ಬ್ರೇಕಿಂಗ್ ನ್ಯೂಸ್
19-03-26 10:38 pm Mangaluru Staffer ಕ್ರೈಂ
ಮಂಗಳೂರು, ಮಾರ್ಚ್ 19: ನಗರದ ಮಣ್ಣಗುಡ್ಡದ ಪೆಟ್ರೋಲ್ ಪಂಪ್ ನಲ್ಲಿ ಗ್ರಾಹಕ ಮತ್ತು ಅಲ್ಲಿನ ಸಿಬಂದಿ ಯುವಕನೊಬ್ಬನ ನಡುವೆ ಮಾರಾಮಾರಿ ಜಗಳ ನಡೆದಿದ್ದು ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಾರ್ಚ್ 13ರಂದು ಘಟನೆ ನಡೆದಿದ್ದು ಬೈಕಿನಲ್ಲಿ ಬಂದಿದ್ದ ಯುವಕನೊಬ್ಬ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕುವಂತೆ ಹೇಳಿದ್ದ. ಆದರೆ ಶಿವರಾಜ್ ಎಂಬ ರಾಯಚೂರು ಮೂಲದ ಪೆಟ್ರೋಲ್ ಹಾಕುವ ಕಾರ್ಮಿಕ 500 ರೂ. ಪೆಟ್ರೋಲ್ ಹಾಕಿದ್ದ. ಈ ವಿಚಾರದಲ್ಲಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಅಲ್ಲಿನ ಇತರ ಸಿಬಂದಿ ಇಬ್ಬರನ್ನೂ ಸಮಾಧಾನಿಸುತ್ತಿದ್ದರೂ ಇಬ್ಬರು ಯುವಕರು ಹೊಡೆದಾಟ ಮಾಡಿದ್ದಾರೆ.




ಸಿಬಂದಿ ಶಿವರಾಜ್ ಮೊದಲು ಮೈಗೆ ಕೈಮಾಡಿದ್ದು ಇದರ ಸಿಟ್ಟಿನಲ್ಲಿ ಗ್ರಾಹಕ ಯುವಕನೂ ತನ್ನ ಗೆಳೆಯರನ್ನು ಕರೆದು ತಿರುಗಿ ಹೊಡೆದಿದ್ದಾನೆ. ಅಲ್ಲಿದ್ದ ಎಲ್ಲ ಸಿಬಂದಿ ಗಲಾಟೆ ನಿಲ್ಲಿಸಲು ಯತ್ನಿಸಿದರೂ ಇಬ್ಬರೂ ರೊಚ್ಚಿಗೆದ್ದವರ ರೀತಿ ಬೈದಾಡುತ್ತ ಹೊಡೆದಾಟ ನಡೆಸಿದ್ದಾರೆ. ಒಳಗಡೆ ಕುಳಿತ ನಂತರವೂ ಸಿಬಂದಿ ಯುವಕನಿಗೆ ಹಲ್ಲೆ ನಡೆಸಲಾಗಿದೆ. ಬಳಿಕ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದ್ದು ಶಿವರಾಜ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಸಂಜೆಯ ವೇಳೆಗೆ ಪೆಟ್ರೋಲ್ ಪಂಪ್ ಮ್ಯಾನೇಜರ್ ಠಾಣೆಗೆ ತೆರಳಿ ಸಿಬಂದಿ ಯುವಕನನ್ನು ಬಿಡಿಸಿ ತಂದಿದ್ದಾರೆ. ಆದರೆ ಈ ರೀತಿ ದುರ್ವರ್ತನೆ ತೋರಿದ್ದಕ್ಕಾಗಿ ಆತನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ.
CCTV captures violent clash at a #petrolpump in #Mangalore #Mannagudda. Argument over fuel amount escalates into a fight between customer and staff. Staffer Shivraj detained, later released and sacked over misconduct. #Mangaluru #CrimeNews pic.twitter.com/EYza31VnRj
— Headline Karnataka (@hknewsonline) March 19, 2026
A violent altercation broke out between a customer and a petrol pump staff member at a fuel station in Mannagudda, Mangaluru, with the entire incident captured on CCTV.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
16-08-26 09:33 pm
Mangaluru Staffer
After Rotten Chicken Scare at KFC, McDonald’s...
16-08-26 08:29 pm
McDonald's City Centre Raid, Mangalore: ಕೆಎಫ್...
16-08-26 08:20 pm
ಫೈವ್ ಸ್ಟಾರ್ ಹೊಟೇಲ್ ರೈಡ್ ಆದ್ರೂ ಕೊಳೆತ ಮಾಂಸ ಇಟ್ಕ...
16-08-26 04:14 pm
ಸ್ವಾತಂತ್ರ್ಯ ದಿನಾಚರಣೆ ವೇಳೆ ವಂದೇ ಮಾತರಂ ಗೀತೆಗೆ ಸ...
16-08-26 03:47 pm
16-08-26 09:03 pm
HK News Staffer
Kfc Raid, City Centre, Mangalore: ಸಿಟಿ ಸೆಂಟರ್...
15-08-26 09:06 pm
ಸ್ವಾತಂತ್ರ್ಯ ದಿನದಂದೇ ಚಾಮರಾಜನಗರದಲ್ಲಿ ಗುಂಡಿನ ಸದ್...
15-08-26 06:11 pm
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm