ಬ್ರೇಕಿಂಗ್ ನ್ಯೂಸ್
04-06-21 05:57 pm Mangalore Correspondent ಕರಾವಳಿ
ಮಂಗಳೂರು, ಜೂನ್ 4: ಕೊರೊನಾ ಲಸಿಕೆಯ ಕೊರತೆಯಿಂದಾಗಿ ಆರೋಗ್ಯ ಕೇಂದ್ರಗಳಲ್ಲಿ ನಿರಂತರ ಎಡವಟ್ಟು ಆಗುತ್ತಿದೆ. ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ನೀಡುವ ಸೂಚನೆಯಿಂದಲೇ ಎಡವಟ್ಟು ಆಗುತ್ತಿದ್ಯಾ ಅಥವಾ ಲಸಿಕೆ ನೀಡುವ ಜವಾಬ್ದಾರಿ ವಹಿಸಿಕೊಂಡ ಸ್ಥಳೀಯ ಸಿಬಂದಿ ಎಡವಟ್ಟು ಮಾಡಿಕೊಳ್ತಿದ್ದಾರೋ ಗೊತ್ತಿಲ್ಲ.. ಜನರು ಮಾತ್ರ ಲಸಿಕೆಯ ವಿಚಾರದಲ್ಲಿ ಗೊಂದಲಕ್ಕೆ ಸಿಲುಕಿದ್ದು ಪ್ರತಿದಿನ ಬೆಳ್ಳಂಬೆಳಗ್ಗೆ ಲಸಿಕಾ ಕೇಂದ್ರಕ್ಕೆ ಬಂದು ಸರತಿ ನಿಲ್ಲುವ ಪ್ರಮೇಯ ಎದುರಾಗಿದೆ.
ಮಂಗಳೂರು ನಗರದ ಗಾಂಧಿನಗರದ ಶಾಲೆಯಲ್ಲಿ ಇಂದು ನಸುಕಿನ ನಾಲ್ಕು ಗಂಟೆಯ ವೇಳೆಗೇ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಸ್ಥಳೀಯ ಕಾರ್ಪೊರೇಟರ್ ಗಣೇಶ್ ಮತ್ತಿತರ ಜನಪ್ರತಿನಿಧಿಗಳು ಮೊದಲು ಬಂದವರಿಗೆ ಲಸಿಕೆ ಎಂದು ಹೇಳಿದ್ದರಿಂದ ನೂರಾರು ಜನರು ನಾಲ್ಕು ಗಂಟೆಯ ಮೊದಲೇ ಬಂದು ಸೇರಿದ್ದರು. ಬೆಳಗ್ಗೆ ಆರು ಗಂಟೆಯ ಹೊತ್ತಿಗೆ 150ಕ್ಕೂ ಹೆಚ್ಚು ಜನರು ಸೇರಿದ್ದರು. ಬೆಳಗ್ಗೆ ಎಂಟೂವರೆ ಗಂಟೆ ಹೊತ್ತಿಗೆ ವೈದ್ಯಾಧಿಕಾರಿಗಳು ಮತ್ತು ಲಸಿಕೆ ನೀಡುವ ಸಿಬಂದಿ ಆಗಮಿಸಿದ್ದು ಇಷ್ಟೊಂದು ಜನರನ್ನು ನೋಡಿ ತಡಬಡಾಯಿಸಿದರು.
ಇಲ್ಲಿ ಸೇರಿದ ಮಾತ್ರಕ್ಕೆ ಯಾರಿಗೂ ಲಸಿಕೆ ನೀಡಲು ಸಾಧ್ಯವಿಲ್ಲ. ನಮಗೆ ಜಿಲ್ಲಾಧಿಕಾರಿಗಳ ಸೂಚನೆ ಇದೆ, ಕೋವಿನ್ ಏಪ್ ನಲ್ಲಿ ರಿಜಿಸ್ಟರ್ ಮಾಡಿ ಟೋಕನ್ ಸಿಕ್ಕಿದ್ದವರಿಗೆ ಮಾತ್ರ ಲಸಿಕೆ ನೀಡಲಾಗುವುದು ಎಂದು ಹೇಳಿದ್ದಲ್ಲದೆ, ನೋಂದಣಿ ಮಾಡಿದವರಿಗೆ ಮಾತ್ರ ಲಸಿಕೆ ಎಂದು ಅಲ್ಲಿಯೇ ಬೋರ್ಡ್ ಹಾಕಿದ್ರು. ಇದರಿಂದ ಅಲ್ಲಿ ಸೇರಿದ್ದ ಮಂದಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ಜನಪ್ರತಿನಿಧಿಗಳು ನಮಗೆ ಮೆಸೇಜ್ ಮಾಡಿದ್ದರಿಂದ ಬಂದು ಸೇರಿದ್ದೆವು. ನೀವು ಈ ತರ ಹೇಳಿದರೆ, ನಾವು ಏನು ಮಾಡಬೇಕು ಎಂದು ಪ್ರಶ್ನೆ ಮಾಡುತ್ತಿದ್ದರು.
ಬೆಳ್ಳಂಬೆಳಗ್ಗೆ ಭಾರೀ ಮಳೆಯ ನಡುವೆ ವೃದ್ಧರು, ವಯಸ್ಸಾದ ಮಹಿಳೆಯರು ಕೂಡ ಬಂದು ಸರತಿ ನಿಂತಿದ್ದರು. ಈ ಬಗ್ಗೆ ಸ್ಥಳೀಯ ಮುಖಂಡರಲ್ಲಿ ಪ್ರಶ್ನೆ ಮಾಡಿದರೆ, ಸಾರಿ ಸಾರಿ ಎನ್ನುತ್ತಾ ಕೈಮುಗಿದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದರು. ಗಾಂಧಿನಗರದ ಶಾಲೆಗೆ 150 ಲಸಿಕೆ ಬಂದಿದ್ದು, ಕೋವಿನ್ ಏಪ್ ನಲ್ಲಿ ನೋಂದಣಿ ಮಾಡಿದವರಿಗೆ ಮಾತ್ರ ಕೊಡಲಾಗಿತ್ತು. ಏಪ್ ನಲ್ಲಿ ನೋಂದಣಿ ಮಾಡಿಕೊಂಡವರು ನಿಧಾನಕ್ಕೆ ಬಂದು ಲಸಿಕೆ ಪಡೆದು ಸಾಗುತ್ತಿದ್ದರು.
ಲಸಿಕೆ ವಿಚಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳೇ ಜನರನ್ನು ಗೊಂದಲಕ್ಕೆ ದೂಡಿದ್ದರು. ಕಳೆದ ಎರಡು ಮೂರು ಬಾರಿ ಇದೇ ಕೇಂದ್ರದಲ್ಲಿ ಲಸಿಕೆ ನೀಡಲಾಗಿತ್ತು. ಜನರು ನೇರವಾಗಿ ಬಂದು ಆಧಾರ್ ಕಾರ್ಡ್ ತೋರಿಸಿ ಲಸಿಕೆ ಪಡೆಯುತ್ತಿದ್ದರು. ಆದರೆ, ಎರಡು ದಿನಗಳ ಹಿಂದೆ ಜನರು ಹೆಚ್ಚಾಗಿ ಸೇರಿದ್ದಲ್ಲದೆ, ಗಲಾಟೆ ಶುರು ಮಾಡಿದ್ದರು. ಇದರಿಂದಾಗಿ ಆರೋಗ್ಯ ಇಲಾಖೆಯಿಂದಲೇ ಕೋವಿನ್ ಏಪ್ ನೋಂದಣಿ ಮಾಡಿ ಬರುವಂತೆ ಕಡ್ಡಾಯ ಮಾಡಿದ್ದರು. ಈ ವಿಚಾರ ತಿಳಿಯದೆ ಇಂದು ಮತ್ತೆ ಜನರು ಎಡವಟ್ಟು ಮಾಡಿಕೊಂಡಿದ್ದಾರೆ. ಜನಪ್ರತಿನಿಧಿಗಳೇ ಸ್ಥಳೀಯರನ್ನು ಮತ್ತಷ್ಟು ಗೊಂದಲಕ್ಕೆ ತಳ್ಳಿದ್ದರು.
Video:
Hundreds of people stand in a huge crowd for vaccine high drama created in Managudda for vaccines. Old aged people cursed authorities for their negligence.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
16-05-25 10:27 pm
Mangalore Correspondent
Siddaramaiah, Cm Mangalore, BJP black flag: ಸ...
16-05-25 06:05 pm
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
16-05-25 11:06 pm
Mangalore Correspondent
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm