ಬ್ರೇಕಿಂಗ್ ನ್ಯೂಸ್
27-06-24 11:15 am HK News Desk ಕ್ರೀಡೆ
ಗಯಾನ, (ವೆಸ್ಟ್ ಇಂಡೀಸ್) ಜೂನ್ 27: 1992ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಯ ಯಾವುದೇ ಪ್ರಕಾರದ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ತಲುಪಲು ವಿಫಲವಾಗುತ್ತಲೇ ಚೋಕರ್ಸ್ ಎಂಬ ಹಣೆಪಟ್ಟಿ ಹೊತ್ತಿದ್ದ ದಕ್ಷಿಣ ಆಫ್ರಿಕಾ ತನಗಂಟಿದ್ದ ಅಪವಾದದಿಂದ ಹೊರಬಂದಿದ್ದು ಟಿ 20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ಪ್ರವೇಶ ಮಾಡಿದೆ. ಗುರುವಾರ ನಡೆದ ಮೊದಲ ಸೆಮಿಫೈನಲ್ ನಲ್ಲಿ ಆಫ್ರಿಕನ್ನರು ಅಫ್ಘಾನಿಸ್ತಾನ ತಂಡವನ್ನು ಒಂಬತ್ತು ವಿಕೆಟ್ ಅಂತರದಿಂದ ನಿರಾಯಾಸವಾಗಿ ಸೋಲಿಸಿ ಶಾಪ ವಿಮೋಚನೆ ಮಾಡಿಕೊಂಡಿದ್ದಾರೆ.
ಕಠಿಣ ಪಿಚ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಯಾವ ಹಂತದಲ್ಲೂ ಹರಿಣಗಳ ಬೌಲಿಂಗ್ ದಾಳಿಗೆ ಪ್ರತ್ಯುತ್ತರ ನೀಡುವಲ್ಲಿ ವಿಫಲವಾಯಿತು. ಮೊದಲ ಓವರ್ನಲ್ಲೇ ರಹಮಾನುಲ್ಲಾ ಗುರ್ಬಾಜ್ (0) ಖಾತೆ ತೆರೆಯದೆ ನಿರ್ಗಮನ ಕಂಡ ನಂತರ ಯಾವ ಬ್ಯಾಟರ್ ಗಳೂ ಹರಿಣಗಳ ಬೌಲಿಂಗ್ ದಾಳಿಯನ್ನು ಮೆಟ್ಟಿ ನಿಲ್ಲಲಿಲ್ಲ. ಇಡೀ ಅಫ್ಘನ್ ತಂಡದಲ್ಲಿ ಅಜ್ಮತುಲ್ಲಾ ಒಮರ್ಜಾಯಿ(10) ಒಬ್ಬರಷ್ಟೇ ಎರಡಂಕೆ ತಲುಪಿದರು. ದಕ್ಷಿಣ ಆಫ್ರಿಕಾ ಇತರೆ ರೂಪದಲ್ಲಿ ನೀಡಿದ 13 ರನ್ ಗಳೇ ಅಫ್ಘನ್ ಪಾಲಿನ ಗರಿಷ್ಠ ಮೊತ್ತವಾಗಿತ್ತು. ಆಫ್ರಿಕಾ ಪರ ತಬ್ರೈಜ್ ಶಮ್ಸಿ(6/3), ಮಾರ್ಕೋ ಜಾನೆಸನ್(16/3), ಆನ್ರಿಕ್ ನೋಕಿಯ(7/2), ಕಾಗಿಸೊ ರಬಾಡ(14/2) ಬಿಗು ಬೌಲಿಂಗ್ ದಾಳಿಯ ಮೂಲಕ ಎದುರಾಳಿ ತಂಡದ ಬ್ಯಾಟಿಂಗ್ ಪಡೆಯನ್ನು ಬುಡಮೇಲು ಮಾಡಿದರು. ಪರಿಣಾಮ ಅಫ್ಘಾನಿಸ್ತಾನ ತಂಡ 11.5 ಓವರ್ಗಳಲ್ಲಿ 56 ರನ್ ಗೆ ಆಲೌಟಾಯಿತು. ಇದು ಟಿ 20 ವಿಶ್ವಕಪ್ ನಾಕೌಟ್ ಹಂತದಲ್ಲಿ ದಾಖಲಾದ ಅತ್ಯಂತ ಕಡಿಮೆ ಮೊತ್ತ ಎನಿಸಿತು.
ಸುಲಭ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿಕಾಕ್(5)ರನ್ನು ಬೇಗನೆ ಕಳೆದುಕೊಂಡರೂ ರೀಜಾ ಹೆಂಡ್ರಿಕ್ಸ್ ಮತ್ತು ನಾಯಕ ಐಡನ್ ಮಾರ್ಕ್ರಂ ಹೆಚ್ಚಿನ ಆಘಾತವಾಗದಂತೆ ಗೆಲುವಿನ ಓಟ ಪೂರೈಸಿದರು. 8.5 ಓವರ್ನಲ್ಲೇ ಒಂದು ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿ ಫೈನಲ್ ಪ್ರವೇಶಿಸಿತು.
ಸಂಕ್ಷಿಪ್ತ ಸ್ಕೋರ್ಅ ಫ್ಘಾನಿಸ್ತಾನ 11.5 ಓವರ್ಗಳಲ್ಲಿ 56(ಇತರೆ ಸ್ಕೋರ್ 13, ಒಮರ್ಜಾಯಿ 10, ಶಮ್ಸಿ 6/3, ಜಾನೆಸನ್ 16/3)
ದಕ್ಷಿಣ ಆಫ್ರಿಕಾ 8.5 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 60(ಹೆಂಡ್ರಿಕ್ಸ್ 29*, ಮಾರ್ಕ್ರಂ 23*, ಫರೂಕಿ 11/1)
A long, tortuous World Cup title drought is closer than ever to ending for South Africa after a nine-wicket win over first-time semifinalist Afghanistan at the global Twenty20 cricket tournament on Wednesday.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm