ಬ್ರೇಕಿಂಗ್ ನ್ಯೂಸ್
08-03-21 01:45 pm Mangaluru Correspondent ಕ್ರೈಂ
ಕೊಣಾಜೆ, ಮಾ.8: ಹಿಂದು ಸಂಘಟನೆಯ ಸೋಗಿನಲ್ಲಿದ್ದ ಕಳ್ಳನೊಬ್ಬನನ್ನು ಮೊಂಟೆಪದವಿನ ನಾಗರಿಕರು ಸೆರೆ ಹಿಡಿದು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೊಂಟೆಪದವು ಪರಿಸರದಲ್ಲಿ ಹಲವು ಮನೆಗಳಿಂದ ಕಳ್ಳತನಗೈದ ಆರೋಪ ಹೊತ್ತಿರುವ ಹಿಂದು ಸಂಘಟನೆಯ ಕಾರ್ಯಕರ್ತನಾಗಿದ್ದ ತಾರನಾಥ ಯಾನೆ ಮೋಹನ ಬಂಧಿತ ಆರೋಪಿ.
ತಾರನಾಥ ಹಲವು ಮನೆಗಳಿಂದ ಚಿನ್ನಾಭರಣ, ಅಡಕೆ ಮೂಟೆ, ತನ್ನ ಮಿತ್ರರ ವಾಹನಗಳಿಂದಲೇ ಪೆಟ್ರೋಲ್ ಕದ್ದು ಯಾರಿಗೂ ಸಂಶಯ ಬಾರದಂತೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಶನಿವಾರ ಮೊಂಟೆಪದವಿನ ಮನೆಯೊಂದರ ಅಂಗಳದಲ್ಲಿದ್ದ ಸ್ಕೂಟರ್ ಕದ್ದು ಪರಾರಿಯಾಗಿದ್ದು ಮನೆ ಮಂದಿ ಸಿಸಿಟಿವಿ ಫೂಟೇಜ್ ಪರಿಶೀಲಿಸಿ ಹಲವು ಮಂದಿಯ ಜೊತೆ ಚರ್ಚಿಸಿದಾಗ ಆರೋಪಿ ತಾರನಾಥ ಎಂಬುದನ್ನು ಖಚಿತಪಡಿಸಿಕೊಂಡು ಭಾನುವಾರ ರಾತ್ರಿ ಆತನ ಮನೆಗೆ ಹೋದಾಗ ಪರಾರಿಯಾಗಲು ಯತ್ನಿಸಿದ್ದಾನೆ. ಬೆನ್ನಟ್ಟಿದ್ದ ಸಾರ್ವಜನಿಕರು ಸೆರೆ ಹಿಡಿದು ಕೊಣಾಜೆ ಪೊಲೀಸರ ವಶಕ್ಕೆ ನೀಡಿದ್ದಾರೆ.
ಬಂಧಿತ ಆರೋಪಿ ಈ ಹಿಂದೆ ಗಂಗರಮಜಲು ಪರಿಸರದ ಬಡ ಕುಟುಂಬದ ಮನೆಯಿಂದ ಕಳ್ಳತನಕ್ಕೆ ಯತ್ನಿಸಿದ್ದಾಗ ಮನೆ ಮಂದಿ ಎಚ್ಚರಗೊಂಡಿದ್ದ ವೇಳೆ ತಾನು ಬಂದಿದ್ದ ಸ್ಕೂಟರ್ ಬಿಟ್ಟು ಪರಾರಿಯಾಗಿದ್ದ. ಪೊಲೀಸರಿಗೆ ಹೆದರಿ ಖುದ್ದು ಠಾಣೆಗೆ ಹಾಜರಾದ ಆತನನ್ನು ಕೊಣಾಜೆ ಪೊಲೀಸರು ಮುಚ್ಚಳಿಕೆ ಬರೆಸಿ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದರು. ಕಳ್ಳತನ ಆರೋಪಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ತಾರನಾಥನನ್ನು ಹಿಂದು ಸಂಘಟನೆಯ ಮುಖಂಡರು ಸಂಘಟನೆಯಿಂದ ಉಚ್ಛಾಟಿಸಿದ್ದರು. ಆ ಬಳಿಕ ಸುಮಾರು ಎರಡು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ತಾರನಾಥ ತನ್ನ ಕೃತ್ಯ ಮತ್ತೆ ಮುಂದುವರಿಸಿದ್ದು ಶನಿವಾರ ಸ್ಕೂಟರ್ ಕದ್ದಿದ್ದು, ಸಾರ್ವಜನಿಕರು ಭಾನುವಾರ ರಾತ್ರಿ ಸೆರೆ ಹಿಡಿದು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Hindu organisation member arrested for constant stealing and robbery in Konaje region in Mangalore. The arrested has been identified as Tarnath.
20-06-25 10:36 am
Bangalore Correspondent
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
20-06-25 10:19 pm
HK News Desk
Ayatollah Khamenei; ಭಾರತಕ್ಕೂ ಇರಾನ್ ಮುಖ್ಯಸ್ಥ ಅ...
20-06-25 09:15 pm
ದೆಹಲಿಯ ನ್ಯಾಯಾಧೀಶರ ನಿವಾಸದಲ್ಲಿ ಕಂತೆ ಕಂತೆ ನಗದು ;...
19-06-25 10:58 pm
ಕೇರಳ ಸಿಎಂ ಸ್ವಂತ ಊರಿನಲ್ಲೇ ಮುಸ್ಲಿಂ ಗುಂಪಿನ ನೈತಿಕ...
19-06-25 08:26 pm
Israel-Iran’s War: ಇಸ್ರೇಲಿನ ಅತಿದೊಡ್ಡ ಆಸ್ಪತ್ರೆ...
19-06-25 07:13 pm
20-06-25 11:04 pm
Mangalore Correspondent
Mangalore Forest Guard, Someshwara Beach, U T...
20-06-25 09:54 pm
Tulu, Panchayat, Mangalore, Taranath Gatti K...
20-06-25 09:02 pm
Jeppinamogaru, Accident, Mangalore: ಕುಡಿದ ನಶೆ...
20-06-25 07:10 pm
Chakravarthy Sulibele: ಕುಂದಾಪುರದಲ್ಲಿ ಅಖಂಡ ಭಾರ...
20-06-25 03:54 pm
20-06-25 02:04 pm
Mangalore Correspondent
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm