ಬ್ರೇಕಿಂಗ್ ನ್ಯೂಸ್
27-02-21 01:25 pm Source: MYKHEL ಕ್ರೀಡೆ
ಗೋವಾ, ಫೆಬ್ರವರಿ 26: ಹೀರೋ ಇಂಡಿಯನ್ ಸೂಪರ್ ಲೀಗ್ ನ ಕೊನೆಯ ಲೀಗ್ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ನಾರ್ಥ್ ಈಸ್ಟ್ ಯುನೈಟೆಡ್ ತಂಡ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ. ಸುಹೈರ್ ವಾದಕ್ಕೆಪೀಡಿಟ (34ನೇ ನಿಮಿಷ) ಹಾಗೂ ಲಾಲೆಂಗ್ಮಾವಿಯಾ (45ನೇ ನಿಮಿಷ) ಗಳಿಸಿದ ಗೋಲು ತಂಡಕ್ಕೆ ಜಯ ತಂದುಕೊಟ್ಟಿತು.
ಹೀರೋ ಇಂಡಿಯಲ್ ಸೂಪರ್ ಲೀಗ್ ನಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ಎರಡನೇ ಬಾರಿಗೆ ಸೆಮಿಫೈನಲ್ ತಲುಪಿತು. ಗೋವಾ ಮತ್ತು ಹೈದರಾಬಾದ್ ನಡುವಿನ ಪಂದ್ಯದಲ್ಲಿ ಜಯ ಗಳಿಸುವ ತಂಡವು ನಾಲ್ಕನೇ ತಂಡವಾಗಿ ಅಂತಿಮ ನಾಲ್ಕರ ಹಂತ ತಲುಪಲಿದೆ. ಹೈದರಾಬಾದ್ ಒಂದು ವೇಳೆ ಡ್ರಾ ಗಳಿಸಿದರೆ ಗೋವಾದ ಹಾದಿ ಸುಗಮವಾಗಲಿದೆ.
ನಾರ್ಥ್ ಈಸ್ಟ್ ಮುನ್ನಡೆ
ಕೇರಳ ಕೊನೆಯ ಪಂದ್ಯದಲ್ಲೂ ಗೆಲ್ಲುವ ತಂಡದಂತೆ ಜೆಮ್ಷೆಡ್ಪುರ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ ಆಡಲಿಲ್ಲ. ಆದರೆ ಜಯವನ್ನೇ ಗುರಿಯಾಗಿಸಿಕೊಂಡಿರುವ ನಾರ್ಥ್ ಈಸ್ಟ್ ಯುನೈಟೆಡ್ ಅದಕ್ಕೆ ತಕ್ಕುದಾದ ಆಟ ಪ್ರದರ್ಶಿಸಿ 2-0 ಮುನ್ನಡೆ ಕಾಯ್ದುಕೊಂಡಿತು. 34ನೇ ನಿಮಿಷದಲ್ಲಿ ಸುಹೈರ್ ವಾದಕ್ಕೆಪೀಡಿಟ ಗಳಿಸಿದ ಗೋಲಿನಿಂದ ನಾರ್ಥ್ ಈಸ್ಟ್ ಮೊದಲ ಯಶಸ್ಸಿನ ನಡೆ ಪಡೆದುಕೊಂಡಿತು. 45ನೇ ನಿಮಿಷದಲ್ಲಿ ಲಾಲೆಂಗ್ಮಾವಿಯಾ ಗಳಿಸಿದ ಗೋಲು ತಂಡದ ಮುನ್ನಡೆಯನ್ನು ದ್ವಿಗುಣಗೊಳಿಸಿತು. ಇದು ಇದುವರೆಗೂ ಐಎಸ್ಎಲ್ ನಲ್ಲಿ ದಾಖಲಾದ ಅದ್ಭುತ ಗೋಲೆಂದರೆ ತಪ್ಪಾಗಲಾರದು. ಅಪುಯಾ ಎಂದೂ ಕರೆಯಲ್ಪಡುವ ಲಾಲೆಂಗ್ಮಾವಿಯಾ ಇದು ಐಎಸ್ಎಲ್ ನಲ್ಲಿ ಗಳಿಸಿದ ಮೊದಲ ಗೋಲಾಗಿತ್ತು. ಕೇರಳಕ್ಕೆ ಎರಡು ಬಾರಿ ಅವಕಾಶ ಸಿಕ್ಕಿತ್ತಾದರು ಅದನ್ನು ಗೋಲಾಗಿಸುವಲ್ಲಿ ಎಂದಿನಂತೆ ತಂಡ ವಿಫಲವಾಗಿತ್ತು.
ನಾರ್ಥ್ ಈಸ್ಟ್ ಗೆ ಜಯದ ಅಗತ್ಯ
ಈಗಾಗಲೇ ಪ್ಲೇ ಆಫ್ ಸ್ಪರ್ಧೆಯಿಂದ ಹಿಂದೆ ಸರಿದಿರುವ ಕೇರಳ ಬ್ಲಾಸ್ಟರ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಜಯ ಗಳಿಸಿ ಪ್ಲೇ ಆಫ್ ತಲಪುವ ಗುರಿಯೊಂದಿಗೆ ನಾರ್ಥ್ ಈಸ್ಟ್ ಅಂಗಣಕ್ಕಿಳಿಯಿತು. ಇದು ಎರಡೂ ತಂಡಗಳಿಗೂ ಅಂತಿಮ ಲೀಗ್ ಪಂದ್ಯ. ಕೇರಳ ಬ್ಲಾಸ್ಟರ್ಸ್ ತಂಡಕ್ಕೂ ಅಂತಿಮ ಪಂದ್ಯದಲ್ಲಿ ಜಯ ಗಳಿಸಿ ನಿರ್ಗಮಿಸುವ ಹಂಬಲವಿದೆ. ನಾರ್ಥ್ ಈಸ್ಟ್ ತಂಡಕ್ಕೆ ಇಲ್ಲಿ ಸೋಲುವಂತಿಲ್ಲ. ಸೆಮಿಫೈನಲ್ ನಲ್ಲಿ ಸ್ಥಾನ ಪಡೆಯಬೇಕಾದರೆ ಇಲ್ಲಿ ಒಂದು ಅಂಕವನ್ನು ಗಳಿಸಲೇಬೇಕಾಗಿದೆ.
ಪ್ಲೇಆಫ್ಗೆ ಹೆಜ್ಜೆ
19 ಪಂದ್ಯಗಳಿಂದ ನಾರ್ಥ್ ಈಸ್ಟ್ 30 ಅಂಕಗಳನ್ನು ಗಳಿಸಿದ್ದು, ನಾಲ್ಕನೇ ಸ್ಥಾನದಲ್ಲಿದೆ. 5ನೇ ಸ್ಥಾನದಲ್ಲಿರುವ ಹೈದರಾಬಾದ್ ಗಿಂತ ಎರಡು ಅಂಕ ಮೇಲುಗೈ ಸಾಧಿಸಿದ್ದು, ಗೋವಾದೊಂದಿಗೆ ಸಮಬಲ ಸಾಧಿಸಿದೆ. ಕೇರಳ ತಂಡ ಪ್ರಧಾನ ಕೋಚ್ ಕಿಬು ವಿಕುನಾ ಅವರನ್ನು ಕಳೆದುಕೊಂಡಿದ್ದು ಮಧ್ಯಂತರ ಕೋಚ್ ಇಶ್ಫಕ್ ಅಹ್ಮದ್ ಅವರ ಮುಂದಾಳತ್ವದಲ್ಲಿ ತಂಡ ಜಯ ಗಳಿಸಿ ಗೌರವದೊಂದಿಗೆ ನಿರ್ಮಿಸುವ ಗುರಿಹೊಂದಿದೆ.
This News Article Is A Copy Of MYKHEL
16-03-25 12:11 pm
Bangalore Correspondent
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 02:05 pm
Mangalore Correspondent
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
16-03-25 10:43 am
Mangalore Correspondent
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm