ಮದುವೆಯಾಗೋದಾಗಿ ನಂಬಿಸಿ ಮೋಸ ; ನೀನು ನಂಗೆ ದೈಹಿಕ ತೃಪ್ತಿ ನೀಡುತ್ತಿಲ್ಲ ಎಂದು ಹೇಳಿ ಕೈಕೊಟ್ಟ ಕಾಮಿ ಪ್ರೇಮಿ

24-03-26 02:04 pm       HK News Staffer   ಕ್ರೈಂ

ಯುವತಿಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ ವಂಚನೆ ಮಾಡಿದ್ದ ಆರೋಪಿಯನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು. ಮಾರ್ಚ್ 24: ಯುವತಿಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ ವಂಚನೆ ಮಾಡಿದ್ದ ಆರೋಪಿಯನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

31 ವರ್ಷದ ಜೀವನ್ ವಾಸುದೇವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಹುಳಿಮಾವು ನಿವಾಸಿ ಜೀವನ್ ವಾಸುದೇವ್ ತಮಿಳುನಾಡು ಮೂಲದ ವ್ಯಕ್ತಿಯಾಗಿದ್ದು, ನಗರದಲ್ಲಿ ಜಾಮ್ ಡಾನ್ಸ್ ಸ್ಟುಡಿಯೋ, ಹೌಸ್‌ಕಿಪಿಂಗ್ ಹಾಗೂ ಭದ್ರತಾ ಸಿಬ್ಬಂದಿ ಒದಗಿಸುವ ಸಂಸ್ಥೆಗಳನ್ನು ನಡೆಸುತ್ತಿದ್ದ. 

2018 ರಿಂದ ಸಂತ್ರಸ್ತೆಗೆ ಆರೋಪಿಯ ಪರಿಚಯವಿದ್ದು, 2025ರ ಜೂನ್‌ನಲ್ಲಿ ಆರೋಪಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡು, ಮದುವೆಯಾಗುವುದಾಗಿ ಸಂತ್ರಸ್ತೆಗೆ ಹೇಳಿದ್ದ. ದೂರುದಾರರು ತಾಯಿಯನ್ನೂ ಕೂಡ ಒಪ್ಪಿಸಿದ್ದರು. ಬಳಿಕ, ಆರೋಪಿ ಎಇಸಿಎಸ್ ಲೇಔಟ್‌ನ ಸರ್ವೀಸ್ ಅಪಾರ್ಟಮೆಂಟ್‌ ಮತ್ತು ಹೊಸರೋಡ್‌ನಲ್ಲಿರುವ ಹೋಟೆಲ್‌ಗೆ ಕರೆದೊಯ್ದು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಆ ನಂತರ ಆರೋಪಿಯನ್ನು ಭೇಟಿಯಾದ ಸಂತ್ರಸ್ತೆ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಳು. ಆಗ ಆರೋಪಿ, ನಾನು ನಿನ್ನನ್ನು ಮದುವೆ ಆಗುವುದಿಲ್ಲ. ನೀನು ನನಗೆ ದೈಹಿಕ ತೃಪ್ತಿ ನೀಡುತ್ತಿಲ್ಲ ಎಂದಿದ್ದಲ್ಲದೇ ಆಕೆಯ ನಡತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಸಂತ್ರಸ್ತೆ ದೂರು ನೀಡಿದ ನಂತರ ಆರೋಪಿ ತನ್ನ ಯುವತಿಗೆ ಕೊಲೆ ಮಾಡುವ ಬೆದರಿಕೆ ಹಾಕಿದ್ದ. ಇದರಿಂದ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಈತ ಇದೇ ರೀತಿ ಹಲವಾರು ಮಹಿಳೆಯರಿಗೆ ವಂಚಿಸಿರುವುದು ಕೂಡ ಸಾಬೀತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಬಂಧನದ ನಂತರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಹಾಜರುಮಾಡಲಾಗಿದೆ. ಈ ಪ್ರಕರಣವು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಗಂಭೀರವಾಗಿ ಮುಂದುವರೆಸುತ್ತಿದ್ದಾರೆ.
ಈ ಘಟನೆ ಮಹಿಳಾ ಸುರಕ್ಷತೆ, ವಂಚನೆ ಹಾಗೂ ಮಾನಸಿಕ ದೌರ್ಜನ್ಯದ ಕುರಿತು ನಗರ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸಂತ್ರಸ್ತೆಗೆ ಪೊಲೀಸ್ ಸುರಕ್ಷತೆ ಮತ್ತು ಕಾನೂನು ಸಹಾಯ ಒದಗಿಸಲಾಗಿದ್ದು, ಪ್ರಕರಣದ ಮುಂದಿನ ಬೆಳವಣಿಗೆ ಮೇಲ್ವಿಚಾರಣೆಯಲ್ಲಿ ತರುವಂತೆ ಅಧಿಕಾರಿಗಳು ದೃಢಪಡಿಸಿದ್ದಾರೆ.