ಬ್ರೇಕಿಂಗ್ ನ್ಯೂಸ್
29-05-25 02:16 pm Mangalore Correspondent ಕ್ರೈಂ
ಪುತ್ತೂರು, ಮೇ 29 : ಬಕ್ರೀದ್ ಹಬ್ಬಕ್ಕಾಗಿ ಆಡುಗಳನ್ನು ಖರೀದಿಸಲು ರಾಜಸ್ಥಾನಕ್ಕೆ ತೆರಳಿದ್ದ ಉಪ್ಪಿನಂಗಡಿಯ ಯುವಕರಿಬ್ಬರನ್ನು ಹಿಡಿದಿಟ್ಟು ಬ್ಲಾಕ್ಮೇಲ್ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಮನೆಯವರು ಆತಂಕಗೊಂಡು ಪೊಲೀಸರ ಗಮನಕ್ಕೆ ತಂದಿದ್ದಾರೆ. 34ನೇ ನೆಕ್ಕಿಲಾಡಿಯ ಮಹಮ್ಮದ್ ಆರಿಸ್ ಝುಬೈರ್ ಮತ್ತು ಆತನ ಸ್ನೇಹಿತರು ರಾಜಸ್ಥಾನದಲ್ಲಿ ಸಿಕ್ಕಿಬಿದ್ದಿದ್ದು, ಝುಬೈರ್ ತಂದೆ ಇಬ್ರಾಹಿಂ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಮಹಮ್ಮದ್ ಝುಬೈರ್ ಮತ್ತು ಅವರ ಸ್ನೇಹಿತರು ಆಡುಗಳನ್ನು ಖರೀದಿಸಲೆಂದು ರಾಜಸ್ಥಾನಕ್ಕೆ ತೆರಳಿದ್ದು, ಅಲ್ಲಿನ ವ್ಯಕ್ತಿಯೊಂದಿಗೆ ಆಡುಗಳನ್ನು ತರಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದರು. ಇದರಂತೆ, ಲಾರಿ ಬಾಡಿಗೆ ಸಲುವಾಗಿ 2 ಲಕ್ಷ ರೂ.ಗಳನ್ನು ಮೊದಲೇ ಪಾವತಿಸಿದ್ದರು. ಆಡುಗಳು ತಲುಪಿದ ನಂತರ ಉಳಿದ ಹಣವನ್ನು ನೀಡುವುದಾಗಿ ತೀರ್ಮಾನಿಸಲಾಗಿತ್ತು. ಆದರೆ ಝುಬೈರ್ ಮತ್ತು ಸ್ನೇಹಿತರು ರಾಜಸ್ಥಾನ ತಲುಪಿದಾಗ, ಅಲ್ಲಿದ್ದವರು ಮಾತು ಬದಲಿಸಿ 10 ಲಕ್ಷ ರೂ. ಮೊದಲೇ ನೀಡಿದರೆ ಮಾತ್ರ ಆಡುಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಈ ವಿಷಯವನ್ನು ಝುಬೈರ್ ತನ್ನ ಕುಟುಂಬಸ್ಥರಿಗೆ ತಿಳಿಸಿದ್ದು, ಇತ್ತ ಕಡೆಯಿಂದ 10 ಲಕ್ಷ ರೂ.ವನ್ನು ಆತನ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು. ಹಣ ತಲುಪಿದ ಕೂಡಲೇ ಆಡುಗಳನ್ನು ಲಾರಿಗೆ ಲೋಡ್ ಮಾಡಿರುವ ಫೋಟೋವನ್ನು ಝುಬೈರ್ ಕುಟುಂಬಸ್ಥರಿಗೆ ರವಾನಿಸಿದ್ದ.
ಆದರೆ ಕೆಲ ಹೊತ್ತಿನಲ್ಲೇ ಅಲ್ಲಿದ್ದ ವ್ಯಕ್ತಿಗಳು ಝುಬೈರ್ ಬಳಿಯಲ್ಲಿ ಮತ್ತೆ 20 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ ಆಡುಗಳನ್ನೂ ಕೊಡುವುದಿಲ್ಲ. ನಿಮ್ಮನ್ನೂ ಹೋಗಲು ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ. ಈ ಬಗ್ಗೆ ಝುಬೈರ್ ಫೋನಲ್ಲಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಆನಂತರ ಆತನ ಫೋನ್ ಸ್ವಿಚ್ ಆಫ್ ಮಾಡಲಾಗಿತ್ತು. ಆತಂಕಗೊಂಡ ತಂದೆ ಇಬ್ರಾಹಿಂ ಮತ್ತು ಕುಟುಂಬಸ್ಥರು ಉಪ್ಪಿನಂಗಡಿ ಪೊಲೀಸರನ್ನು ಸಂಪರ್ಕಿಸಿದ್ದರು. ಅಲ್ಲಿಂದ ರಾಜಸ್ಥಾನದ ಪೊಲೀಸ್ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ ನೀಡಲಾಗಿತ್ತು. ರಾಜಸ್ಥಾನ ಪೊಲೀಸರಿಗೆ ವಿಷಯ ತಿಳಿಸಿದಾಗ, ಝುಬೈರ್ ಮತ್ತು ಆತನ ಸ್ನೇಹಿತರ ಮೊಬೈಲ್ ಲೊಕೇಶನ್ ಪತ್ತೆಹಚ್ಚಿ ಪೊಲೀಸರು ಅವರನ್ನು ಠಾಣೆಗೆ ಕರೆತಂದಿದ್ದಾಗಿ ಮಾಹಿತಿ ನೀಡಿದ್ದರು. ಆನಂತರ ಪೊಲೀಸರು ಸರಿಯಾಗಿ ಪ್ರತಿಕ್ರಿಯಿಸದೆ ಕರೆ ಕಡಿತಗೊಳಿಸುತ್ತಿದ್ದು, ಇತ್ತ ಕುಟುಂಬಸ್ಥರು ಆತಂಕಗೊಂಡಿದ್ದಾರೆ.
ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಝುಬೈರ್ ಕುಟುಂಬ ಆತಂಕದಲ್ಲಿದ್ದು, ರಾಜಸ್ಥಾನ ಪೊಲೀಸರ ನಡೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದೆ. ಝುಬೈರ್ ಕುಟುಂಬವು ಪುತ್ತೂರು ಶಾಸಕರ ಸಹಾಯ ಕೋರಿದ್ದು, ಸುರಕ್ಷಿತ ವಾಪಸಾತಿಗಾಗಿ ಕೇಳಿಕೊಂಡಿದೆ.
Uppinangady Youth Blackmailed During Goat Purchase Trip to Rajasthan, rs 20 Lakh Demand, No Help from Police, Families Worried.
25-07-25 04:07 pm
Bangalore Correspondent
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
ಕಾಲ್ತುಳಿತ ಪ್ರಕರಣ ; ಆರ್ ಸಿಬಿ, ಡಿಎನ್ಎ, ಕೆಎಸ್ ಸಿ...
24-07-25 08:01 pm
25-07-25 04:40 pm
HK News Desk
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
ಕುಡುಬಿ ಸಮುದಾಯ ಎಸ್ಸಿ ಪಟ್ಟಿಗೆ ಸೇರಿಸಲು ರಾಜ್ಯದಿಂದ...
22-07-25 07:21 pm
25-07-25 06:05 pm
Mangalore Correspondent
Udupi: ಸೊಸೈಟಿಗೆ ಅಡಿಟ್ ಮಾಡಿಕೊಡಲು ಲಂಚ ಬೇಡಿಕೆ ;...
25-07-25 02:25 pm
Terrorist Yasin Bhatkal, Mangalore: 2008ರ ಉಳ್...
24-07-25 10:26 pm
Dharmasthala Case, Investigation, Advocate,...
24-07-25 05:27 pm
Mangalore Indiana Hospital: ಮಂಗಳೂರಿನಲ್ಲಿ ಪ್ರಥ...
24-07-25 11:30 am
24-07-25 10:38 pm
Bangalore Correspondent
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm
Udupi Police, Chaddi Gang: ಉಡುಪಿಗೆ ಎಂಟ್ರಿ ಕೊಟ...
23-07-25 11:36 am