ಬ್ರೇಕಿಂಗ್ ನ್ಯೂಸ್
12-07-23 02:01 pm Source: News18 Kannada ಕ್ರೀಡೆ
ಬೈಜೂಸ್ ಹಿಂತೆಗೆದುಕೊಂಡ ನಂತರ, ಭಾರತ ತಂಡವು ಯಾವುದೇ ಶೀರ್ಷಿಕೆ ಪ್ರಾಯೋಜಕರಿಲ್ಲದೆ ICC ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂತಿಮ ಪಂದ್ಯವನ್ನು ಆಡಿತು. ಅದೇ ಸಮಯದಲ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲು, ಫ್ಯಾಂಟಸಿ ಕ್ರಿಕೆಟ್ ಅಪ್ಲಿಕೇಶನ್ ಡ್ರೀಮ್ 11 ಜುಲೈ 2023 ರಿಂದ ಮಾರ್ಚ್ 2026ರ ವರೆಗೆ ಮುಖ್ಯ ಪ್ರಾಯೋಜಕರಾಗಿ ಹಕ್ಕುಗಳನ್ನು ಪಡೆದುಕೊಂಡಿದೆ.
ಟ್ರೋಲ್ ಆಗ್ತಿದೆ ಜೆರ್ಸಿ:
ಟೀಮ್ ಇಂಡಿಯಾ ಹೊಸ ಟೈಟಲ್ ಪ್ರಾಯೋಜಕರನ್ನು ಪಡೆದ ನಂತರ ಆಟಗಾರರು ಫೋಟೋಶೂಟ್ ಮಾಡಿದ್ದಾರೆ. ಆದರೆ, ನೀಲಿ ತಂಡದ ಹೊಸ ಜೆರ್ಸಿಯನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮೆಚ್ಚಿಲ್ಲವಂತೆ. ಅಭಿಮಾನಿಗಳು ನ್ಯೂ ಜೆರ್ಸಿ ಕುರಿತು ಸಾಮಾಜಿಕ ಮಾಧ್ಯಮಗಳ ಮೂಲಕ ಅನೇಕ ರೀತಿ ಪ್ರತಿಕ್ರಿಯಿಸುತ್ತಿದ್ದಾರೆ. ಒಬ್ಬರು, ಇದಕ್ಕಿಂತ ಬೈಜೂಸ್ ಅವರ ಜೆರ್ಸಿಯೇ ಉತ್ತಮವಾಗಿತ್ತು ಎಂದು ಹೇಳಿದರೆ, ಇನ್ನೊಬ್ಬ ದೆಹಲಿಯ ಶಾಲಾ ಹುಡುಗರು ಇದಕ್ಕಿಂತ ಉತ್ತಮವಾದ ಜೆರ್ಸಿ ಧರಿಸಿ ಕಬಡ್ಡಿ ಆಡುತ್ತಾರೆ! ಎಂದೆಲ್ಲಾ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ನಾಳೆಯಿಂದ ಟೆಸ್ಟ್ ಸರಣಿ ಆರಂಭ:
ಇನ್ನು, ಭಾರತ ಮತ್ತು ವೆಸ್ಟ್ ಇಂಡೀಸ್ (IND vs WI Test) ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಜುಲೈ 12 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಡೊಮಿನಿಕಾದಲ್ಲಿ ನಡೆಯಲಿದೆ. ಇದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ (WTC Final) ಹೊಸ ಋತುವಿನ ಎರಡೂ ತಂಡಗಳ ಮೊದಲ ಸರಣಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ (Team India) ಗೆಲುವಿನೊಂದಿಗೆ ಶುಭಾರಂಭ ಮಾಡುವ ತವಕದಲ್ಲಿದೆ.
ಮೊದಲ ಟೆಸ್ಟ್ಗೆ ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ XI:
ರೋಹಿತ್ ಶರ್ಮಾ, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕತ್ ಮತ್ತು ಮೊಹಮ್ಮದ್ ಸಿರಾಜ್.
ವೆಸ್ಟ್ ಇಂಡೀಸ್ ಪ್ರವಾಸದ ಸಂಪೂರ್ಣ ವೇಳಾಪಟ್ಟಿ:
ಜುಲೈ 12 ರಿಂದ 16, 1 ನೇ ಟೆಸ್ಟ್, ಡೊಮಿನಿಕಾ
ಜುಲೈ 20 ರಿಂದ 24, 2 ನೇ ಟೆಸ್ಟ್, ಟ್ರಿನಿಡಾಡ್
ಜುಲೈ 27, 1 ನೇ ODI, ಬಾರ್ಬಡೋಸ್
ಜುಲೈ 29, 2 ನೇ ODI, ಬಾರ್ಬಡೋಸ್
ಆಗಸ್ಟ್ 1, 3 ನೇ ODI, ಟ್ರಿನಿಡಾಡ್
ಆಗಸ್ಟ್ 3, 1ನೇ ಟಿ20, ಟ್ರಿನಿಡಾಡ್
ಆಗಸ್ಟ್ 6, 2ನೇ ಟಿ20, ಗಯಾನಾ
ಆಗಸ್ಟ್ 8, 3ನೇ ಟಿ20, ಗಯಾನಾ
ಆಗಸ್ಟ್ 12, 4ನೇ ಟಿ20, ಫ್ಲೋರಿಡಾ
ಆಗಸ್ಟ್ 13, 5ನೇ ಟಿ20, ಫ್ಲೋರಿಡಾ
IND vs WI BCCI has Released the New Test Jersey of Team India.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm