ಬ್ರೇಕಿಂಗ್ ನ್ಯೂಸ್
28-12-20 04:36 pm Source: MYKHEL Sadashiva ಕ್ರೀಡೆ
ಸಿಡ್ನಿ,ಡಿ.28 : ಮನುಷ್ಯನಿಂದ ಕರಾರುವಕ್ಕಾಗಿ ನಿರ್ಧರಿಸಲು ಸಾಧ್ಯವಾಗದಾಗ ಸಹಾಯಕ್ಕಿರಲಿ ಎಂದು ಮನುಷ್ಯ ಯಂತ್ರದ ಮೊರೆ ಹೋಗಿದ್ದಾನೆ. ಹಾಗಂತ ಯಂತ್ರಗಳೂ ಪರಿಪೂರ್ಣ ಅಂತೇನೂ ಇಲ್ಲ. ಕೆಲವೊಮ್ಮೆ ಯಂತ್ರಗಳೂ ತಪ್ಪುವ ಸಾಧ್ಯತೆಗಳಿರುತ್ತವೆ. ಇದೇ ಕಾರಣಕ್ಕೆ ಕ್ರಿಕೆಟ್ನಲ್ಲಿನ ಡಿಸಿಶನ್ ರಿವ್ಯೂ ಸಿಸ್ಟಮ್ ಅನ್ನು ಪುನರ್ ಪರಿಶೀಲಿಸುವಂತೆ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಅನ್ನು ಕೋರಿಕೊಂಡಿದ್ದಾರೆ.
ಆನ್ ಫೀಲ್ಡ್ ಅಂಪೈರ್ ನಿರ್ಧಾರ ಸಮಾಧಾನ ತಾರದಿದ್ದಾಗ ಆಟಗಾರರು ಡಿಆರ್ಎಸ್ ಮೊರೆ ಹೋಗುತ್ತಾರೆ. ಕೆಲವೊಮ್ಮೆ ಡಿಆರ್ಎಸ್ನಲ್ಲೂ ಕೂಡ ಸರಿಯಾದ ತೀರ್ಪು ಸಿಕ್ಕಿಲ್ಲ ಎಂದು ವಿವಾದಗಳಾಗಿದ್ದಿದೆ. ಉದಾಹರಣೆಗೆ ಸದ್ಯ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಆಸೀಸ್ ನಾಯಕ ಟಿಮ್ ಪೈನ್ ಅವರನ್ನು ರಿಷಭ್ ಪಂತ್ ಸ್ಟಂಪ್ ಮಾಡಲು ಯತ್ನಿಸಿದ್ದಾಗ ನಾಟೌಟ್ ತೀರ್ಪು ನೀಡಲಾಗಿತ್ತು.
ಮುಖ್ಯವಾಗಿ ಎಲ್ಬಿಡಬ್ಲ್ಯೂಗೆ ಸಂಬಂಧಿಸಿ ಡಿಆರ್ಎಸ್ ಕೇಳಲಾದಾಗ ಕೆಲವೊಮ್ಮೆ ಚೆಂಡು ಸ್ಟಂಪ್ ಬಡಿದಿದ್ದರೂ ಕೂಡ ಅಂಪೈರ್ ಕಾಲ್ ಎಂದು ಹೇಳಲಾಗುತ್ತದೆ. ಇಂಥ ಕಠಿಣ ಸಂದರ್ಭಗಳಿಗಾಗಿಯೇ ಡಿಆರ್ಎಸ್ ಪರಿಶೀಲನೆಯಾಗಬೇಕು ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮೂಲಕ ಐಸಿಸಿಯನ್ನು ಕೇಳಿಕೊಂಡಿದ್ದಾರೆ.
'ಆನ್ ಫೀಲ್ಡ್ ಅಂಪೈರ್ ತೀರ್ಪು ಸಮಾಧಾನ ನೀಡದಿದ್ದಾಗ ಆಟಗಾರರು ಡಿಆರ್ಎಸ್ ಕೇಳುತ್ತಾರೆ. ಹೀಗಾಗಿ ಡಿಆರ್ಎಸ್ ವ್ಯವಸ್ಥೆಯನ್ನು ಐಸಿಸಿ ಕೂಲಂಕಷವಾಗಿ ಪರಿಶೀಲಿಸಬೇಕಾಗಿದೆ. ಮುಖ್ಯವಾಗಿ ಅಂಪೈರ್ಸ್ ಕಾಲ್ ಇದ್ದಾಗ,' ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
This News Article is a Copy of MYKHEL
The reason players opt for a review is because they’re unhappy with the decision taken by the on-field umpire.
— Sachin Tendulkar (@sachin_rt) December 28, 2020
The DRS system needs to be thoroughly looked into by the @ICC, especially for the ‘Umpires Call’.#AUSvIND
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm