ಬ್ರೇಕಿಂಗ್ ನ್ಯೂಸ್
18-06-21 04:38 pm Headline Karnataka News Network ಕ್ರೈಂ
ಬೆಂಗಳೂರು, ಜೂನ್ 18: ಹನಿಟ್ರ್ಯಾಪ್ ಮಾಡಿ ಹಣ ಪೀಕಿಸೋಕೆ ಕೆಲವರು ಏನೆಲ್ಲ ಕಸರತ್ತು ಮಾಡುತ್ತಾರೆ ಅನ್ನುವುದನ್ನು ಪೊಲೀಸರು ಕೂಡ ಊಹಿಸಿಕೊಳ್ಳಲು ಸಾಧ್ಯವಾಗಲ್ಲ. ಇಲ್ಲೊಂದು ಯುವ ಜೋಡಿ, ಫೇಸ್ಬುಕ್ ನಲ್ಲಿ ಫ್ರೆಂಡ್ ರೀತಿ ನಾಟಕವಾಡಿ ಬಳಿಕ ಅವರನ್ನೇ ತಮ್ಮ ದಾಳಕ್ಕೆ ಬೀಳಿಸಿ ಬೋಳಿಸುವ ಕೆಲಸ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಯುವತಿಯೊಬ್ಬಳು ನೀಡಿದ ದೂರು ಆಧರಿಸಿ, ಬೆನ್ನು ಬಿದ್ದ ಚಂದ್ರಾ ಲೇಔಟ್ ಠಾಣೆಯ ಪೊಲೀಸರು ಕಾವ್ಯ ಮತ್ತು ಕೃಷ್ಣ ಎಂಬ ಹರಾಮಿ ಯುವಜೋಡಿಯನ್ನು ಬಂಧಿಸಿದ್ದಾರೆ. ಕಾವ್ಯಾ ಫೇಸ್ಬುಕ್ ನಲ್ಲಿ ಆಕ್ಟಿವ್ ಆಗಿದ್ದು, ಸುಂದರಿ ಯುವತಿಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಹೊಸತಾಗಿ ಪರಿಚಯ ಮಾಡಿಕೊಳ್ಳುತ್ತಿದ್ದಳು. ಬಳಿಕ ಪರಿಚಯ, ಸ್ನೇಹಕ್ಕೆ ತಿರುಗಿ ಮನೆಗೇ ಕರೆಯುತ್ತಾಳೆ. ಮನೆಗೆ ಕರೆಸಿ, ಮತ್ತು ಬರಿಸುವ ಜ್ಯೂಸ್ ಕೊಟ್ಟು ತನ್ನ ಗಂಡನಿಂದಲೇ ಕಿರಾತಕ ಕೆಲಸ ಮಾಡಿಸುತ್ತಾಳೆ.

ದೂರು ನೀಡಿದ್ದ ಯುವತಿಗೂ ಆರು ತಿಂಗಳ ಹಿಂದೆ ಫೇಸ್ಬುಕ್ ನಲ್ಲಿ ಕಾವ್ಯಾ ಪರಿಚಯ ಆಗಿತ್ತು. ಸ್ನೇಹ ಬೆಳೆಸಿ ಮನೆಗೆ ಬರುವಂತೆ ಕರೆದಿದ್ದು, ಅಲ್ಲಿ ತೆರಳಿದ್ದಾಗ ಜ್ಯೂಸ್ ಕುಡಿಸಿ ಮಂಪರಿನ ಸ್ಥಿತಿಗೆ ಹೋಗಿದ್ದಳು. ಏನಾಗುತ್ತಿದೆ ಅನ್ನುವ ಪರಿವೆ ಇಲ್ಲದಾಗ, ಆಕೆಯನ್ನು ವಿವಸ್ತ್ರ ಮಾಡಿ ಕಾವ್ಯಾಳ ಗಂಡ ಕೃಷ್ಣ ಮತ್ತು ಸಾಗರ್ ಎಂಬ ಮತ್ತೊಬ್ಬ ಯುವಕ ಜೊತೆಗೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಬಳಿಕ ಯುವತಿ ಬಳಿಯಿದ್ದ ಚಿನ್ನದ ಉಂಗುರ, ಸರ, ಎಟಿಎಂ ಕಾರ್ಡ್ ಅನ್ನು ಆರೋಪಿಗಳು ಕಸಿದಿದ್ದು ಫೋಟೋ ತೋರಿಸಿ ಬೆದರಿಸಿದ್ದಾರೆ. ಬಳಿಕ ಖಾಸಗಿ ಫೋಟೊ ಮತ್ತು ವಿಡಿಯೋವನ್ನು ಪೊಷಕರಿಗೆ ಕಳಿಸ್ತೀವಿ, ಫೇಸ್ಬುಕ್ ನಲ್ಲಿ ಹರಿಯಬಿಡುತ್ತೇವೆ ಎಂದು ಹೇಳಿಕ ಆರು ತಿಂಗಳಿಂದ 4 ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿದ್ದಾರೆ.

ಕಳೆದ ಜನವರಿಯಲ್ಲಿ ಚಂದ್ರಾ ಲೇಔಟ್ ನಲ್ಲಿ ಘಟನೆ ನಡೆದಿತ್ತು. ಆನಂತರ ಬ್ಲಾಕ್ಮೇಲ್ ಮಾಡುತ್ತಾ ಯುವತಿಯಿಂದಲೇ ಯುವಜೋಡಿ ಸೇರಿ ಹಣ ಪೀಕಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಹಳೆ ವಿಡಿಯೋ ತೋರಿಸಿ ಯುವತಿ ಮೇಲೆ ಕೃಷ್ಣ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಳು. ಪೊಲೀಸರು ಈಗ ಯುವಜೋಡಿ ಮತ್ತು ಅವರಿಗೆ ಸಹಾಯ ನೀಡಿದ್ದ ಸಾಗರ್ ನನ್ನು ಬಂಧಿಸಿದ್ದಾರೆ.
Bangalore Young Couple arrested for making Honey Trap big-time business. Their target is on Facebook users by making friendship and then blackmailing. The couple have been arrested by Chandra Layout police station.
10-08-26 07:54 pm
HK News Staffer
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
08-08-26 12:17 pm
HK News Staffer
‘ಪರಿವರ್ತನಾ ಪರಿಸರವಾದ’ ಸಿದ್ಧಾಂತದಡಿ ಭಟ್ಕಳದಲ್ಲಿ ಹ...
08-08-26 12:13 pm
ಹೆಬ್ರಿ ; ಭಾರೀ ಗಾಳಿ ಮಳೆಗೆ ಕಾರಿನ ಮೇಲೆ ಮುರಿದು ಬಿ...
07-08-26 10:13 pm
ವಿದ್ಯುತ್ ಆಘಾತದಿಂದ ಮೃತಪಟ್ಟ ಲೈನ್ಮೆನ್ ಜಮೀರ್ ಮನೆ...
07-08-26 09:26 pm
BC Road Accident, Mangalore: ಬಿಸಿ ರೋಡ್ ಬಳಿ ಟಿ...
06-08-26 11:03 pm
10-08-26 08:49 pm
HK News Staffer
Leopard Bajpe, Mangalore: ಬಜ್ಪೆಯಲ್ಲಿ ಮನೆ ಅಂಗಳ...
10-08-26 07:22 pm
ಬಾರ್ ಮುಂದೆ ತಲವಾರು ಝಳಪಿಸಿ ದಾಂಧಲೆ ; ಪುಡಿ ರೌಡಿ ಶ...
10-08-26 11:09 am
ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದುಕೊಂಡೇ ನಾಲ್ಕು ಪಟ್...
09-08-26 04:47 pm
ಪಾಕ್ ಗೂಢಚಾರಿಣಿ ಮಹಿಳೆಯ ಹನಿಟ್ರ್ಯಾಪ್ ; ರಹಸ್ಯ ಮಾಹ...
09-08-26 04:07 pm