ಬ್ರೇಕಿಂಗ್ ನ್ಯೂಸ್
13-05-21 11:12 am MYKHEL: Madhukara Shetty ಕ್ರೀಡೆ
ಕಳೆದ 13 ಆವೃತ್ತಿಯ ಐಪಿಎಲ್ನಲ್ಲಿಯೂ ನಿರಾಸೆಯನ್ನು ಅನುಭವಿಸಿಕೊಂಡು ಬಂದಿದ್ದ ಆರ್ಸಿಬಿ ತಂಡ ಈ ಬಾರಿ ಆರಂಭದಿಂದಲೂ ಅದ್ಭುತ ಪ್ರದರ್ಶನವನ್ನು ನೀಡಿಕೊಂಡು ಮುನ್ನುಗ್ಗಿತ್ತು. ಬಲಿಷ್ಠ ತಂಡಗಳಿಗೆ ಸೋಲುಣಿಸುತ್ತಾ ಎಲ್ಲಾ ವಿಭಾಗದಲ್ಲಿಯೂ ಮಿಂಚುತ್ತಾ ಸಾಗಿತ್ತು, ಆದರೆ ಕೊರೊನಾ ವೈರಸ್ನ ಕಾರಣದಿಂದಾಗಿ ಟೂರ್ನಿಯನ್ನು ಮುಂದೂಡಬೇಕಾಯಿತು. ಹೀಗಾಗಿ ಕಪ್ ಗೆಲ್ಲುವ ಕನಸು ಕಾಣುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ.
ಆದರೆ ಈಗ ಆರ್ಸಿಬಿ ಅಭಿಮಾನಿಗಳು ಸಂತಸಪಡುವ ಸುದ್ದಿಯೊಂದು ಬಂದಿದೆ. ಪೈಥಾನ್ ಸಿಮ್ಯೂಲೇಶನ್ ಪ್ರೋಗ್ರಾಮ್ ಮೂಲಕ ಈ ಟೂರ್ನಿಯ ಫಲಿತಾಂಶವನ್ನು ಕಂಡುಕೊಳ್ಳಲಾಗಿದ್ದು ಆರ್ಸಿಬಿ ಟೂರ್ನಿಯ ವಿಜೇತ ತಂಡ ಎಂಬ ಫಲಿತಾಂಶ ಬಂದಿದೆ.

ಆರ್ಸಿಬಿ ಪರ ಫಲಿತಾಂಶ
ಈ ಬಾರಿಯ ಐಪಿಎಲ್ನ 29 ಪಂದ್ಯಗಳು ಮಾತ್ರವೇ ಸಂಪೂರ್ಣವಾಗಿದೆ. ಉಳಿದ 31 ಪಂದ್ಯಗಳ ಆಯೋಜನೆ ಇನ್ನಷ್ಟೇ ಆಗಬೇಕಿದೆ. ಆದರೆ ಈಗಾಗಲೇ ನಡೆದಿರುವ ಪಂದ್ಯಗಳ ಫಲಿತಾಂಶವನ್ನು ಆಧರಿಸಿ ಅದರ ಲೆಕ್ಕಾಚಾರದ ಪ್ರಕಾರವೇ ಪ್ರತಿ ಪಂದ್ಯಗಳ ಫಲಿತಾಂಶವನ್ನು ಕಲೆ ಹಾಕಿ ಈ ರೆಡ್ಡಿಟ್ ಬಳಕೆದಾರ ಆದಿಶ್ ಜೈನ್ ಎಂಬವರು ಪ್ರೋಗ್ರಾಂ ಮಾಡಲು ನಿರ್ಧಾರಿಸಿದರು. ಇದರ ಫಲಿತಾಂಶ ಆರ್ಸಿಬಿ ಪರವಾಗಿದ್ದು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ವಿಜೇತ ತಂಡ ಎಂದು ಘೋಷಿಸಿದೆ.

ಫಲಿತಾಂಶ ಪಡಿದಿದ್ದು ಹೇಗೆ!
ಈ ಫಲಿತಾಂಶವನ್ನು ಪಡೆಯುವ ಸಲುವಾಗಿ ಕಳೆದ ಐದು ವರ್ಷಗಳ ಪ್ರತಿ ಎಸೆತಗಳ ಅಂಕಿಅಂಶಗಳನ್ನು ಬಳಸಲಾಗಿದೆ. ಪ್ರತಿ ಆಟಗಾರನಿಗೂ ವಿಶೇಷ ಗುರುತು ನೀಡಲಾಗಿದ್ದು ಸಿಂಗಲ್ಸ್, ಡಬಲ್ಸ್ ರನ್ಗಳಿಸಿದ ಮಾದರಿ, ಸಿಕ್ಸ್ ಬೌಂಡರಿ ಗಳಿಸಿದ ವಿವರಗಳು ಇತ್ಯಾದಿಯನ್ನು ನೀಡಲಾಗಿದೆ. ಜೊತೆಗೆ ಔಟಾದ ವಿಧಾನವನ್ನು ಬಳಸಿಕೊಂಡು ಈ ಫಲಿತಾಂಶವನ್ನು ಪಡೆಯಲಾಗಿದೆ ಎಂದು ಆದಿಶ್ ಜೈನ್ ವಿವರಿಸಿದ್ದಾರೆ.

ಫೈನಲ್ನಲ್ಲಿ ಡೆಲ್ಲಿ ವಿರುದ್ಧ ಗೆಲುವು
ಈ ಫಲಿತಾಂಶದ ಪ್ರಕಾರ ಮೊದಲ ಕ್ವಾಲಿಫೈಯರ್ನಲ್ಲಿ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಸೆಣೆಸಿದರೆ ಮೊದಲ ಎಲಿಮಿನೇಟರ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದೆ. ಕ್ವಾಲಿಫೈಯರ್ ಎರಡರಲ್ಲಿ ಡೆಲ್ಲಿ ಹಾಗೂ ಪಂಜಾಬ್ ಮುಖಾಮುಖಿಯಾಗಿ ಬಳಿಕ ಫೈನಲ್ ಪಂದ್ಯದಲ್ಲಿ ಡೆಲ್ಲಿ ಹಾಗೂ ಆರ್ಸಿಬಿ ತಂಡಗಳು ಮುಖಾಮುಖಿಯಾಗಿದ್ದು ಆರ್ಸಿಬಿ ಗೆಲುವು ಸಾಧಿಸಿರುವ ಫಲಿತಾಂಶ ಪ್ರಕಟವಾಗಿದೆ.
(Kannada Copy of Mykhel Kannada)
17-04-26 01:39 pm
HK News Staffer
ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಸೇವಾವಧಿ...
16-04-26 10:30 pm
ಫಲಿತಾಂಶ ಬರುವ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್; ದಾ...
16-04-26 09:43 pm
ಎಸ್ಸೆಸ್ಸೆಲ್ಸಿ ತೃತೀಯ ಭಾಷೆಗೆ ಅಂಕ ಬದಲು ಗ್ರೇಡ್ ;...
16-04-26 07:37 pm
ಆದಿಚುಂಚನಗಿರಿಯಲ್ಲಿ 80 ಕೋಟಿ ವೆಚ್ಚದ ಮಂದಿರ ಉದ್ಘಾಟ...
15-04-26 07:05 pm
17-04-26 11:27 am
HK News Staffer
250 ರೋಹಿಂಗ್ಯಾಗಳಿದ್ದ ಬೋಟ್ ಅಂಡಮಾನ್ ಸಮುದ್ರದಲ್ಲಿ...
16-04-26 01:09 pm
AI ಅವಾಂತರ ; ಗೂಗಲ್ 'ಜೆಮಿನಿ' ಅನ್ನೇ ಹೆಂಡತಿ ಎಂದು...
15-04-26 01:18 pm
ಅಮೆರಿಕ - ಇಸ್ರೇಲ್ ದಾಳಿಗೆ ಅವಕಾಶ ; ಗಲ್ಫ್ ರಾಷ್ಟ್ರ...
14-04-26 10:48 pm
ಕ್ಯಾಥೋಲಿಕ್ ಪೋಪ್ ಲಿಯೋ ಒಬ್ಬ ದುರ್ಬಲ ವ್ಯಕ್ತಿ, ರಾಜ...
14-04-26 01:46 pm
17-04-26 03:02 pm
HK News Staffer
ಬೆಳ್ತಂಗಡಿಯಲ್ಲಿ ಎರಡು ಕಡೆ ಭೂಕಬಳಿಕೆ ; ವೀರೇಂದ್ರ ಹ...
17-04-26 12:33 pm
ಎಚ್ಐವಿ ಪೀಡಿತ ಮಕ್ಕಳ ಬಾಳಿಗೆ ಆಸರೆಯಾದ ಮಂಗಳೂರಿನ ತ...
17-04-26 11:25 am
ಆಟೋದಲ್ಲಿ ಒಡವೆಗಳಿದ್ದ ಬ್ಯಾಗ್ ಬಿಟ್ಟು ಹೋಗಿದ್ದ ಮಹಿ...
13-04-26 11:39 pm
ಮದುವೆ ಸಮಾರಂಭಕ್ಕೆ ಬಂದಿದ್ದ ವಾಹನಗಳು ಹೆದ್ದಾರಿಯಲ್ಲ...
13-04-26 12:53 pm
17-04-26 06:48 pm
HK News Staffer
ದೂರವಾಣಿ ಮೂಲಕ ಕರೆ, ಬಾಡಿಗೆ ಮನೆಗಳಲ್ಲಿ ಮೀಟಿಂಗ್ ;...
16-04-26 10:36 pm
ಐಎಎಸ್ ಅಧಿಕಾರಿ ಎಂದು ನಂಬಿಸಿ ಸರ್ಕಾರಿ ವೈದ್ಯರಿಗೆ ವ...
16-04-26 07:35 pm
ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಾಯಿಯನ್ನು ಮೂರನೇ...
16-04-26 12:35 pm
ಮಂತ್ರಾಲಯ ಬಳಿ ಭೀಕರ ಅಪಘಾತ ; ರಾಯರ ದರ್ಶನಕ್ಕೆ ತೆರಳ...
16-04-26 11:21 am