ಬ್ರೇಕಿಂಗ್ ನ್ಯೂಸ್
29-01-21 05:55 pm Mangalore Correspondent ಕರಾವಳಿ
ಮಂಗಳೂರು, ಜ.29: ಉಳ್ಳಾಲ ಪಾಕಿಸ್ಥಾನ ಆಗುತ್ತಿದೆ ಎನ್ನುವ ತನ್ನ ಹೇಳಿಕೆಯನ್ನು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪುನರುಚ್ಚರಿಸಿದ್ದಾರೆ. ನಗರದಲ್ಲಿ ಈ ಕುರಿತ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಭಟ್, ಪಾಕಿಸ್ಥಾನ ಯಾವಾಗ ವಿಭಜನೆಯಾಗಿ ಬೇರೆಯಾಯ್ತೋ ಅಂದಿನಿಂದಲೇ ಅಲ್ಲಿನ ಜನರ ಮಾನಸಿಕತೆಯೇ ಬದಲಾಯ್ತು. ಅದಕ್ಕೂ ಹಿಂದೆ ಸಿಂಧು ನದಿ ಹರಿಯುವ ತೀರ ಪ್ರದೇಶ ಭಾರತೀಯರೇ ಆಗಿದ್ದರು. ಭಾರತೀಯರಾಗೇ ಬದುಕುತ್ತಿದ್ದರು. ವಿಭಜನೆಯ ಬಳಿಕ ಹಿಂದುಗಳಿಗೆ ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಮಾಡಿದ್ರು. ಹಿಂದು ಹೆಣ್ಮಕ್ಕಳನ್ನು ಅತ್ಯಾಚಾರ ಮಾಡಿದ್ರು. ಈಗ ಅಂಥದ್ದೇ ಪರಿಸ್ಥಿತಿ ಉಳ್ಳಾಲಕ್ಕೆ ಬಂದಿದೆ. ಹಾಗಂತ ನಾನು ಆ ರೀತಿಯ ಹೇಳಿಕೆ ಕೊಟ್ಟಿದ್ದೇನೆ. ನನಗೆ ಆ ಬಗ್ಗೆ ಪಶ್ಚಾತ್ತಾಪ ಏನೂ ಇಲ್ಲ ಎಂದಿದ್ದಾರೆ.
ಉಳ್ಳಾಲದಲ್ಲಿಯೂ ಈಗ ಅದೇ ರೀತಿಯ ಕೆಲಸಗಳಾಗುತ್ತಿವೆ. ಹೆಣ್ಮಕ್ಕಳ ಮೇಲೆ ಚುಡಾಯಿಸುವುದು, ಅತ್ಯಾಚಾರ ಮಾಡುವುದು ನಡೆಯುತ್ತಿದೆ. ಮತಾಂತರ, ಲವ್ ಜಿಹಾದ್ ವ್ಯಾಪಕವಾಗಿದೆ. ಈಗ ಪಾಕಿಸ್ಥಾನದಲ್ಲಿ ಅದೇ ನಡೆಯುತ್ತಿದೆಯಲ್ಲ. ಹಾಗಾಗಿ ಉಳ್ಳಾಲವನ್ನು ಪಾಕಿಸ್ಥಾನದಂತಾಗಿದೆ ಎಂದಿದ್ದೇನೆ. ಪಾಕಿಸ್ಥಾನದಲ್ಲಿಯೂ ಹಿಂದುಗಳಿಗೆ ಉಳಿಗಾಲ ಇಲ್ಲದಂತಾಗಿದೆ.
ಅದಕ್ಕಾಗಿ ನಾನು ಹೇಳುತ್ತಿರುವುದು ಉಳ್ಳಾಲದಲ್ಲಿ ಹಿಂದು ಒಬ್ಬನನ್ನು ಶಾಸಕರನ್ನಾಗಿ ಮಾಡಲಿ. ಅಲ್ಲಿನ ಜನ ಯಾಕೆ ಮುಸ್ಲಿಮರನ್ನೇ ಶಾಸಕರಾಗಿ ಮಾಡಬೇಕು. ನಾವು ಹಿಂದು, ಮುಸ್ಲಿಂ, ಕ್ರಿಸ್ತಿಯನ್ನರನ್ನು ಶಾಸಕರನ್ನಾಗಿ ಮಾಡುತ್ತೇವೆ. ಉಳ್ಳಾಲದಲ್ಲಿಯೂ ಭಾರತೀಯ ಮನೋಭಾವನೆ ಬೆಳೆಯಬೇಕು. ಭಾರತೀಯ ಅನ್ನುವ ಭಾವನೆ ಬಿಟ್ಟು ಹೋಗಬಾರದು ಎನ್ನುವ ನೆಲೆಯಲ್ಲಿ ನಾನು ಪಾಕಿಸ್ಥಾನದಂತಾಗಿದೆ ಎಂದಿದ್ದೇನೆ. ಅಲ್ಲಿನ ಸ್ಥಿತಿ ಬದಲಾಗಲಿ ಎಂಬ ಆಶಯ ನನ್ನದು ಎಂದು ಸ್ಪಷ್ಟನೆ ನೀಡಿದ್ದಾರೆ.
Video:
Ullal is Pakistan it can never change says RSS leader Kalladka Prabhakar Bhat. He has also triggered another controversy stating that if the people of Ullal have guts they should elect a non-Muslim MLA from Mangaluru constituency.
09-05-26 10:41 pm
HK News Desk
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
ಇರು ಅಂದ್ರೆ ಇರ್ತೀನಿ, ಹೈಕಮಾಂಡ್ ಮಾತನ್ನಷ್ಟೇ ಕೇಳ್ತ...
06-05-26 07:41 pm
09-05-26 12:06 pm
HK News Staffer
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ; ಶತ್ರುರಾಷ್ಟ...
09-05-26 11:14 am
ಬಂಗಾಳದಲ್ಲಿ ಕೇಸರಿ ಯುಗಾರಂಭ ; ಮೊದಲ ಬಿಜೆಪಿ ಸಿಎಂ ಆ...
08-05-26 06:45 pm
ದ್ರಾವಿಡರ ನಾಡಲ್ಲಿ ದಳಪತಿ ವಿಜಯ್ ಸರ್ಕಾರ್ ! ಮ್ಯಾಜಿ...
08-05-26 06:38 pm
ಒಬ್ಬನಿಗಾಗಿ ಒಂದೂವರೆ ಗಂಟೆ ಕಾದು ನಿಂತ ವಿಮಾನ; ಇತರ...
08-05-26 12:06 pm
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
09-05-26 10:29 pm
HK News Desk
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm
ಸಾಲ ಕೊಟ್ಟ ಮಹಿಳೆಯ ಜೀವ ತೆಗೆದ ಕಟುಕರು; ಅಪಘಾತದ ನಾಟ...
09-05-26 08:29 pm
ಆರೋಪಿಯಿಂದಲೇ ಲಂಚ ; ಒಂದು ಲಕ್ಷ ಪಡೆಯುತ್ತಿದ್ದಾಗ ಗು...
09-05-26 06:42 pm
ಸ್ನಾನಕ್ಕೆ ತೆರಳಿದ್ದ ಸ್ನೇಹಿತೆಯರು ನದಿಯಲ್ಲಿ ಮುಳುಗ...
09-05-26 09:54 am