ಬ್ರೇಕಿಂಗ್ ನ್ಯೂಸ್
16-02-21 10:23 pm Mangaluru Correspondant ಕ್ರೈಂ
ಮಂಗಳೂರು, ಫೆ.16: ಕಾಂಗ್ರೆಸ್ ಮುಖಂಡ ಕಳ್ಳಿಗೆ ತಾರನಾಥ್ ಶೆಟ್ಟಿ ಹಾಗೂ ಹಿರಿಯ ಪತ್ರಕರ್ತ ಐ.ಬಿ. ಸಂದೀಪ್ ಅವರ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು ಅವರದೇ ಹೆಸರಲ್ಲಿ ನಕಲಿ ಖಾತೆ ತೆರೆದು ಆಪ್ತರಲ್ಲಿ ಹಣ ವರ್ಗಾಯಿಸುವಂತೆ ಒತ್ತಾಯಿಸಿದ ವಿಚಾರ ಬೆಳಕಿಗೆ ಬಂದಿದೆ.
ಐ.ಬಿ.ಸಂದೀಪ್ ಹೊಸ ದಿಗಂತ ಪತ್ರಿಕೆಯ ಪುತ್ತೂರು ವರದಿಗಾರರಾಗಿದ್ದು ಅವರ ಹೆಸರಲ್ಲಿ ಬೇರೆಯದ್ದೇ ಖಾತೆ ತೆರೆಯಲಾಗಿದ್ದು ಆಪ್ತರಲ್ಲಿ ಹಣ ಕೇಳಿದ್ದಾರೆ. ಹಣದ ಅಗತ್ಯವಿದೆ, ಗೂಗಲ್ ಪೇ ಅಕೌಂಟ್ ಇದ್ದರೆ ಕೂಡಲೇ ವರ್ಗಾಯಿಸುವಂತೆ ಕೇಳಿಕೊಂಡಿದ್ದರು. ಅಲ್ಲದೆ, ಕೆಲವರು ಬ್ಯಾಂಕ್ ಖಾತೆ ಸಂಖ್ಯೆಯನ್ನು ಕಳಿಸುವಂತೆ ಕೇಳಿಕೊಂಡಿದ್ದಾರೆ. ಎಚ್ ಡಿ ಎಫ್ ಸಿ ಬ್ಯಾಂಕಿನ ಖಾತೆ ಸಂಖ್ಯೆಯನ್ನು ಹ್ಯಾಕರ್ಸ್ ಕಳಿಸಿದ್ದರು. ಆದರೆ, ಹಣ ಕಳಿಸುವ ಮೊದಲು ಮೊಬೈಲ್ ನಂಬರ್ ಇದ್ದವರು ಸಂದೀಪ್ ಅವರನ್ನು ಸಂಪರ್ಕಿಸಿ ಮಾಹಿತಿ ಕೇಳಿದ್ದಾರೆ. ಅಷ್ಟೊತ್ತಿಗೆ, ಫೇಸ್ಬುಕ್ ಹ್ಯಾಕ್ ಆಗಿದ್ದು ಗೊತ್ತಾಗಿದೆ. ಸ್ವತಃ ತನ್ನ ಖಾತೆ ಹ್ಯಾಕ್ ಆಗಿದ್ದು ಯಾರಾದ್ರು ಹಣ ನೀಡುವಂತೆ ಕೇಳಿಕೊಂಡರೆ ತನ್ನನ್ನು ಸಂಪರ್ಕಿಸುವಂತೆ ಹೇಳಿಕೊಂಡಿದ್ದಾರೆ.
ಇದೇ ವೇಳೆ, ಮಂಗಳೂರಿನ ಕಾಂಗ್ರೆಸ್ ಮುಖಂಡ ಕಳ್ಳಿಕೆ ತಾರನಾಥ್ ಶೆಟ್ಟಿಯವರ ಫೇಸ್ಬುಕ್ ಅನ್ನೂ ಯಾರೋ ಹ್ಯಾಕ್ ಮಾಡಿದ್ದು ತನ್ನ ಹೆಸರಲ್ಲಿ ಯಾರಾದ್ರೂ ಹಣ ಕೇಳಿದರೆ ಜಾಗ್ರತೆ ವಹಿಸಿ. ಅಂಥ ಮೆಸೇಜ್ ಹಾಕಿದರೆ ನನ್ನ ಗಮನಕ್ಕೆ ತನ್ನಿ ಎಂದು ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಈ ರೀತಿ ಫೇಸ್ಬುಕ್ ಹ್ಯಾಕ್ ಮಾಡಿ ಹಣ ಕೇಳುವುದು ಕಾಮನ್ ಆಗಿದ್ದು ಆಗಂತುಕರು ದೂರದಲ್ಲಿ ಕುಳಿತು ಹಣ ಪೀಕಿಸುವ ವಿಚಾರ ಕರಾವಳಿಯಲ್ಲಿ ಪೊಲೀಸ್, ಪತ್ರಕರ್ತರು, ರಾಜಕೀಯ ಮುಖಂಡರ ಹೆಸರಲ್ಲಿ ಹಣ ಸಂಗ್ರಹಿಸುವ ಪ್ರಯತ್ನಗಳು ಹಲವು ಬಾರಿ ಬೆಳಕಿಗೆ ಬಂದಿದೆ.
Read: ಮಂಗಳೂರು ಪಾಲಿಕೆ ಉಪಾಯುಕ್ತರ ಹೆಸರಲ್ಲಿ ನಕಲಿ ಐಡಿ ; ಹಲವರಿಂದ ಹಣ ಪೀಕಿಸಿದ ಖದೀಮ !!
Online Fraudsters hack Facebook account of Senior Journalist and Congress leader of Mangalore and demand money from their friends on Facebook using messenger.
04-05-25 09:55 pm
HK News Desk
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
Suhas Shetty Murder, Parameshwar: ಸುಹಾಸ್ ಶೆಟ್...
04-05-25 01:18 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
04-05-25 11:26 pm
Mangalore Correspondent
Mangalore, Hate speech, BJP MLA Harish Poonja...
04-05-25 08:49 pm
Minister Gundu Rao, Mangalore: ಮುಸ್ಲಿಂ ಮುಖಂಡರ...
04-05-25 08:39 pm
Mp Brijesh Chowta, Suhas Shetty Murder: ಆ್ಯಂಟ...
03-05-25 10:57 pm
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm