ಬ್ರೇಕಿಂಗ್ ನ್ಯೂಸ್
19-03-26 10:38 pm Mangaluru Staffer ಕ್ರೈಂ
ಮಂಗಳೂರು, ಮಾರ್ಚ್ 19: ನಗರದ ಮಣ್ಣಗುಡ್ಡದ ಪೆಟ್ರೋಲ್ ಪಂಪ್ ನಲ್ಲಿ ಗ್ರಾಹಕ ಮತ್ತು ಅಲ್ಲಿನ ಸಿಬಂದಿ ಯುವಕನೊಬ್ಬನ ನಡುವೆ ಮಾರಾಮಾರಿ ಜಗಳ ನಡೆದಿದ್ದು ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಾರ್ಚ್ 13ರಂದು ಘಟನೆ ನಡೆದಿದ್ದು ಬೈಕಿನಲ್ಲಿ ಬಂದಿದ್ದ ಯುವಕನೊಬ್ಬ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕುವಂತೆ ಹೇಳಿದ್ದ. ಆದರೆ ಶಿವರಾಜ್ ಎಂಬ ರಾಯಚೂರು ಮೂಲದ ಪೆಟ್ರೋಲ್ ಹಾಕುವ ಕಾರ್ಮಿಕ 500 ರೂ. ಪೆಟ್ರೋಲ್ ಹಾಕಿದ್ದ. ಈ ವಿಚಾರದಲ್ಲಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಅಲ್ಲಿನ ಇತರ ಸಿಬಂದಿ ಇಬ್ಬರನ್ನೂ ಸಮಾಧಾನಿಸುತ್ತಿದ್ದರೂ ಇಬ್ಬರು ಯುವಕರು ಹೊಡೆದಾಟ ಮಾಡಿದ್ದಾರೆ.




ಸಿಬಂದಿ ಶಿವರಾಜ್ ಮೊದಲು ಮೈಗೆ ಕೈಮಾಡಿದ್ದು ಇದರ ಸಿಟ್ಟಿನಲ್ಲಿ ಗ್ರಾಹಕ ಯುವಕನೂ ತನ್ನ ಗೆಳೆಯರನ್ನು ಕರೆದು ತಿರುಗಿ ಹೊಡೆದಿದ್ದಾನೆ. ಅಲ್ಲಿದ್ದ ಎಲ್ಲ ಸಿಬಂದಿ ಗಲಾಟೆ ನಿಲ್ಲಿಸಲು ಯತ್ನಿಸಿದರೂ ಇಬ್ಬರೂ ರೊಚ್ಚಿಗೆದ್ದವರ ರೀತಿ ಬೈದಾಡುತ್ತ ಹೊಡೆದಾಟ ನಡೆಸಿದ್ದಾರೆ. ಒಳಗಡೆ ಕುಳಿತ ನಂತರವೂ ಸಿಬಂದಿ ಯುವಕನಿಗೆ ಹಲ್ಲೆ ನಡೆಸಲಾಗಿದೆ. ಬಳಿಕ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದ್ದು ಶಿವರಾಜ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಸಂಜೆಯ ವೇಳೆಗೆ ಪೆಟ್ರೋಲ್ ಪಂಪ್ ಮ್ಯಾನೇಜರ್ ಠಾಣೆಗೆ ತೆರಳಿ ಸಿಬಂದಿ ಯುವಕನನ್ನು ಬಿಡಿಸಿ ತಂದಿದ್ದಾರೆ. ಆದರೆ ಈ ರೀತಿ ದುರ್ವರ್ತನೆ ತೋರಿದ್ದಕ್ಕಾಗಿ ಆತನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ.
CCTV captures violent clash at a #petrolpump in #Mangalore #Mannagudda. Argument over fuel amount escalates into a fight between customer and staff. Staffer Shivraj detained, later released and sacked over misconduct. #Mangaluru #CrimeNews pic.twitter.com/EYza31VnRj
— Headline Karnataka (@hknewsonline) March 19, 2026
A violent altercation broke out between a customer and a petrol pump staff member at a fuel station in Mannagudda, Mangaluru, with the entire incident captured on CCTV.
09-05-26 10:41 pm
HK News Desk
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
ಇರು ಅಂದ್ರೆ ಇರ್ತೀನಿ, ಹೈಕಮಾಂಡ್ ಮಾತನ್ನಷ್ಟೇ ಕೇಳ್ತ...
06-05-26 07:41 pm
10-05-26 12:26 pm
HK News Staffer
ತಮಿಳುನಾಡನ್ನು ದೇವರೇ ಕಾಪಾಡಬೇಕು ; ಟಿವಿಕೆ ಗ್ಯಾರಂಟ...
09-05-26 12:06 pm
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ; ಶತ್ರುರಾಷ್ಟ...
09-05-26 11:14 am
ಬಂಗಾಳದಲ್ಲಿ ಕೇಸರಿ ಯುಗಾರಂಭ ; ಮೊದಲ ಬಿಜೆಪಿ ಸಿಎಂ ಆ...
08-05-26 06:45 pm
ದ್ರಾವಿಡರ ನಾಡಲ್ಲಿ ದಳಪತಿ ವಿಜಯ್ ಸರ್ಕಾರ್ ! ಮ್ಯಾಜಿ...
08-05-26 06:38 pm
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
09-05-26 10:29 pm
HK News Desk
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm
ಸಾಲ ಕೊಟ್ಟ ಮಹಿಳೆಯ ಜೀವ ತೆಗೆದ ಕಟುಕರು; ಅಪಘಾತದ ನಾಟ...
09-05-26 08:29 pm
ಆರೋಪಿಯಿಂದಲೇ ಲಂಚ ; ಒಂದು ಲಕ್ಷ ಪಡೆಯುತ್ತಿದ್ದಾಗ ಗು...
09-05-26 06:42 pm
ಸ್ನಾನಕ್ಕೆ ತೆರಳಿದ್ದ ಸ್ನೇಹಿತೆಯರು ನದಿಯಲ್ಲಿ ಮುಳುಗ...
09-05-26 09:54 am