ಸಂಪ್ನಲ್ಲಿ ಸಿಮ್ರಾನ್ ಮೃತದೇಹ ಸಿಕ್ಕಿದೆ.
ಬೆಳಗ್ಗೆಯಿಂದ ಸಿಮ್ರಾನ್ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಗಂಡನ ಮನೆಯವರು ಮನೆಯಲ್ಲಿ ಇಲ್ಲ, ಬುರ್ಖಾನೂ ಇಲ್ಲ ಎಂದು ಹೇಳಿದ್ದಾರೆ. ಎಲ್ಲಾ ಕಡೆ ವಿಚಾರಿಸಿ ಅನುಮಾನಗೊಂಡು ಸಿಮ್ರಾನ್ ಗಂಡನ ಮನೆ ಬಳಿ ಹುಡುಕುತ್ತಿದ್ದಾಗ ಸಂಪ್ ಒಳಗೆ ಮೃತದೇಹ ಇರುವುದು ಪತ್ತೆಯಾಗಿದೆ.

ಆಕೆಯ ಶವವನ್ನು ನೋಡಿದ ಪೋಷಕರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯ ಬಳಿಯೇ ಆಕೆಯ ಶವ ಸಿಗುತ್ತಿದ್ದಂತೆ ಸಿಮ್ರಾನ್ ಪತಿ ಫೈರೋಜ್ ಹಾಗೂ ಅವರ ಮನೆಯವರು ಪೇಚಿಗೆ ಸಿಲುಕಿದ್ದಾರೆ. ಸಂಪ್ ಒಳಗೆ ಗೃಹಿಣಿಯ ಮೃತದೇಹ ಸಿಕ್ಕುತ್ತಿದ್ದಂತೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಫೈರೋಜ್ ಹಾಗೂ ಆತನ ತಾಯಿ, ತಂದೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಮದುವೆಯಾದ ಕೆಲವೇ ದಿನಗಳಲ್ಲಿ ತನ್ನ ಅಸಲಿ ಬುದ್ಧಿ ತೋರಿಸಿದ್ದ ಫೈರೋಜ್. ಕೊಟ್ಟಿರೋ ದುಡ್ಡು, ಚಿನ್ನ ಸಾಕಾಗಿಲ್ಲ ಇನ್ನೂ ಬೇಕು ಅಂತ ಪೀಡಿಸುತ್ತಿದ್ದನಂತೆ. ಅಲ್ಲದೇ ಬೇರೆ ಹುಡುಗಿಯರ ಜೊತೆ ಸಂಬಂಧ ಕೂಡ ಇಟ್ಟುಕೊಂಡಿದ್ದ.
ಇದನ್ನ ಪ್ರಶ್ನೆ ಮಾಡಿದ್ದ ಪತ್ನಿ ಜೊತೆ ಗಲಾಟೆ ಮಾಡಿದ್ದ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಇತ್ತೀಚಿಗೆ ಮನೆಗೆ ಬರೋದು ತಡವಾಗುತ್ತಿದ್ದಿದ್ದನ್ನು ಪ್ರಶ್ನೆ ಮಾಡಿದ್ದ ಪತ್ನಿ ಸಿಮ್ರಾನ್ಳನ್ನ ಪತಿ ಫೈರೋಜ್, ಅತ್ತೆ, ಮಾವ, ನಾದಿನಿ ಎಲ್ಲಾ ಸೇರಿ ಕೊಲೆ ಮಾಡಿದ್ದಾರೆ ಅಂತಾ ಮೃತ ಸಿಮ್ರಾನ್ ಸಂಬಂಧಿಕರು ಆರೋಪಿಸಿದ್ದಾರೆ.
ಒಟ್ಟಾರೆ, ಇದ್ದ ಮನೆಯನ್ನು ಮಾರಿ ಮಗಳ ಮದುವೆ ಮಾಡಿದ್ದ ಪೋಷಕರು ಈಗ ಕಣ್ಣೀರು ಹಾಕುತ್ತಿದ್ದಾರೆ. ನಾಲ್ಕು ದಿನಗಳ ಹಿಂದಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡು 22ನೇ ವರ್ಷಕ್ಕೆ ಸಿಮ್ರಾನ್ ಕಾಲಿಟ್ಟಿದ್ದಳು. ನಗು ನಗುತ್ತಾ ಗಂಡನ ಮನೆಯಲ್ಲಿ ಇರಬೇಕಾದ ಗೃಹಿಣಿ ಸಾವನ್ನಪ್ಪಿದ್ದಾಳೆ.
Chikmagalur's Wife found dead in water Sump after questioning her Husband's illicit affair. The couple had married just there months ago. The deceased has been identified as Simran Banu.
18-06-26 09:57 pm
HK News Staffer
ಪರಿಷತ್ ಚುನಾವಣೆ; ಮೈತ್ರಿ ಪಕ್ಷಕ್ಕೆ ತೀವ್ರ ಮುಖಭಂಗ,...
18-06-26 07:15 pm
ಆರೆಸ್ಸೆಸ್ ನೋಂದಣಿ ; ಪ್ರಿಯಾಂಕ ಖರ್ಗೆ ಪತ್ರಕ್ಕೆ ಸಾ...
18-06-26 01:25 pm
Jayadeva Hospital, Mysuru: ಮೈಸೂರಿನ ಜಯದೇವ ಆಸ್ಪ...
18-06-26 01:17 pm
ಧರ್ಮಸ್ಥಳ ಕೇಸ್ ; ಎಡಪಂಥೀಯರ ಒತ್ತಡಕ್ಕೆ ಎಸ್ಐಟಿ, ಷಡ...
17-06-26 10:12 pm
18-06-26 07:17 pm
HK News Staffer
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
18-06-26 12:33 pm
HK News Staffer
ಬಸ್ಸೋ, ಬಸ್ ನಿಲ್ದಾಣವೋ ? ಗುರುಪುರ ಬಂಡಸಾಲೆಯಲ್ಲಿ ವ...
16-06-26 11:35 am
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
18-06-26 01:20 pm
HK News Staffer
ಸ್ಕೂಟರಲ್ಲಿ ನಾಲ್ವರು ಹೆಣ್ಮಕ್ಕಳ ಜಾಲಿ ರೈಡ್; ನಿಯಂತ...
17-06-26 01:41 pm
ವಾಯುಪಡೆ ಅಧಿಕಾರಿ ಪತ್ನಿಗೆ ಅಮಲು ಪದಾರ್ಥ ನೀಡಿ ಅತ್ಯ...
16-06-26 08:32 pm
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm