ಬ್ರೇಕಿಂಗ್ ನ್ಯೂಸ್
01-08-20 02:07 pm Headline Karnataka News Network ಕ್ರೀಡೆ
ಹೊಸದಿಲ್ಲಿ: ದಾಖಲೆಗಳಿಗೆ ಪರ್ಯಾಯ ಹೆಸರೇ ಸಚಿನ್ ತೆಂಡುಲ್ಕರ್. ಆದರೆ ಅವರಿಗೆ ಒಲಿಯದ ದಾಖಲೆಗಳೂ ಸಾಕಷ್ಟಿವೆ. ಇದರಲ್ಲಿ ಪ್ರಮುಖವಾದುದೆಂದರೆ, ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಅತೀ ಕಿರಿಯ ಆಟಗಾರನೆಂಬ ದಾಖಲೆ ಸ್ವಲ್ಪದರಲ್ಲೇ ಕೈತಪ್ಪಿದ್ದು. ಇದಕ್ಕೆ ತಾನೇ ಕಾರಣ ಎಂದು ನ್ಯೂಜಿಲ್ಯಾಂಡಿನ ಮಾಜಿ ವೇಗಿ ಡ್ಯಾನಿ ಮಾರಿಸನ್ ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ!
ನಾಯಕ ನೀಡಿದ ಎಚ್ಚರಿಕೆ
‘ಆಗಷ್ಟೇ ಪಾಕಿಸ್ಥಾನ ಪ್ರವಾಸ ಮುಗಿಸಿದ ತೆಂಡುಲ್ಕರ್ ನ್ಯೂಜಿಲ್ಯಾಂಡಿಗೆ ಆಗಮಿಸಿದ್ದರು. ಈ ಹುಡುಗನ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಅಭ್ಯಾಸ ತಂಡದ ನಾಯಕ ಕೆನ್ ರುದರ್ಫೋರ್ಡ್ ಎಚ್ಚರಿಸಿದ್ದರು.
ನನಗೂ 16ರ ಹರೆಯದ ಸಚಿನ್ ಬಗ್ಗೆ ಕುತೂಹಲ ಮೂಡಿತ್ತು. ಆವರು ರಿಚರ್ಡ್ ಹ್ಯಾಡ್ಲಿ ಎಸೆತಗಳನ್ನೂ ದಿಟ್ಟ ರೀತಿಯಲ್ಲಿ ನಿಭಾಯಿಸುತ್ತಿದ್ದರು…’ ಎಂದು ಮಾರಿಸನ್ 1990ರ ಘಟನೆಯನ್ನು ಮೆಲುಕು ಹಾಕಿದ್ದಾರೆ.
29 ವರ್ಷಗಳ ದಾಖಲೆ
ಪ್ರಥಮ ಪಂದ್ಯದಲ್ಲಿ ಸೊನ್ನೆ ಮತ್ತು 24 ರನ್ ಮಾಡಿದ ಸಚಿನ್, ನೇಪಿಯರ್ನ ದ್ವಿತೀಯ ಟೆಸ್ಟ್ನಲ್ಲಿ ಶತಕದತ್ತ ದೌಡಾಯಿಸಿದ್ದರು. ಇದನ್ನು ಸಾಧಿಸಿದ್ದೇ ಆದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ವಿಶ್ವದ ಅತೀ ಕಿರಿಯ ಆಟಗಾರನೆಂಬ ವಿಶ್ವ ದಾಖಲೆ ನಿರ್ಮಾಣಗೊಳ್ಳುತ್ತಿತ್ತು. 1961ರಷ್ಟು ಹಿಂದೆ ಪಾಕಿಸ್ಥಾನದ ಮುಷ್ತಾಕ್ ಮೊಹಮ್ಮದ್ 17 ವರ್ಷ, 78ನೇ ದಿನದಲ್ಲಿ ಬಾರಿಸಿದ ಶತಕದ ದಾಖಲೆ ಪತನಗೊಳ್ಳುತ್ತಿತ್ತು.
88ಕ್ಕೆ ಕೊನೆಗೊಂಡ ಆಟ
’88 ರನ್ ಮಾಡಿ ಆಡುತ್ತಿದ್ದ ತೆಂಡುಲ್ಕರ್ಗೆ ನಾನು ಬೌಲಿಂಗ್ ಮಾಡಲಿಳಿದಿದ್ದೆ. ನನಗೆ 3 ಬೌಂಡರಿಗಳ ರುಚಿ ತೋರಿಸಿ ಶತಕ ಪೂರ್ತಿ ಮಾಡುತ್ತಾರೇನೋ ಎಂಬ ಆತಂಕ ಮನೆಮಾಡಿತ್ತು. ಆದರೆ ಅದೇ ಮೊತ್ತಕ್ಕೆ ನಾನು ಅವರ ವಿಕೆಟ್ ಹಾರಿಸಿದೆ. ಮಿಡ್ ಆಫ್ನಲ್ಲಿದ್ದ ಜಾನ್ ರೈಟ್ ಕ್ಯಾಚ್ ಪಡೆದಿದ್ದರು. ನಾನೊಂದು ದೊಡ್ಡ ಸಾಹಸ ಮಾಡಿದ್ದೆ’ ಎಂದು ಮಾರಿಸನ್ ಖುಷಿಯಿಂದ ಹೇಳಿದರು.
30-05-26 06:45 pm
HK News Staffer
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸರ್ಪ್ರೈಸ್ ಟ್ವಿಸ್ಟ್ ;...
30-05-26 01:14 pm
ಡಿಕೆಶಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ! ವಿಧಾನಸೌಧ ಮೆಟ...
29-05-26 10:41 pm
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
30-05-26 09:52 pm
HK News Desk
Mangalore News, Traffic: ಹೆದ್ದಾರಿ ಅಪಘಾತ ತಡೆಗೆ...
30-05-26 08:06 pm
Master Travels Bus, Mangalore: ಕಾವೂರಿನಲ್ಲಿ ಬಸ...
30-05-26 02:10 pm
ಹಿಂದೆ ವೀರೇಂದ್ರ ಪಾಟೀಲ್ ಗೆ ಆದ ಅವಮಾನ ಈಗ ಸಿದ್ದರಾಮ...
28-05-26 02:45 pm
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am