ಬ್ರೇಕಿಂಗ್ ನ್ಯೂಸ್
16-01-21 06:22 pm Mangalore Correspondent ಕ್ರೈಂ
ಮಂಗಳೂರು, ಜ.16: ದೇವಸ್ಥಾನಗಳಿಗೆ ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಹ್ಯಾಂಡ್ ಬ್ಯಾಗ್ ಎಳೆದು ಹಣ ಎಗರಿಸುವ ಪ್ರಕರಣವನ್ನು ಬೆಂಬತ್ತಿದ ಬಜ್ಪೆ ಪೊಲೀಸರು ಗದಗ ಮೂಲದ ಕಳ್ಳರ ಕುಟುಂಬವನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಯಮುನವ್ವ ಮುತ್ತಪ್ಪ ಛಲವಾದಿ (55) , ಪ್ರಕಾಶ್ ಚೆನ್ನಪ್ಪ (27) , ಶೋಭಾ ಮುಟಗಾರ (45), ಕುಮಾರವ್ವ ಮಾರುತಿ ಮೆಟಗಾರ (40), ಶಾಂತಮ್ಮ ಮೆಟಗಾರ(56), ಚಂದ್ರಶೇಖರ್ ಕಮರುಡಿ (49) ಬಂಧಿತರು.


ಜ.12ರಂದು ಯಶೋಧಾ ಗೌಡ ಎಂಬವರು ಕಟೀಲು ದೇವಸ್ಥಾನಕ್ಕೆ ಹೋಗಿದ್ದಾಗ ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷನಿದ್ದ ತಂಡ, ಅವರ ಬ್ಯಾಗ್ ಎಳೆದು ಅದರಲ್ಲಿದ್ದ ನಾಲ್ಕು ಸಾವಿರ ಹಣವನ್ನು ಕಳವು ಮಾಡಿತ್ತು. ಪ್ರಕರಣ ಸಂಬಂಧಿಸಿ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಂಡ ತೂಫಾನ್ ವಾಹನದಲ್ಲಿ ಪರಾರಿಯಾಗಿದ್ದರು ಎಂಬ ಸುಳಿವು ಆಧರಿಸಿ, ತನಿಖೆ ಕೈಗೊಂಡಿದ್ದರು. ಬಳಿಕ ಪೊಳಲಿ ದೇವಸ್ಥಾನದ ಬಳಿ ತೂಫಾನ್ ವಾಹನ ಕಂಡುಬಂದಿದ್ದು ಪೊಲೀಸರು ಅಡ್ಡೂರಿನಲ್ಲಿ ಅಡ್ಡಗಟ್ಟಿ ತಪಾಸಣೆ ನಡೆಸಿದಾಗ ಕುಟುಂಬಸ್ಥರ ಕಳವು ಕೃತ್ಯ ಬಯಲಾಗಿದೆ.


ವಿಚಾರಣೆ ವೇಳೆ, ಇದೇ ತಂಡ ಕೊಲ್ಲೂರು, ಮುರುಡೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಕಡೆಗಳಲ್ಲಿ ಜನ ಸೇರುವ ಉತ್ಸವ ಸಂದರ್ಭ ಮಹಿಳೆಯರ ಬ್ಯಾಗ್ ಕಳವುಗೈದು ಹಣ ಎಗರಿಸುವ ಜಾಲದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಿಂದ ಏಳು ಮೊಬೈಲ್, 71 ಸಾವಿರ ನಗದನ್ನು ವಶಕ್ಕೆ ಪಡೆಯಲಾಗಿದೆ.
Bajpe police arrested six people include four women of Gadag district theft case in the temple premise
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm