ಬ್ರೇಕಿಂಗ್ ನ್ಯೂಸ್
21-12-21 10:54 pm Mangalore Correspondent ಕರಾವಳಿ
ಮಂಗಳೂರು, ಡಿ.21 : ಪ್ರಧಾನಿ ಮೋದಿ ಕಾಶಿ ವಿಶ್ವನಾಥನಿಗೆ ಕಾರಿಡಾರ್ ನಿರ್ಮಿಸಿದ್ದಾರೆ. ರಾಮ ಮಂದಿರಕ್ಕೂ ಕಾರಿಡಾರ್ ಮಾಡಲಾಗುತ್ತಿದೆ. ಮುಂದೆ ಮಥುರಾದಲ್ಲಿಯೂ ಕೃಷ್ಣನ ಕಾರಿಡಾರ್ ಆಗಲಿದೆ. ಕೈಲಾಸ ಶಿಖರ ಎಂದೇ ಖ್ಯಾತಿವೆತ್ತಿರುವ ರುದ್ರಭಯಂಕರ ಆವಾಸ ಸ್ಥಾನ ಕಾರಿಂಜೇಶ್ವರನಲ್ಲಿ ಕಾರಿಡಾರ್ ಮಾಡುವುದಕ್ಕೆ ಹಿಂದು ಸಮಾಜಕ್ಕೆ ಅಸಾಧ್ಯವೇ ? ಅದೇನೂ ಸಾಧ್ಯವಾಗದ ಮಾತಲ್ಲ. ಆದರೆ, ಕಾರಿಂಜೇಶ್ವರನ ಆಲಯವನ್ನು ಹಿಂದು ಸಮಾಜಕ್ಕೆ ಬಿಟ್ಟು ಕೊಡಿ.. ನಾವು ಹಿಂದು ಸಮಾಜದ ಸಾಮರ್ಥ್ಯವನ್ನು ತೋರಿಸುತ್ತೇವೆ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಗುಡುಗಿದ್ದಾರೆ.
ಕಾರಿಂಜೇಶ್ವರ ಬೆಟ್ಟದ ಆಸುಪಾಸಿನಲ್ಲಿ ಗಣಿಗಾರಿಕೆ ನಿಲ್ಲಿಸಬೇಕು ಎಂದು ಆಗ್ರಹಿಸಿ, ಹಿಂದು ಜಾಗರಣಾ ವೇದಿಕೆ ವತಿಯಿಂದ ಮಂಗಳೂರಿನ ಮಿನಿ ವಿಧಾನಸೌಧದ ಬಳಿ ನಡೆದ ಧರಣಿ ಕಾರ್ಯಕ್ರಮದಲ್ಲಿ ಸ್ವಾಮೀಜಿ ಈ ಮಾತುಗಳನ್ನಾಡಿದ್ದಾರೆ.


ಕಾರಿಂಜೇಶ್ವರದ ದೇವಸ್ಥಾನ ಮುಜರಾಯಿ ಇಲಾಖೆಯಲ್ಲಿದೆ. ಅದನ್ನು ಸರಕಾರಕ್ಕೆ ಸುರಕ್ಷಿತವಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಅಂತಾದರೆ ಹಿಂದು ಸಮಾಜಕ್ಕೆ ಬಿಟ್ಟುಕೊಡಲಿ. ಅಲ್ಲಿನ ಬೆಟ್ಟದ ತುದಿಯಲ್ಲಿರುವ ಶಿವನ ಆಲಯ ಬಿರುಕು ಬಿಟ್ಟಿದೆ. 360 ಡಿಗ್ರಿ ನೇರ ಇರಬೇಕಾದ ಧ್ವಜ ಸ್ತಂಭ ಡೈನಮೈಟ್ ಸ್ಫೋಟಕ್ಕೆ ನಲುಗಿ ಅಡ್ಡಲಾಗಿ ನಿಂತಿದೆ. ಸುತ್ತಲಿನ ಕಾಡಿನ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಕೂಡದು, ಅದರಿಂದ ದೇವಸ್ಥಾನಕ್ಕೆ ಧಕ್ಕೆಯಾಗುತ್ತದೆ ಎಂಬ ನಮ್ಮ ಕೂಗು ಜಿಲ್ಲಾಧಿಕಾರಿಗಳಿಗೆ ಕೇಳಿಸಿಲ್ಲವಾದರೇ ನಾವು ಯಾರಿಗೆ ಹೇಳಬೇಕು.


ಅಲ್ಲಿ ಅಕ್ರಮವೋ, ಸಕ್ರಮವೋ ಅದರ ಬಗ್ಗೆ ನಮ್ಮ ತಂಟೆ ತಕರಾರಿಲ್ಲ. ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆಯನ್ನೇ ನಡೆಸಬಾರದು ಅನ್ನುವುದು ನಮ್ಮ ಬೇಡಿಕೆ. ದಕ್ಷಿಣದ ಭೂಕೈಲಾಸ ಎಂದು ಹೆಸರಾಗಿರುವ ಕ್ಷೇತ್ರಕ್ಕೆ ಗಣಿಗಾರಿಕೆಯಿಂದ ಧಕ್ಕೆ ಬರುವುದಿದ್ದರೆ ಅದನ್ನು ತಡೆಯಲು ಹಿಂದು ಸಮಾಜ ಅಧಿಕಾರಸ್ಥರಲ್ಲಿ ಅಲವತ್ತುಕೊಳ್ಳಬೇಕೇ.. ನಿಮಗೆ ನಿಲ್ಲಿಸಲು ಸಾಧ್ಯವಾಗದಿದ್ದರೆ ಹಿಂದು ಸಮಾಜಕ್ಕೆ ಹೇಗೆ ನಿಲ್ಲಿಸಬೇಕು ಅನ್ನುವುದು ಗೊತ್ತಿದೆ. ಸಮಸ್ತ ಹಿಂದು ಸಮಾಜದ ಬಾಂಧವರು ಗಣಿಗಾರಿಕೆ ನಡೆಸುವಲ್ಲಿಗೆ ಮುತ್ತಿಗೆ ಹಾಕುತ್ತೇವೆ. ನಾವೇ ಅಲ್ಲಿನ ಗಣಿಗಾರಿಕೆ ನಿಲ್ಲಿಸುತ್ತೇವೆ. ಅದರಿಂದ ನಮಗೆ ಜೈಲು ಪಾಲಾಗುವುದಾದರೆ ಅದಕ್ಕೆ ಸಿದ್ಧರಿದ್ದೇವೆ. ಶಿವನ ಆಲಯದ ಉಳಿವಿಗಾಗಿ ನಾವು ಜೈಲು ಪಾಲಾಗುವುದಕ್ಕೆ ಯಾವುದೇ ಭಯ ಪಡುವುದಿಲ್ಲ ಎಂದು ವಜ್ರದೇಹಿ ಸ್ವಾಮೀಜಿ ಹೇಳಿದರು.

ಹಿಂದು ಸಮಾಜ ಶಾಂತಿಯುತ ಹೋರಾಟ ಮಾಡಿಕೊಂಡು ಬಂದಿದೆ. ಆದರೆ, ಆಡಳಿತ ನಮ್ಮ ಆಗ್ರಹಕ್ಕೆ ಕಿವಿಕೊಡದೇ ಇರುವುದರಿಂದ, ಇಂದು ನಾವು ಸೂರ್ಯ ನಾರಾಯಣನ ಬಿಸಿಲ ಝಳದ ನಡುವೆ ಈ ರಸ್ತೆಯಲ್ಲಿ ಕುಳಿತುಕೊಳ್ಳುವ ಸ್ಥಿತಿ ಬಂದಿದೆ. ನಮ್ಮ ಪಣಕ್ಕೆ ಸೂರ್ಯ ನಾರಾಯಣನೇ ಸಾಕ್ಷಿ. ಹಿಂದು ಸಮಾಜದ ಸಮಸ್ತರು ಗಣಿಗಾರಿಕೆ ಸ್ಥಳಕ್ಕೆ ನುಗ್ಗುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಭಾವಿಸುತ್ತೇನೆ ಎಂದರು ವಜ್ರದೇಹಿ ಶ್ರೀಗಳು.

ಕಾಸರಗೋಡಿನ ಶಿವಾನಂದ ಸರಸ್ವತಿ ಸ್ವಾಮೀಜಿ, ವಿಹಿಂಪ ಮುಖಂಡ ಶರಣ್ ಪಂಪ್ವೆಲ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ ಮಹಿಳೆಯರು ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Hindu Jagarana Vedike (HJV) took out a protest march towards the DC’s office on Tuesday December 21 demanding a permanent end on quarrying and mining activities in the area around Karinjeshwar temple in Bantwal taluk.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 07:30 pm
HK News Staffer
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am