ಬ್ರೇಕಿಂಗ್ ನ್ಯೂಸ್
25-06-21 05:19 pm Mangalore Correspondent ಕರಾವಳಿ
ಮಂಗಳೂರು, ಜೂನ್ 25: ಕಾಂಗ್ರೆಸಿನವರು 2023ರಲ್ಲಿ ಅಧಿಕಾರಕ್ಕೆ ಬರ್ತೇವೆ ಎಂದು ಕನಸು ಕಾಣುತ್ತಿದ್ದಾರೆ. ಆದರೆ, ಸಿಎಂ ಯಾರು ಎನ್ನುವುದರ ಬಗ್ಗೆಯೇ ಈಗ ಅವರಲ್ಲಿ ಮುಸುಕಿನ ಗುದ್ದಾಟ ಆರಂಭವಾಗಿದೆ. ಒಂದ್ಕಡೆ ಶಿವಕುಮಾರ್, ಸಿದ್ದರಾಮಯ್ಯ, ಮತ್ತೊಂದ್ಕಡೆ ಪರಮೇಶ್ವರ್ ಗುಂಪು ಹೀಗೆ ಅವರಲ್ಲೇ ಮೂರಾಬಟ್ಟೆಯಾಗಿದೆ. ಅಧಿಕಾರಕ್ಕೆ ಬರುವುದು ನಿಶ್ಚಿತ ಇಲ್ಲ. ಆದ್ರೂ ಸಿಎಂ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ..
ಹೀಗೆಂದು ಕಾಂಗ್ರೆಸ್ ನಾಯಕರನ್ನು ಕೃಷಿ ಸಚಿವ ಬಿ.ಸಿ. ಪಾಟೀಲ್ ವ್ಯಂಗ್ಯವಾಡಿದ್ದಾರೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಡೀಲು ಭೂಮಿಯ ಕೃಷಿ ಮಾಡುವ ವಿಚಾರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿ.ಸಿ.ಪಾಟೀಲ್, 2023ರಲ್ಲಿಯೂ ಬಿಜೆಪಿ ಪಕ್ಷವೇ ಅತ್ಯಂತ ಬಹುಮತದಿಂದ ಗೆದ್ದು ಬರಲಿದೆ. ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಆದರೆ, ಕಾಂಗ್ರೆಸಿಗರು ಈಗಲೇ ಸಿಎಂ ಸ್ಥಾನಕ್ಕೆ ಗುದ್ದಾಟ ಆರಂಭಿಸಿದ್ದಾರೆ ಎಂದರು.
ರಮೇಶ್ ಜಾರಕಿಹೊಳಿ ರಾಜಿನಾಮೆ ನೀಡಲು ಮುಂದಾಗಿದ್ದಾರಲ್ಲಾ ಎಂಬ ಪ್ರಶ್ನೆಗೆ, ಜಾರಕಿಹೊಳಿಯವರು ಶಾಸಕರಿದ್ದಾರೆ. ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಅನಿವಾರ್ಯತೆ ಬಂದಿಲ್ಲ. ಖಾಸಗಿ ವಿಚಾರದಲ್ಲಿ ಅವರ ವಿರುದ್ಧ ಕೇಸು ಆಗಿದ್ದು, ನೈತಿಕ ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಪ್ರಕರಣದ ಬಗ್ಗೆ ತನಿಖೆಯಾಗುತ್ತಿದ್ದು, ಏನು ವರದಿ ಬರುತ್ತೋ ಅದರ ನೆಲೆಯಲ್ಲಿ ಸರಕಾರ ಕ್ರಮ ಕೈಗೊಳ್ಳುತ್ತೆ. ನಿರ್ದೋಷಿ ಅಂತ ಬಂದರೆ ಸರಕಾರ ಅವರನ್ನು ಗೌರವಿಸುವ ಕೆಲಸ ಮಾಡಲಿದೆ ಎಂದರು.
ಜಾರಕಿಹೊಳಿ ಈಗ ಮುಂಬೈಗೆ ಹೋಗಿದ್ದಾರಲ್ಲಾ.. ಹಿಂದೆಯೂ ಮುಂಬೈಗೆ ಹೋಗಿ ಸರಕಾರ ಬೀಳಿಸಿದ್ದರು ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ, ಅಂದಿನ ಸಮಯದಲ್ಲಿ ಸರಕಾರವನ್ನು ಬೀಳಿಸುವುದೇ ಉದ್ದೇಶ ಆಗಿತ್ತು. ಅದಕ್ಕಾಗಿ ಮುಂಬೈಗೆ ಹೋಗಿದ್ದೆವು. ಅಂದಿನ ಸ್ಥಿತಿಗೂ ಈಗಿನ ಸ್ಥಿತಿಗೂ ಬಹಳ ವ್ಯತ್ಯಾಸ ಇದೆ. ಈಗ ಬಿಜೆಪಿ ಆಡಳಿತದಲ್ಲಿದೆ. ಪಕ್ಷದಲ್ಲಿ ಆ ರೀತಿಯ ಸನ್ನಿವೇಶ ಇಲ್ಲ. ಎಲ್ಲವೂ ಸರಿಯಾಗೇ ನಡೀತಿದೆ. ಅವರು ಖಾಸಗಿ ವಿಚಾರದಲ್ಲಿ ಮುಂಬೈಗೆ ಹೋಗಿದ್ದಾರೆ ಅಷ್ಟೇ.. ಸಿಡಿ ವಿಚಾರದಲ್ಲಿ ಸರಕಾರ ಕಾನೂನು ಪ್ರಕಾರ ನಡೆದುಕೊಳ್ಳುತ್ತಿದೆ ಎಂದು ಹೇಳಿದರು.
Video:
ಅಧಿಕಾರಕ್ಕೆ ಬರೋ ಮೊದ್ಲೇ ಕಾಂಗ್ರೆಸಿನಲ್ಲಿ ಸಿಎಂ ಸ್ಥಾನಕ್ಕೆ ಗುದ್ದಾಟ ಆಗ್ತಿದೆ ; ಬಿ.ಸಿ.ಪಾಟೀಲ್ ವ್ಯಂಗ್ಯ
Posted by Headline Karnataka on Friday, June 25, 2021
Mangalore Minister of State for Agriculture of Karnataka BC Patil slams Congress leaders to say they are fighting for the position even before power. There is no chance of Congress into power in Karnataka he said.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm