ಬ್ರೇಕಿಂಗ್ ನ್ಯೂಸ್
09-02-21 04:10 pm Source: MYKHEL ಕ್ರೀಡೆ
ಗೋವಾ: ಸತತ ವೈಫಲ್ಯದ ನಂತರ ಜಯದ ಲಯ ಕಂಡುಕೊಂಡಿರುವ ಬೆಂಗಳೂರು ಎಫ್ ಸಿ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಮತ್ತೊಂದು ಸವಾಲಿಗೆ ಸಜ್ಜಾಗಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಸೋಲರಿಯದ ನೌಶಾದ್ ಮೂಸಾ ಅವರ ಪಡೆ, ಹಿಂದಿನ ಎರಡು ಪಂದ್ಯಗಳಲ್ಲಿ ಕ್ಲೀನ್ ಶೀಟ್ ಯಶಸ್ಸು ಕಂಡಿದೆ. ಮಂಗಳವಾರ ನಡೆಯುವ ಪಂದ್ಯದಲ್ಲಿ ಬೆಂಗಳೂರು ತಂಡ ಅಗ್ರ ಸ್ಥಾನದ ಗುರಿಹೊಂದಿರುವ ಎಟಿಕೆಮೋಹನ್ ಬಾಗನ್ ವಿರುದ್ಧ ಸೆಣಸಲಿದೆ.
"ಸದ್ಯ ನಾವು ಎಟಿಕೆ ಮೋಹನ್ ಬಾಗನ್ ತಂಡದ ಕಡೆಗೆ ಗುರಿ ಇಟ್ಟಿದ್ದೇವೆ. ಹೇಗೆ ಆಡಬೇಕೆಂಬುದು ನಮಗೆ ಗೊತ್ತಿದೆ. ನಾವು ನಮ್ಮಿಂದಾದ ಉತ್ತಮ ಆಟವನ್ನು ಪ್ರದರ್ಶಿಸಲಿದ್ದೇವೆ. ಆಟಗಾರರು ಧನಾತ್ಮಕ ನಿಲುವಿನಲ್ಲಿದ್ದಾರೆ. ಪ್ರತಿಯೊಬ್ಬರೂ ಉತ್ತಮ ರೀತಿಯಲ್ಲಿ ಆಡುತ್ತಿದ್ದಾರೆ. ನಾವು ಕಳೆದ ಎರಡು ಪಂದ್ಯಗಳಲ್ಲಿ ಎದುರಾಳಿಗೆ ಗೋಲು ನೀಡಿಲ್ಲ. ಇದೇ ರೀತಿಯಲ್ಲಿ ಧನಾತ್ಮಕ ಆಟ ಪ್ರದರ್ಶಿಸುತ್ತೇವೆ ಎಂಬ ನಂಬಿಕೆ ಇದೆ," ಎಂದು ಮಧ್ಯಂತರ ಕೋಚ್ ಮೂಸಾ ಹೇಳಿದರು
ಎರಡು ಕ್ಲೀನ್ ಶೀಟ್ ಯಶಸ್ಸು
ಗುರ್ ಪ್ರೀತ್ ಸಿಂಗ್ ಸಂಧೂ ಅವರ ಉತ್ತಮ ಪ್ರದರ್ಶನದ ನೆರವಿನಿಂದಾಗಿ ಎರಡು ಕ್ಲೀನ್ ಶೀಟ್ ಯಶಸ್ಸು ಸಿಕ್ಕಿದೆ. ಚೆನ್ನೈಯಿನ್ ಎಫ್ ಸಿ ವಿರುದ್ಧ ಆರು ಬಾರಿ ಅದ್ಭುತ ಗೋಲುಗಳನ್ನು ತಡೆದು ತಂಡಕ್ಕೆ ನೆರವಾದರಲ್ಲಿದೆ, ಐಎಸ್ ಎಲ್ ನಲ್ಲಿ 29ನೇ ಕ್ಲೀನ್ ಶೀಟ್ ಗೆ ಕಾರಣಾದರು. ಎಟಿಕೆ ಮೋಹನ್ ಬಾಗನ್ ವಿರುದ್ಧದ ಪಂದ್ಯದಲ್ಲಿ ಎಲ್ಲವನ್ನೂ ಗೋಲ್ ಕೀಪರ್ ಮೇಲೆ ಬಿಡುವುದ ಸೂಕ್ತವಲ್ಲ ಎಂದು ತಂಡವನ್ನು ಎಚ್ಚರಿಸಿದ್ದಾರೆ. "ಬಾಗನ್ ತಂಡ ಆರಂಭದಲ್ಲಿ ಗೋಲು ನೀಡಿದರೂ ತಿರುಗೇಟು ನೀಡುವ ತಂಡ. ಆ ಬಗ್ಗೆ ನಾವು ಎಚ್ಚರದಲ್ಲಿರಬೇಕು. ನಾವು ಹೆಚ್ಚು ಒತ್ತಾಗಿ ಇರಬೇಕು. ನಾಳೆಯ ಪಂದ್ಯ ಅಷ್ಟು ಸುಲಭದ ಪಂದ್ಯವಲ್ಲ, ಮೊದಲು ನಾವು ಗೋಲಾಗುವುದನ್ನು ತಡೆಯಬೇಕು. ಮತ್ತೆ ನಾವು ಯಾವಾಗಲಾದರೂ ಗೋಲು ಗಳಿಸಬಹುದು. ಸುನಿಲ್ ಛೆಟ್ರಿ ಮತ್ತು ಕ್ಲೈಟನ್ ಸಿಲ್ವಾ ಇರುವುದರಿಂದ ಏನುಬೇಕಾದರೂ ಆಗಬಹುದು," ಎಂದರು.
ತಂಡ ಯಾವುದೇ ಒತ್ತಡದಲ್ಲಿಲ್ಲ
ಬೆಂಗಳೂರು ತಂಡ ಎಟಿಕೆಎಂಬಿ ವಿರುದ್ಧ ಕಳಪೆ ದಾಖಲೆ ಹೊಂದಿದೆ, ಆದರೆ ತಮ್ಮ ತಂಡ ಯಾವುದೇ ಒತ್ತಡದಲ್ಲಿಲ್ಲ ಎಂದು ಮೂಸಾ ಹೇಳಿದ್ದಾರೆ. " ಎಲ್ಲಕ್ಕಿಂತ ಮುಖ್ಯವಾದುದು, ನಾನು ಆಟಗಾರರ ಮೇಲೆ ಒತ್ತಡ ಹೇರಲಾರೆ. ಅವರು ಸಾಕಷ್ಟು ಆರಾಮವಾಗಿರಬೇಕು. ಪಂದ್ಯಗಳು ಎಷ್ಟು ಪ್ರಮುಖವಾದುದು ಎಂಬುದು ಅವರಿಗೆ ಗೊತ್ತಿದೆ. ಪರಿಸ್ಥಿತಿಯ ಬಗ್ಗೆ ನಮಗೂ ಗೊತ್ತಿದೆ. ಬಾಗನ್ ತಂಡದಲ್ಲಿ ರಾಯ್ ಕೃಷ್ಣ ಮತ್ತು ಮನ್ವೀರ್ ಸಿಂಗ್ ಉತ್ತಮ ರೀತಿಯಲ್ಲಿ ಆಡುತ್ತಿದ್ದಾರೆ. ನಾವು ಎಚ್ಚರಿಕೆಯಲ್ಲಿ ಇರಬೇಕು, ಆಟಗಾರರಿಗೂ ಇದು ಗೊತ್ತಿದೆ," ಎಂದರು. ಮುಂಬೈ ಸಿಟಿ ಎಫ್ ಸಿ ಗಿಂತ ಮೂರು ಅಂಕ ಹಿಂದೆ ಬಿದ್ದಿರುವ ಮೋಹನ್ ಬಾಗನ್, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದು ಸುಸ್ಥಿತಿಯಲ್ಲಿದೆ. ನಾಳೆಯ ಪಂದ್ಯದಲ್ಲಿ ಜಯ ಗಳಿಸಿದರೆ ಆಂಟೊನಿಯೋ ಹಬ್ಬಾಸ್ ಪಡೆ ಅಗ್ರ ಸ್ಥಾನ ತಲುಪಲಿದೆ.
ಅಗ್ರ ಸ್ಥಾನದಲ್ಲಿರಬೇಕು
"ಲೆಕ್ಕಾಚಾರದ ಹೊರತಾಗಿ ಪ್ಲೇ ಆಫ್ ತಲುಪಬೇಕಾದರೆ ಅಗ್ರ ಸ್ಥಾನದಲ್ಲಿರಬೇಕು. ಆ ನಂತರ ಸೆಮಿಫೈನ್ ಮತ್ತು ಸಾಧ್ಯವಾದರೆ ಫೈನಲ್. ನಾವು ಪಂದ್ಯದಿಂದ ಪಂದ್ಯಕ್ಕೆ ಮತ್ತು ದಿನದಿಂದ ದಿನದ ಕಡೆಗೆ ಗಮನ ಹರಿಸುವೆವು. ನಮಗೆ ಬೆಂಗಳೂರು ವಿರುದ್ಧದ ಪಂದ್ಯವೆಂದರೆ ಮತ್ತೊಂದು ಪಂದ್ಯವಿದ್ದಂತೆ. ನಮ್ಮ ತಂಡ ಡಿಫೆನ್ಸ್ ವಿಭಾಗದಲ್ಲಿ ಉತ್ತಮವಾಗಿದೆ. ನಾವು ಅಟ್ಯಾಕ್ ನಲ್ಲೂ ಸುಧಾರಣೆ ಕಂಡಿದ್ದೇವೆ,ಇದು ಪ್ರಮುಖ ಅಂಶ," ಎಂದು ಹಬ್ಬಾಸ್ ಹೇಳಿದರು.
This News Article is a Copy of MYKHEL
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 12:35 pm
Mangalore Correspondent
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm