ಬ್ರೇಕಿಂಗ್ ನ್ಯೂಸ್
26-02-21 12:02 pm Source: MYKHEL ಕ್ರೀಡೆ
ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನ ಕಳೆದ ಎಂಟು ಪಂದ್ಯಗಳಲ್ಲಿ ಸೋಲು ಕಂಡಿರದ ನಾರ್ಥ್ ಈಸ್ಟ್ ಯುನೈಟೆಡ್ ತಂಡ, ಕಠಿಣ ಪಂದ್ಯಗಳಲ್ಲೂ ಜಯ ಗಳಿಸಿ ಅದ್ಭುತ ಪ್ರದರ್ಶನ ತೋರಿದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಡ್ರಾ ಗಳಿಸಿದರೂ ಪ್ಲೇ ಆಫ್ ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಖಾಲೀದ್ ಜಮೀಲ್ ಕೋಚ್ ಜವಾಬ್ದಾರಿ ವಹಿಸಿಕೊಂಡಾಗಿನಿಂದ ನಾರ್ಥ್ ಈಸ್ಟ್ ಉತ್ತಮ ಪ್ರದರ್ಶಶನ ತೋರುತ್ತಿರುವುದು ಗಮನಾರ್ಹ.
ಕೇರಳ ತಂಡ ಕೊನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಆ ತಂಡವನ್ನು ಹಗುರವಾಗಿ ಪರಿಗಣಿಸಬಾರದು ಎಂದು ಜಮೀಲ್ ತಮ್ಮ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. "ಕೇರಳ ಬ್ಲಾಸ್ಟರ್ಸ್ ತಂಡ ಬಲಿಷ್ಠ ಮತ್ತು ಉತ್ತಮ ತಂಡವಾಗಿದೆ. ಅವರಲ್ಲಿ ಪ್ರತಿಭಾವಂತ ಆಟಗಾರಿದ್ದಾರೆ. ನಾವು ಅದಕ್ಕೆ ಸಜ್ಜಾಗಿರಬೇಕು. ನಾವು ಈ ಪಂದ್ವಯವನ್ನು ಹಗುರವಾಗಿ ಪರಿಗಣಿಸಬಾರದು, ನಾವು ಹೋರಾಟ ನೀಡಬೇಕು,' ಎಂದು ಹೇಳಿದ್ದಾರೆ.

ಜಯಕ್ಕಾಗಿಯೇ ಸಿದ್ಧತೆ ನಡೆಸಿದ್ದೇವೆ
ನಾರ್ಥ್ ಈಸ್ಟ್ ಯುನೈಟೆಡ್ ತಂಡಕ್ಕೆ ಕೇವಲ ಒಂದು ಅಂಕ ಬೇಕಾಗಿರಬಹುದು, ಆದರೆ ಕೇವಲ ಅದಕ್ಕೆ ಮಾತ್ರ ಸೀಮಿತವಾಗಿರಬಾರದು ಎಂದು ಜಮೀಲ್ ಹೇಳಿದ್ದಾರೆ, "ಏನಾದರೂ ಆಗಲಿ ಎಂದು ನಾವು ಯೋಚಿಸುವುದಿಲ್ಲ. ನಾವು ಜಯಕ್ಕಾಗಿಯೇ ಸಿದ್ಧತೆ ನಡೆಸಿದ್ದೇವೆ. ಏನಾದರು ಆಗಲಿ ಎಂಬುದಕ್ಕೆ ಈಗ ಅವಕಾಶ ಇಲ್ಲ. ಉತ್ತಮ ರೀತಿಯಲ್ಲಿ ಹೋರಾಟ ನೀಡಿ ಮೂರು ಅಂಕಗಳನ್ನು ಗಳಿಸುವುದು ನಮ್ಮ ಗುರಿ," ಎಂದು ಜಮೀಲ್ ಹೇಳಿದ್ದಾರೆ.

ಅಜೇಯರಾಗಿರುವುದು ಗುರಿಯಲ್ಲ
ಜಮೀಲ್ ಹಿಂದೆಯೂ ಯಶಸ್ಸನ್ನು ಕಂಡ ಕೋಚ್. ಜಯ ಅಥವಾ ಡ್ರಾ ಗಳಿಸಿ ಒಂಬತ್ತು ಪಂದ್ಯಗಳಲ್ಲಿ ಅಜೇಯರಾಗಿರುವುದು ಗುರಿಯಲ್ಲ. ಪ್ಲೇ ಆಫ್ ತಲುಪಿದ ಮೊದಲ ಭಾರತೀಯ ಮ್ಯಾನೇಜರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಬೇಕು. "ಐಎಸ್ ಎಲ್ ದೊಡ್ಟ ಸವಾಲು ಇದ್ದಂತೆ. ಇಲ್ಲಿ ನಾವು ಸಾಮಾನ್ಯವಾಗಿ ಉತ್ತಮ ತಂಡಗಳೊಂದಿಗೆ ಇರುತ್ತೇವೆ. ಅಲ್ಲಿ ಉತ್ತಮ ಆಟಗಾರರು ಮತ್ತು ಕೋಚ್ ಇರುತ್ತಾರೆ, ಆದ್ದರಿಂದ ಇದು ವಿಭಿನ್ನವಾದ ಸವಾಲು," ಎಂದರು.

