ಬ್ರೇಕಿಂಗ್ ನ್ಯೂಸ್
14-04-23 12:25 pm Source: news18 ಕ್ರೀಡೆ
ಐಪಿಎಲ್ 16ನೇ ಸೀಸನ್ನಲ್ಲಿ ಆರ್ಸಿಬಿ ತಂಡ ಗೆಲುವಿನೊಂದಿಗೆ ಟೂರ್ನಿ ಆರಂಭಿಸಿದರೂ ಬಳಿಕ 2 ಸೋಲು ತಂಡದವನ್ನು ಕಂಗೆಡಿಸಿದೆ. ಇದರ ನಡುವೆ ಆರ್ಸಿಬಿ ಭರ್ಜರಿ ಕಂಬ್ಯಾಕ್ ಮಾಡಲು ಹೊಸ ರಣತಂತ್ರ ಹೆಣೆಯುತ್ತಿದೆ. ಇದರ ನಡುವೆ ಆರ್ಸಿಬಿ ಪ್ರಾಂಚೈಸಿ ಹೊಸ ಮಾಹಿತಿ ಹಂಚಿಕೊಂಡಿದ್ದು, ಆರ್ಸಿಬಿ ಪ್ರತಿ ಸಲದಂತೆ ಈ ಸಲವೂ ಸಹ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಇದಕ್ಕೆ ದಿನಾಂಕವನ್ನೂ ಫಿಕ್ಸ್ ಮಾಡಲಾಗಿದ್ದು, ಇದೇ ಎಪ್ರಿಲ್ 23ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಗ್ರೀನ್ ಜೆರ್ಸಿಯಲ್ಲಿ ಸೆಣಸಾಡಲಿದೆ.


ಆದರೆ, ಆರ್ಸಿಬಿಗೆ ಈ ಗ್ರೀನ್ ಜೆರ್ಸಿ ಅನ್ಲೆಕ್ಕಿ ಎಂದು ಹೇಳಲಾಗುತ್ತದೆ. ಹೌದು, ಐಪಿಎಲ್ನಲ್ಲಿ ಆರ್ಸಿಬಿ ಗ್ರೀನ್ ಜರ್ಸಿಯಲ್ಲಿ ಆಡಿರುವ 11 ಪಂದ್ಯದಲ್ಲಿ ಕೇವಲ 3ರಲ್ಲಿ ಗೆಲುವು ದಾಖಲಿಸಿದೆ. ಉಳಿದಂತೆ 8 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಜೊತೆಗೆ 2018ರಲ್ಲಿ ಆರ್ಸಿಬಿ ಈ ಜರ್ಸಿಯಲ್ಲಿ ರಾಜಸ್ಥಾನ್ ವಿರುದ್ಧ ಕಣಕ್ಕಿಳಿದಾಗ ಸಹ ಸೋಲನ್ನಪ್ಪಿತ್ತು. ಈ ಬಾರಿಯೂ ಗ್ರೀನ್ ಜೆರ್ಸಿಯಲ್ಲಿ ಆರ್ಸಿಬಿ ತಂಡ ರಾಜಸ್ಥಾನ್ ವಿರುದ್ಧ ಕಣಕ್ಕಿಳಿಯಲಿದೆ.

![,[object Object], 2011 - ಸೋಲು, 2012 - ಸೋಲು, 2013 - ಸೋಲು, 2014 - ಸೋಲು, 2015 - ಫಲಿತಾಂಶವಿಲ್ಲ, 2016 - ಗೆಲುವು, 2017 - ಸೋಲು, 2018 - ಸೋಲು, 2019 - ಸೋಲು, 2020 - ಸೋಲು, 2022 - ಗೆಲುವು ಕಂಡಿದೆ.](https://images.news18.com/kannada/uploads/2023/04/6-166.jpg?im=Resize,width=904,aspect=fit,type=normal)
ಗ್ರೀನ್ ಜೆರ್ಸಿಯಲ್ಲಿ ಆರ್ಸಿಬಿ: 2011 - ಸೋಲು, 2012 - ಸೋಲು, 2013 - ಸೋಲು, 2014 - ಸೋಲು, 2015 - ಫಲಿತಾಂಶವಿಲ್ಲ, 2016 - ಗೆಲುವು, 2017 - ಸೋಲು, 2018 - ಸೋಲು, 2019 - ಸೋಲು, 2020 - ಸೋಲು, 2022 - ಗೆಲುವು ಕಂಡಿದೆ.


ಆದರೆ , ಆರ್ಸಿಬಿ ಈ ಹಸಿರು ಜೆರ್ಸಿ ಧರಿಸುವುದರ ಹಿಂದೆ ಒಂದು ವಿಶೇಷ ಸಂದೇಶವಿದೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರಣದಿಂದ ಆರ್ಸಿಬಿ ತಂಡ ಈ ವಿಭಿನ್ನ ಹಾದಿಯನ್ನು ಹಿಡಿದಿದೆ. ಅಲ್ಲದೇ ಈ ಜರ್ಸಿ 100% ಮರುಬಳಕೆಯ ವಸ್ತುಗಳಿಂದ ಮಾಡಲಾಗಿದೆ ಎಂದು ಆರ್ಸಿಬಿ ಫ್ರಾಂಚೈಸಿ ತಿಳಿಸಿದೆ. ಇನ್ನು, ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಆಡಿದಾಗ ಎಲ್ಲಾ ಪಂದ್ಯದಲ್ಲಿಯೂ ಕಿಂಗ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೇ ಸದ್ಯ ಅವರು ಭರ್ಜರಿ ಫಾರ್ಮ್ನಲ್ಲಿರುವುದರಿಂದ ಎಪ್ರಿಲ್ 23ರಂದು ಮತ್ತೊಮ್ಮೆ ಉತ್ತಮ ಇನ್ನಿಂಗ್ಸ್ ಆಡುವ ನಿರೀಕ್ಷೆಯಿದೆ.
IPL 2023RCB wear green jersey against rajasthan royals but shows unlucky records.
14-04-26 02:04 pm
HK News Staffer
ಸುಳ್ಯದಲ್ಲಿ ಪಾಳು ಬಾವಿಗೆ ಬಿದ್ದ ಕಾಡಾನೆ; ಅಡ್ಡಲಾಗಿ...
13-04-26 09:49 pm
ಕುಂದಾಪುರದ 111 ವರ್ಷಗಳ ಸರ್ಕಾರಿ ಶಾಲೆಗೆ ಬಂತು ಎಐ ರ...
13-04-26 08:19 pm
ದಾವಣಗೆರೆ ದಕ್ಷಿಣದಲ್ಲಿ ಪ್ರಚಾರದಿಂದ ದೂರ; ಸಿಎಂ ರಾಜ...
13-04-26 04:20 pm
ಪಿಗ್ಮಿ ಏಜೆಂಟರು ಮಧ್ಯವರ್ತಿಗಳಲ್ಲ, ಬ್ಯಾಂಕುಗಳ ನೌಕರ...
12-04-26 07:58 pm
14-04-26 10:48 pm
HK News Staffer
ಕ್ಯಾಥೋಲಿಕ್ ಪೋಪ್ ಲಿಯೋ ಒಬ್ಬ ದುರ್ಬಲ ವ್ಯಕ್ತಿ, ರಾಜ...
14-04-26 01:46 pm
ಟಿಸಿಎಸ್ ಕಂಪನಿಯಲ್ಲಿ ಹೈಫೈ ಜಿಹಾದ್; ಸೆಕ್ಸ್ ದಂಧೆ,...
13-04-26 10:35 pm
ಬಾಂಗ್ಲಾದಲ್ಲಿ ಮುಸ್ಲಿಂ ಯುವಕರಿಂದಲೇ ಇಬ್ಬರು ಧರ್ಮಗು...
13-04-26 09:07 pm
ಅಮೆರಿಕ- ಇರಾನ್ ಸಂಧಾನ ಯಶಸ್ವಿಯಾಗ್ತಿತ್ತು, ನೆತನ್ಯ...
13-04-26 01:27 pm
13-04-26 11:39 pm
Mangalore Correspondent
ಮದುವೆ ಸಮಾರಂಭಕ್ಕೆ ಬಂದಿದ್ದ ವಾಹನಗಳು ಹೆದ್ದಾರಿಯಲ್ಲ...
13-04-26 12:53 pm
Mangalore Live Accident Nantoor: ಓವರ್ ಸ್ಪೀಡ್...
12-04-26 09:05 pm
ಬಂಟ್ವಾಳ ; ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ...
11-04-26 05:05 pm
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
14-04-26 11:16 pm
HK News Desk
ಆರಿಫ್ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ,...
14-04-26 11:52 am
ನಂತೂರು ಭೀಕರ ಅಪಘಾತ ; ಬೈಕ್ ಸವಾರನ ಧಾವಂತಕ್ಕೆ ರಸ್ತ...
14-04-26 11:14 am
ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಪತ್ನಿ ಸೌಮ್ಯಾ ಶೆಟ...
11-04-26 11:14 pm
ಕಾಲೇಜು ಗೆಳತಿಯ ಪ್ರೀತಿ ಹುಚ್ಚಾಟ ; ಮಜಾ ಉಡಾಯಿಸಿದ ಬ...
11-04-26 03:09 pm