ಬ್ರೇಕಿಂಗ್ ನ್ಯೂಸ್
04-04-26 04:36 pm HK News Staffer ಕ್ರೈಂ
ಬೆಂಗಳೂರು, ಎಪ್ರಿಲ್ 4: ಐಟಿ ಕಂಪನಿಯ ಅಧಿಕಾರಿಯೆಂದು ಸುಳ್ಳು ಹೇಳಿ ಸಿಎಸ್ಆರ್ ಫಂಡ್ ಒದಗಿಸುವುದಾಗಿ ಭರವಸೆ ನೀಡಿ ₹6 ಕೋಟಿ ವಂಚಿಸಿದ ಆರೋಪ ಕೇಳಿಬಂದಿದ್ದು ಈ ಬಗ್ಗೆ ಹಲವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
2025ರ ಸೆಪ್ಟೆಂಬರ್ 1 ಮತ್ತು 2026ರ ಮಾರ್ಚ್ 20ರ ನಡುವೆ ವಂಚನೆ ನಡೆದಿದೆ ಎಂದು ಹೇಳಲಾಗಿದ್ದು, ಗಗನ್ ಎನ್ ದೀಪ್ ಎಂಬ ವ್ಯಕ್ತಿಯೊಬ್ಬರು ಇನ್ಫೋಸಿಸ್ ಲಿಮಿಟೆಡ್ನ ಸಿಎಸ್ಆರ್ನ ಪ್ರಾದೇಶಿಕ ಮುಖ್ಯಸ್ಥ ಎಂದು ಹೇಳಿಕೊಂಡು ತಮ್ಮ ಬಳಿ ಬಂದಿದ್ದಾರೆ ಎಂದು ಆರೋಪಿಸಿ ಮೈಸೂರು ಮರ್ಕೆಂಟೈಲ್ ಕಂಪನಿ ಮಾರ್ಚ್ 30 ರಂದು ದೇವನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿತ್ತು.
ಮೂಲಸೌಕರ್ಯ, ಸೌಲಭ್ಯಗಳ ಕಾರ್ಯಾಚರಣೆ, ಸಾರ್ವಜನಿಕ ಸಂಪರ್ಕ ಮತ್ತು ಸಿಎಸ್ಆರ್ ಕಾರ್ಯಗಳ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ಹರ್ಷ ಜೆ ಮತ್ತು ಜಾಗತಿಕ ಮೂಲಸೌಕರ್ಯ ಮತ್ತು ಹವಾಮಾನ ಕ್ರಿಯೆಯ ಹಿರಿಯ ಉಪಾಧ್ಯಕ್ಷ ನೀಲಾದ್ರಿ ಪ್ರಸಾದ್ ಮಿಶ್ರಾ ಎಂಬ ಹಿರಿಯ ಅಧಿಕಾರಿಗಳ ಅಡಿಯಲ್ಲಿ ಕೆಲಸ ಮಾಡಿದ್ದೇನೆ ಎಂದು ಗಗನ್ ದೀಪ್ ಹೇಳಿ ನಂಬಿಸಿದ್ದ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ.
ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ದತ್ತಿ ಚಟುವಟಿಕೆಗಳನ್ನು ತಿಳಿದು, ಅದಕ್ಕೆ ಬೆಂಬಲ ನೀಡಲು ಇನ್ಫೋಸಿಸ್ ಲಿಮಿಟೆಡ್ನಿಂದ ಸಿಎಸ್ಆರ್ ಫಂಡ್ ಒದಗಿಸುವುದಾಗಿ ಆರೋಪಿಗಳು ಭರವಸೆ ನೀಡಿದ್ದಾರೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ. ಆರೋಪಿಗಳು ಇನ್ಫೋಸಿಸ್ ಅನ್ನು ಪ್ರತಿನಿಧಿಸುವ ನಾಲ್ಕರಿಂದ ಐದು ವ್ಯಕ್ತಿಗಳ ತಂಡವನ್ನು ಉಡುಪಿ, ಮಂಗಳೂರು ಮತ್ತು ಇತರ ಸ್ಥಳಗಳಿಗೆ ಟ್ರಸ್ಟ್ನ ಚಟುವಟಿಕೆಗಳನ್ನು ಪರಿಶೀಲಿಸಲು ಕಳುಹಿಸಿದ್ದರು. ಇದರಲ್ಲಿ ಚೇತನ್ ಮತ್ತು ತೇಜಸ್ ಎಂದು ಗುರುತಿಸಲಾದ ವ್ಯಕ್ತಿಗಳು ಇದ್ದಾರೆ ಎಂದು ದೂರಿನಲ್ಲಿ ಹೇಳಿದೆ.
ದೂರಿನ ಪ್ರಕಾರ, ಸಿಎಸ್ಆರ್ ಅನುದಾನಗಳಿಗೆ ಅನುಮೋದನೆ ಪಡೆಯುವುದು ಅಗತ್ಯವೆಂದು ಹೇಳಿಕೊಂಡ ಆರೋಪಿ ದೂರುದಾರರನ್ನು ಇನ್ಫೋಸಿಸ್ನ ನಿಯಮಿತ ವೆಂಡರ್ಸ್ಗೆ ಅರ್ನೆಸ್ಟ್ ಮನಿ ಠೇವಣಿ (ಇಎಂಡಿ) ಪಾವತಿಸುವಂತೆ ಮಾಡಿದ್ದಾರೆ. ಅನಿತಾ ವೆಂಚರ್ಸ್ ಪರವಾಗಿ ಡಿಮಾಂಡ್ ಡ್ರಾಫ್ಟ್ಗಳ ಮೂಲಕ ₹1.75 ಕೋಟಿ ಮತ್ತು ಎಎನ್ಎಸ್ ಎಂಜಿನಿಯರಿಂಗ್ ಪರವಾಗಿ ಡಿಮಾಂಡ್ ಡ್ರಾಫ್ಟ್ಗಳ ಮೂಲಕ ₹3.75 ಕೋಟಿ ಸೇರಿದಂತೆ ಒಟ್ಟು ₹6 ಕೋಟಿ ಪಾವತಿಸಲಾಗಿದೆ. ಇದರ ಹೊರತಾಗಿ ದೇವನಹಳ್ಳಿಯ ನಂದಿ ಉಪಾಚಾರ್ ಹೋಟೆಲ್ ಬಳಿ ಚಾಲಕನ ಮೂಲಕ ಆರೋಪಿಗೆ ₹30 ಲಕ್ಷ ನೀಡಲಾಗಿದೆ ಎಂದು ದೂರುದಾರರು ಹೇಳಿದ್ದಾರೆ.
ಆರೋಪಿಗಳು 2025ರ ಅಕ್ಟೋಬರ್ 21 ರಂದು ನೀಲಾದ್ರಿ ಪ್ರಸಾದ್ ಮಿಶ್ರಾ ಅವರ ಸಹಿ ಇರುವ ಇನ್ಫೋಸಿಸ್ನಿಂದ ಬಂದಿರುವ ಶಂಕಿತ ಮಂಜೂರಾತಿ ಪತ್ರವನ್ನು ನೀಡಿದ್ದಾರೆ ಮತ್ತು ಕರ್ನಾಟಕದಾದ್ಯಂತ 855ಕ್ಕೂ ಹೆಚ್ಚು ಮನೆ ನಿರ್ಮಾಣಕ್ಕಾಗಿ ಇನ್ಫೋಸಿಸ್ ಮತ್ತು ಚಾರಿಟಬಲ್ ಟ್ರಸ್ಟ್ ನಡುವೆ 2026ರ ಜನವರಿ 8 ರಂದು ಒಟ್ಟು ₹179 ಕೋಟಿ ಅನುದಾನ ಒಪ್ಪಂದವನ್ನು ಜಾರಿಗೊಳಿಸಿದ್ದಾರೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ. ಆರೋಪಿಗಳು ಸುಳ್ಳು ಹೇಳಿದ್ದು, ಸಲ್ಲಿಸಿದ ದಾಖಲೆಗಳು ನಕಲಿಯಾಗಿವೆ. ಇಡೀ ವಹಿವಾಟು ವಂಚನೆಯಾಗಿದ್ದು, ಸಿಎಸ್ಆರ್ ಅನುದಾನಗಳಿಗಾಗಿ ಅರ್ನೆಸ್ಟ್ ಮನಿ ಠೇವಣಿ (ಇಎಂಡಿ) ಎಂಬ ಸುಳ್ಳು ನೆಪದಲ್ಲಿ ದೂರುದಾರರಿಂದ ದೊಡ್ಡ ಮೊತ್ತವನ್ನು ದೋಚಲಾಗಿದೆ. ಪದೇ ಪದೆ ಅವರು ಹೇಳಿದಂತೆ ಅನುಸರಿಸಿದರೂ ಯಾವುದೇ ಅನುದಾನ ಬಂದಿಲ್ಲ ಅಥವಾ ನಮ್ಮಿಂದ ಪಡೆದ ಮೊತ್ತವನ್ನು ಹಿಂತಿರುಗಿಸಿಲ್ಲ. ಆರೋಪಿಗಳು ಈಗ ಪ್ರತಿಕ್ರಿಯಿಸುತ್ತಿಲ್ಲ ಮತ್ತು ಉದ್ದೇಶಪೂರ್ವಕವಾಗಿಯೇ ತಪ್ಪಿಸಿಕೊಳ್ಳುತ್ತಿದ್ದಾರೆ' ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
03-04-26 04:14 pm
HK News Staffer
ಬಾಗಲಕೋಟ, ದಾವಣಗೆರೆ ಉಪ ಚುನಾವಣೆ; ಗೆಲುವು ಕಷ್ಟ- ಗು...
03-04-26 03:48 pm
ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಕುಮಾರಸ್ವಾಮಿ- ಎಡಿಜ...
02-04-26 09:31 pm
ನಾನು ಮುಖ್ಯಮಂತ್ರಿಯಾಗಿ ಮುಸ್ಲಿಂ ಅಲ್ಪಸಂಖ್ಯಾತ ಮೀಸಲ...
02-04-26 08:07 pm
ತಮಿಳುನಾಡು ಚುನಾವಣೆಗೆ 44 ಮೀಸಲು ಕ್ಷೇತ್ರದಿಂದ ಕ್ರಿ...
02-04-26 08:03 pm
03-04-26 07:52 pm
HK News Staffer
50 ವರ್ಷಗಳ ಬಳಿಕ ಮಾನವ ಸಹಿತ ಚಂದ್ರಯಾನ; ಅಮೆರಿಕ, ಕೆ...
03-04-26 07:35 am
ಚಿಂತಿಸಬೇಡಿ, ನಿಮ್ಮ ಹಡಗು ಸುರಕ್ಷಿತ; ಹಾರ್ಮುಜ್ ಜಲಸ...
02-04-26 10:24 pm
ಇರಾನ್ ಕದನವಿರಾಮ ಕೇಳುತ್ತಿದೆ, ಒಪ್ಪದಿದ್ದರೆ ಶಿಲಾಯು...
01-04-26 11:03 pm
ಇರಾನ್ ಮೇಲೆ ಅಣ್ವಸ್ತ್ರ ದಾಳಿಗೆ ಅಮೆರಿಕ ಸಿದ್ಧತೆ; ವ...
01-04-26 12:46 pm
03-04-26 11:43 am
HK News Staffer
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು...
01-04-26 09:04 pm
ಮುಸ್ಲಿಂ ಮದುವೆಯಲ್ಲಿ ಕೊರಗಜ್ಜ ದೈವದ ಅನುಕರಣೆ ; ಮದು...
31-03-26 10:06 pm
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
04-04-26 05:42 pm
HK News Staffer
ಅತ್ತೆ, ಮಾವನ ಕಿರುಕುಳಕ್ಕೆ ಬೇಸತ್ತು ಗರ್ಭಿಣಿ ಮಹಿಳೆ...
04-04-26 05:39 pm
ಇನ್ಫೋಸಿಸ್ ಸಿಎಸ್ಆರ್ ಫಂಡ್ ತೆಗೆಸಿಕೊಡುವುದಾಗಿ ವಂಚನ...
04-04-26 04:36 pm
ಮಂಗಳೂರಿನಲ್ಲಿ ಎಪ್ರಿಲ್ 19ರಂದು ಸೀ ಬ್ರೀಜ್ ಮ್ಯಾರಥಾ...
04-04-26 11:32 am
ಮೂರನೇ ಮಗುವೂ ಹೆಣ್ಣಾಗುತ್ತದೆಂದು ಗರ್ಭಿಣಿ ಪತ್ನಿ, ಇ...
03-04-26 11:00 pm