ಕೇರಳ ಜಯ ಗಳಿಸಿರಲಿಲ್ಲ
ಕಳೆದ ಏಳು ಪಂದ್ಯಗಳಲ್ಲಿ ಕೇರಳ ಜಯ ಗಳಿಸಿರಲಿಲ್ಲ. ತಂಡ ಈಗ ಕೇವಲ ಗೌರವಕ್ಕಾಗಿ ಆಡುತ್ತಿದೆ. ಇಶ್ಫಾಕ್ ಅಹಮ್ಮದ್ ಅವರು ಋತುವನ್ನು ಮುಗಿಸುವ ಉದ್ದೇಶದಿಂದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. " ಪಂದ್ಯಗಳು ಪ್ರತಿಯೊಬ್ಬರಿಗೂ ಸಮಾನವಾಗಿರುತ್ತದೆ. ನಮಗೆ ಪಂದ್ಯ ಗೆಲ್ಲಲೇಬೇಕಾಗಿದೆ. ಅವರಿಗೂ ಗೆಲ್ಲಬೇಕಾಗಿದೆ. ಅವರಿಗೆ ಗೆಲ್ಲಬೇಕಾದ ಒತ್ತಡವಿದೆ. ನಮಗೆ ಗೆದ್ದು ಋತುವನ್ನು ಗೌರವದೊಂದಿಗೆ ಮುಗಿಸಲು ಮತ್ತೊಂದು ಅವಕಾಶ," ಎಂದರು. "ನಾವು ಅವರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಯೋಚಿಸುವುದಿಲ್ಲ, ನಾವು ನಮಗಾಗಿ ಏನು ಮಾಡಬೇಕೆಂಬುದರ ಬಗ್ಗೆ ಯೋಚಿಸುತ್ತೇವೆ," ಎಂದರು.
This News Article is a Copy of MYKHEL
14-04-26 02:04 pm
HK News Staffer
ಸುಳ್ಯದಲ್ಲಿ ಪಾಳು ಬಾವಿಗೆ ಬಿದ್ದ ಕಾಡಾನೆ; ಅಡ್ಡಲಾಗಿ...
13-04-26 09:49 pm
ಕುಂದಾಪುರದ 111 ವರ್ಷಗಳ ಸರ್ಕಾರಿ ಶಾಲೆಗೆ ಬಂತು ಎಐ ರ...
13-04-26 08:19 pm
ದಾವಣಗೆರೆ ದಕ್ಷಿಣದಲ್ಲಿ ಪ್ರಚಾರದಿಂದ ದೂರ; ಸಿಎಂ ರಾಜ...
13-04-26 04:20 pm
ಪಿಗ್ಮಿ ಏಜೆಂಟರು ಮಧ್ಯವರ್ತಿಗಳಲ್ಲ, ಬ್ಯಾಂಕುಗಳ ನೌಕರ...
12-04-26 07:58 pm
15-04-26 01:18 pm
HK News Staffer
ಅಮೆರಿಕ - ಇಸ್ರೇಲ್ ದಾಳಿಗೆ ಅವಕಾಶ ; ಗಲ್ಫ್ ರಾಷ್ಟ್ರ...
14-04-26 10:48 pm
ಕ್ಯಾಥೋಲಿಕ್ ಪೋಪ್ ಲಿಯೋ ಒಬ್ಬ ದುರ್ಬಲ ವ್ಯಕ್ತಿ, ರಾಜ...
14-04-26 01:46 pm
ಟಿಸಿಎಸ್ ಕಂಪನಿಯಲ್ಲಿ ಹೈಫೈ ಜಿಹಾದ್; ಸೆಕ್ಸ್ ದಂಧೆ,...
13-04-26 10:35 pm
ಬಾಂಗ್ಲಾದಲ್ಲಿ ಮುಸ್ಲಿಂ ಯುವಕರಿಂದಲೇ ಇಬ್ಬರು ಧರ್ಮಗು...
13-04-26 09:07 pm
13-04-26 11:39 pm
Mangalore Correspondent
ಮದುವೆ ಸಮಾರಂಭಕ್ಕೆ ಬಂದಿದ್ದ ವಾಹನಗಳು ಹೆದ್ದಾರಿಯಲ್ಲ...
13-04-26 12:53 pm
Mangalore Live Accident Nantoor: ಓವರ್ ಸ್ಪೀಡ್...
12-04-26 09:05 pm
ಬಂಟ್ವಾಳ ; ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ...
11-04-26 05:05 pm
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
14-04-26 11:16 pm
HK News Desk
ಆರಿಫ್ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ,...
14-04-26 11:52 am
ನಂತೂರು ಭೀಕರ ಅಪಘಾತ ; ಬೈಕ್ ಸವಾರನ ಧಾವಂತಕ್ಕೆ ರಸ್ತ...
14-04-26 11:14 am
ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಪತ್ನಿ ಸೌಮ್ಯಾ ಶೆಟ...
11-04-26 11:14 pm
ಕಾಲೇಜು ಗೆಳತಿಯ ಪ್ರೀತಿ ಹುಚ್ಚಾಟ ; ಮಜಾ ಉಡಾಯಿಸಿದ ಬ...
11-04-26 03:09 pm