ಬ್ರೇಕಿಂಗ್ ನ್ಯೂಸ್
11-02-21 03:18 pm Mangalore Correspondent ಕ್ರೈಂ
ಮಂಗಳೂರು, ಫೆ.11; ತುಳು ಚಿತ್ರ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಕನ್ನಡದ ಚಿತ್ರರಂಗದ ಖ್ಯಾತ ನಟಿ ಪದ್ಮಜಾ ರಾವ್ ವಿರುದ್ಧ ಮಂಗಳೂರಿನ ಕೋರ್ಟಿನಲ್ಲಿ ವಂಚನೆ ಕೇಸು ದಾಖಲಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಪದ್ಮಜಾ ರಾವ್, ಚಾಲಿಪೋಲಿಲು ಚಿತ್ರದಲ್ಲಿ ನಟಿಸುತ್ತಿದ್ದಾಗ ಅದರ ನಿರ್ದೇಶನ ಮಾಡುತ್ತಿದ್ದ ವೀರೇಂದ್ರ ಶೆಟ್ಟಿ ಬಳಿಯಿಂದ ಹಣ ಪಡೆದಿದ್ದರು. ವೈಯಕ್ತಿಕವಾಗಿ ಒಂದು ಲಕ್ಷ , ಎರಡು ಲಕ್ಷವೆಂದು ಹಣ ಸಾಲ ಪಡೆದಿದ್ದು, ಹಿಂತಿರುಗಿ ಕೊಟ್ಟಿರಲಿಲ್ಲ. 2018ರಿಂದ 19ರ ನಡುವೆ ಸುಮಾರು 41 ಲಕ್ಷ ರೂಪಾಯಿ ಹಣವನ್ನು ಸಾಲ ಪಡೆದಿದ್ದು, ಹಿಂತಿರುಗಿಸದೆ ವಂಚಿಸಿದ್ದಾರೆಂದು ವೀರೇಂದ್ರ ಶೆಟ್ಟಿ ಮಂಗಳೂರಿನ ಕೋರ್ಟಿನಲ್ಲಿ ದೂರು ದಾಖಲಿಸಿದ್ದಾರೆ.

ಒಂದು ಲಕ್ಷ ರೂ. ಮಾತ್ರ ನಗದು ರೂಪದಲ್ಲಿ ಕೊಟ್ಟಿದ್ದು, ಉಳಿದೆಲ್ಲವನ್ನೂ ಚೆಕ್ ರೂಪದಲ್ಲಿ ನೀಡಿದ್ದೆ. ಅಲ್ಲದೆ, ತನ್ನ ಪ್ರೊಡಕ್ಷನ್ ಹೌಸ್ ವೀರು ಟಾಕೀಸ್ ಹೆಸರಲ್ಲೇ ಹಣವನ್ನು ಸಾಲ ನೀಡಿದ್ದೆ. ಹಾಗಾಗಿ ಹಣ ನೀಡಿದ್ದಕ್ಕೆ ದಾಖಲೆ ಇದೆ. ಬದಲಿಗೆ, ಪದ್ಮಜಾ ರಾವ್ ಖಾಲಿ ಚೆಕ್ ನೀಡಿದ್ದರು. ಕಳೆದ 2020ರ ಸೆಪ್ಟಂಬರ್ ತಿಂಗಳಲ್ಲಿ ಚೆಕ್ ಬೌನ್ಸ್ ಕೇಸು ಮಾಡಿದ್ದು ನೋಟೀಸ್ ಹೋಗಿತ್ತು. ನೋಟಿಸಿಗೆ ಉತ್ತರ ನೀಡದ ಕಾರಣ ಮತ್ತೆ ನವೆಂಬರ್ ನಲ್ಲಿ ವಿಚಾರಣೆಗೆ ಬಂದಿತ್ತು. ಆಗಲೂ ನಟಿ ಕ್ಯಾರ್ ಮಾಡದೆ, ನೋಟೀಸಿಗೆ ಉತ್ತರವನ್ನೂ ನೀಡಿರಲಿಲ್ಲ. ಇದೀಗ ಮಂಗಳೂರಿನ ಜೆಎಂಎಫ್ 5ನೇ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದು, ಬೆಂಗಳೂರಿನ ಕಲಘಟ್ಟ ಪೊಲೀಸರಿಗೆ ಬಂಧಿಸಿ ಕರೆತರುವಂತೆ ಸೂಚನೆ ನೀಡಿದ್ದಾಗಿ ವೀರೇಂದ್ರ ಶೆಟ್ಟಿ ಹೆಡ್ ಲೈನ್ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ.

ಪದ್ಮಜಾ ರಾವ್, ಕನ್ನಡದ ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿದ್ದು ಮುಂಗಾರು ಮಳೆ ಚಿತ್ರದ ಬಳಿಕ ಖ್ಯಾತಿ ಗಳಿಸಿದ್ದರು. ಇತ್ತೀಚೆಗೆ ತುಳು ಚಿತ್ರಗಳಲ್ಲಿಯೂ ಪದ್ಮಜಾ ಕಾಣಿಸಿಕೊಂಡಿದ್ದರು. ಕೋರ್ಟಿನಲ್ಲಿ ಮುಂದಿನ ವಿಚಾರಣೆ ಮಾರ್ಚ್ 9ಕ್ಕೆ ಇದ್ದು, ಪದ್ಮಜಾರನ್ನು ಪೊಲೀಸರು ಬಂಧಿಸಿ ಹಾಜರು ಮಾಡಬೇಕಿದೆ.
The JMF Mangalore court has issued a Non-Bailable warrant against Kannada Actress Padmaja Rao over cheque Bounce Case. She had borrowed loan from Tulu Director Veerendra Shetty Kavoor.
18-03-26 11:00 pm
Supritha Jain
Seraga Sarse Song: ಭಾರೀ ವಿವಾದಕ್ಕೀಡಾದ ಕೆಡಿ ಚಿತ...
18-03-26 09:44 pm
ಚಿಕ್ಕಮಗಳೂರು ; ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ...
18-03-26 07:13 pm
ಸಂತ್ರಸ್ತೆ ದೂರು ಕೊಡಬೇಕಿಲ್ಲ, ಸುಮೊಟೋ ಕೇಸು ದಾಖಲಿಸ...
18-03-26 06:10 pm
ಯುಗಾದಿ ಹಬ್ಬಕ್ಕೆ ಬಸ್ ದರ ಏರಿಕೆ ; ಜೀವಂತ ವ್ಯಕ್ತಿಯ...
18-03-26 03:41 pm
18-03-26 07:11 pm
HK News Staffer
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
ಆರೆಸ್ಸೆಸ್ ಮತ್ತು ಗುಪ್ತಚರ ಸಂಸ್ಥೆ 'ರಾ' ಬ್ಯಾನ್ ಮಾ...
16-03-26 09:30 pm
ಇರಾನ್ ದಾಳಿ ಬಗ್ಗೆ ಎಐ ವಿಡಿಯೋ ಆಧರಿತ ಸುಳ್ಳು ಸುದ್ದ...
16-03-26 02:44 pm
ಯುಪಿಎಸ್ಸಿ ಪಾಸ್, ಐಎಎಸ್ ಅಧಿಕಾರಿ ಆಗುತ್ತೇನೆಂದು ನಂ...
16-03-26 12:38 pm
19-03-26 01:05 pm
HK News Staffer
ಪಿಲಿಕುಳದಲ್ಲಿ ಏಳು ಮುದ್ದಾದ ಮಕ್ಕಳ ತಾಯಿಯಾದ 'ಗೀತಾ'...
18-03-26 10:42 pm
ಬೋಳೂರಿನಲ್ಲಿ ದೈವನರ್ತನ ಮಾಡಿದ್ದು ಕ್ರಿಸ್ತಿಯನ್ ಅಲ್...
18-03-26 03:38 pm
SCS Hospital, Case: ಹೆರಿಗೆ ವೇಳೆ ನವಜಾತ ಶಿಶು ಸಾ...
18-03-26 09:41 am
ಭೂ ವ್ಯವಹಾರದ ವೈಷಮ್ಯ ; ಮೋಸ ಮಾಡಿದ ಸಿಟ್ಟಿನಲ್ಲಿ ಇನ...
17-03-26 10:54 pm
19-03-26 12:16 pm
HK News Staffer
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm