Karkala Murder, Arrest, Crime: ಹೆಂಡ್ತಿ ಮಕ್ಕಳನ್ನು ತೊರೆದಿದ್ದ ಇಬ್ಬರಿಗೆ ಒಬ್ಬಳದ್ದೇ ಸಖ್ಯ ; ಕಾರ್ಕಳದಲ್ಲಿ ಮಂಗಳೂರು ಮೂಲದ ಫೈನಾನ್ಸರ್ ಹತ್ಯೆ, ಆರೋಪಿ ಬಸ್ ಚಾಲಕ ಬಂಧನ 

26-08-25 10:39 pm       HK News Desk   ಕ್ರೈಂ

ಕಾರ್ಕಳದಲ್ಲಿ ಫೈನಾನ್ಸ್ ನಡೆಸುತ್ತಿದ್ದ ಮಂಗಳೂರು ಮೂಲದ ನವೀನ್ ಪೂಜಾರಿ (45) ಎಂಬವರ ಕೊಲೆ ಪ್ರಕರಣ ಸಂಬಂಧಿಸಿ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ತಡರಾತ್ರಿ ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ಹತ್ಯೆ ನಡೆದಿತ್ತು. 

ಕಾರ್ಕಳ, ಆ.26  : ಕಾರ್ಕಳದಲ್ಲಿ ಫೈನಾನ್ಸ್ ನಡೆಸುತ್ತಿದ್ದ ಮಂಗಳೂರು ಮೂಲದ ನವೀನ್ ಪೂಜಾರಿ (45) ಎಂಬವರ ಕೊಲೆ ಪ್ರಕರಣ ಸಂಬಂಧಿಸಿ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ತಡರಾತ್ರಿ ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ಹತ್ಯೆ ನಡೆದಿತ್ತು. 

ಪರೀಕ್ಷಿತ್ ಸಂಜೀವ ಗೌಡ ಬಂಧಿತ ಆರೋಪಿ. ಈತನೂ ಮಂಗಳೂರು ಮೂಲದವನಾಗಿದ್ದು ವೃತ್ತಿಯಲ್ಲಿ ಬಸ್ ಚಾಲಕನಾಗಿದ್ದ. ತನ್ನ ಪತ್ನಿಯನ್ನು ತೊರೆದು ಕಾರ್ಕಳದ ದೂಪದಕಟ್ಟೆ ಎಂಬಲ್ಲಿ ಒಂಟಿಯಾಗಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಇತ್ತ ನವೀನ್ ಪೂಜಾರಿ ಕೂಡ ಪತ್ನಿ, ಮಕ್ಕಳನ್ನು ಬಿಟ್ಟು ಒಬ್ಬಂಟಿ ನೆಲೆಸಿದ್ದರು‌‌. ಈ ಸಂದರ್ಭದಲ್ಲಿ ಇವರಿಬ್ಬರಿಗೂ ಒಬ್ಬಳು ಹೆಣ್ಣಿನ ಸಂಪರ್ಕ ಆಗಿತ್ತು. ಆ ಮಹಿಳೆ ಇಬ್ಬರೊಂದಿಗೂ ಸಲುಗೆಯಿಂದ ಇದ್ದಳು. 

ಇದೇ ವಿಚಾರದಲ್ಲಿ ಪರೀಕ್ಷಿತ್ ಮತ್ತು ನವೀನ್ ಪೂಜಾರಿ ನಡುವೆ ಜಗಳವಾಗಿತ್ತು. ಪರೀಕ್ಷಿತ್ ಅದೇ ಸಿಟ್ಟಿನಲ್ಲಿ ಚೂರಿಯಿಂದ ಇರಿದು ಹತ್ಯೆ ಮಾಡಿದ್ದ ಎನ್ನುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಸಿಸಿಟಿವಿ ದಾಖಲೆ ಮತ್ತು ತಾಂತ್ರಿಕ ಸಾಕ್ಷ್ಯ ಆಧರಿಸಿ ಕಾರ್ಕಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ‌

A Mangaluru-based financier, Naveen Poojary (45), was brutally murdered in Karkala late Monday night. Police have arrested the accused, a bus driver identified as Parikshit Sanjeev Gowda, in connection with the murder.