ಬ್ರೇಕಿಂಗ್ ನ್ಯೂಸ್
02-02-21 02:56 pm Source: MYKHEL Madhukara Shetty ಕ್ರೀಡೆ
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಹೆಸರಿಸಿರುವ ತಂಡದಲ್ಲಿ ವೇಗಿ ನಟರಾಜನ್ ಆಯ್ಕೆಯಾಗಿಲ್ಲ. ಹೀಗಾಗಿ ನಟರಾಜನ್ ಸದ್ಯ ತಮಿಳುನಾಡಿನಲ್ಲಿ ತಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅವರು ಟೀಮ್ ಇಂಡಿಯಾ ಬಳಗವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ವತಃ ನಟರಾಜನ್ ಹೇಳಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾದ ಎಲ್ಲಾ ಮಾದರಿಯ ತಂಡದಲ್ಲೂ ಅವಕಾಶ ಪಡೆದಿದ್ದ ನಟರಾಜನ್ ಸುದೀರ್ಘ ಕಾಲ ತಂಡದ ಸದಸ್ಯರ ಜೊತೆಯಲ್ಲಿ ಬಯೋ ಬಬಲ್ನಲ್ಲಿದ್ದರು. ಆದರೆ ಜನವರಿ ಮಧ್ಯದಲ್ಲಿ ಆಸಿಸ್ ವಿರುದ್ಧದ ಸರಣಿ ಮುಕ್ತಾಯದೊದಿಗೆ ಟೀಮ್ ಇಂಡಿಯಾ ತವರಿಗೆ ಮರಳಿತು.
"ಕಳೆದ ಕಲ ತಿಂಗಳುಗಳಿಂದ ತಂಡದ ಭಾಗವಾಗಿದ್ದು ಸದಸ್ಯರ ಜೊತೆಯಲ್ಲಿ ಆತ್ಮೀಯವಾಗಿದ್ದೆ. ಈಗ ಖಂಡಿತವಾಗಿ ತಂಡವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದರೆ ಈ ವಿರಾಮದ ಅಗತ್ಯವನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಕಳೆದ ಆರು ತಿಂಗಳಿನಿಂದ ನಾನು ನನ್ನ ಕುಟುಂಬಕ್ಕೆ ಸಮಯವನ್ನು ನೀಡಿರಲಿಲ್ಲ. ಆದರೆ ಅದಕ್ಕೆ ಬೇಸರವಿಲ್ಲ. ಆದರೆ ತಂಡ ಚೆನ್ನೈನಲ್ಲಿ ಆಡುತ್ತಿರುವಾಗ ನಾನು ರಾಷ್ಟ್ರೀಯ ತಂಡದ ಭಾಗವಾಗದಿರುವ ಬಗ್ಗೆ ಖಂಡಿತಾ ನನಗೆ ಬೇಸರವಿದೆ" ಎಂದಿದ್ದಾರೆ ನಟರಾಜನ್. ಇನ್ನು ಇದೇ ಸಂದರ್ಭದಲ್ಲಿ ನಟರಾಜನ್ ಎಲ್ಲಾ ಮಾದರಿಯ ತಂಡದಲ್ಲೂ ಟೀಮ್ ಇಂಡಿಯಾದ ಭಾಗವಾಗಲು ಇಷ್ಟ ಪಡುತ್ತೇನೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಕೆಲಸದ ಒತ್ತಡವನ್ನೂ ನಿಭಾಯಿಸಿಕೊಳ್ಳುತ್ತೇನೆ ಎಂದು ನಟರಾಜನ್ ಹೇಳಿದ್ದಾರೆ.
"ನಾನು ಎಲ್ಲಾ ಮಾದರಿಯಲ್ಲೂ ಆಡುವ ಜೊತೆಗೆ ಕೆಲಸದ ಒತ್ತಡವನ್ನು ನಿಭಾಯಿಸುವತ್ತ ಗಮನಹರಿಸುತ್ತಿದ್ದೇನೆ. ನನ್ನ ಸಾಮರ್ಥ್ಯ ಹಾಗೂ ಸಹನೆಯ ಮಟ್ಟವನ್ನು ಏರಿಸಲು ಮುಮದಿನ ದಿನಗಳಲ್ಲಿ ಬಯಸುತ್ತೇನೆ. ನಾನು ನನ್ನ ಜೋವನದಲ್ಲಿ ಇದೇ ಮೊದಲ ಬಾರಿಗೆ ಸುದೀರ್ಘ 6 ತಿಂಗಳುಗಳ ಕಾಲ ನಿರಂತರವಾಗಿ ಆಡಿದ್ದು ಇದೇ ಮೊದಲು" ಎಂದು ನಟರಾಜನ್ ಹೇಳಿದರು.
This News Article is a Copy of MYKHEL
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
29-08-26 11:40 am
HK News Staffer
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm