ಬ್ರೇಕಿಂಗ್ ನ್ಯೂಸ್
21-04-22 11:45 am Mangalore Correspondent ಕರಾವಳಿ
ಮಂಗಳೂರು, ಎ.21: 'ಒಂದು ದೇಶ, ಒಂದೇ ಜನ’ ಎಂಬ ಸಂದೇಶ ಹಿಡಿದು ತನ್ನ 21ನೇ ವಯಸ್ಸಿನಲ್ಲಿ ಏಕಾಂಗಿಯಾಗಿ ಬೈಕಿನಲ್ಲಿ ಭಾರತ ಪರ್ಯಟನೆ ಆರಂಭಿಸಿದ್ದ ಕಾಸರಗೋಡು ಜಿಲ್ಲೆಯ ಕುಂಬಳೆ ನಿವಾಸಿ ಅಮೃತಾ ಜೋಶಿ 60 ದಿವಸಗಳ ಸಂಚಾರ ಪೂರೈಸಿದ್ದಾರೆ.
2022ರ ಫೆಬ್ರವರಿ 5ರಂದು ಕೇರಳದ ಕಲ್ಲಿಕೋಟೆಯಿಂದ ಸಂಚಾರ ಆರಂಭಿಸಿದ್ದ ಅಮೃತಾ ಜೋಶಿ ತಮಿಳುನಾಡು, ಆಂಧ್ರ ಪ್ರದೇಶ, ಒಡಿಸ್ಸಾ, ಪಶ್ಚಿಮ ಬಂಗಾಲ, ಅಸ್ಸಾಂ, ಮೇಘಾಲಯ, ತ್ರಿಪುರಾ, ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಸಿಕ್ಕಿಂ ರಾಜ್ಯಗಳನ್ನು ಸಂದರ್ಶಿಸಿದ್ದಾರೆ. ಈಶಾನ್ಯ ರಾಜ್ಯಗಳ ಭೇಟಿಯ ಜೊತೆಗೆ ನೆರೆಯ ಬಾಂಗ್ಲಾದೇಶ, ಮ್ಯಾನ್ಮಾರ್ಗಳನ್ನು ಕೂಡ ಅಮೃತಾ ಸಂದರ್ಶಿಸಿದ್ದಾರೆ. ಇದುವರೆಗೆ 8,040 ಕಿ.ಮೀ. ಯಾನ ಪೂರೈಸಿದ್ದಾಗಿ ಅಮೃತಾ ತಿಳಿಸಿದ್ದಾರೆ.
ಮುಂದೆ ನೇಪಾಳದಿಂದ ಆರಂಭಿಸಿ ಬಿಹಾರ, ಝಾರ್ಖಂಡ್, ಛತ್ತೀಸ್ಗಢ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಲಡಾಖ್, ಪಂಜಾಬ್, ಹರಿಯಾಣ, ದಿಲ್ಲಿ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಗೋವಾ, ಕರ್ನಾಟಕ ತಲುಪಲಿದ್ದು ಕೊನೆಯಲ್ಲಿ ಕೇರಳದ ಕಾಸರಗೋಡಿನಲ್ಲಿ ಯಾತ್ರೆಯನ್ನು ಮುಕ್ತಾಯ ಮಾಡಲಿದ್ದಾರೆ.
“ಸಿ.ಆರ್.ಎಫ್ ವುಮೆನ್ ಆನ್ ವೀಲ್ಸ್’ ಎಂಬ ಕ್ಲಬ್ ಸದಸ್ಯೆಯಾಗಿರುವ ಅಮೃತಾ ಜೋಶಿ ಕುಂಬಳೆ ನಿವಾಸಿಗಳಾದ ದಿ| ಅಶೋಕ್ ಜೋಶಿ ಮತ್ತು ಅನ್ನಪೂರ್ಣ ಜೋಶಿ ದಂಪತಿಯ ಕಿರಿಯ ಪುತ್ರಿ. ಅಮೃತಾ ಜೋಶಿ ದೇಶ ಸಂಚಾರಕ್ಕೆ ವಿವಿಧ ಸಂಘಟನೆಗಳ ಬೆಂಬಲವೂ ಸಿಕ್ಕಿದೆ.
ಈಶಾನ್ಯ ರಾಜ್ಯದ ಪ್ರಯಾಣದ ಬಗ್ಗೆ ಎಲ್ಲರೂ ಆ ರಾಜ್ಯಗಳು ಸುರಕ್ಷಿತವಲ್ಲ ಎಂದಿದ್ದರು. ಆದರೆ ಈ ಯಾನದ ಬಳಿಕ ಈಶಾನ್ಯ ರಾಜ್ಯಗಳು ಸುರಕ್ಷಿತ ಸ್ಥಳ ಮತ್ತು ಅಲ್ಲಿನ ಜನರು ಮೃದು ಮನಸ್ಸಿನವರು ಎಂದು ಹೇಳುತ್ತೇನೆ. ಅವರ ಪ್ರೀತಿ ಮತ್ತು ಬೆಂಬಲದಿಂದಾಗಿ ಇಡೀ ಭಾರತ ಯಾನವನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದೇನೆ ಎಂದು ಅಮೃತಾ ಜೋಶಿ ಹೇಳಿದ್ದಾರೆ.
Youngest solo rider Amrutha Joshi from Kerala to cover northeast by bike.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:52 am
Mangaluru Staff
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am