ಬ್ರೇಕಿಂಗ್ ನ್ಯೂಸ್
27-01-21 12:13 pm Mangalore Correspondent ಕರಾವಳಿ
ಮಂಗಳೂರು, ಜ. 27: ಗುರುಪುರವನ್ನು ಸುತ್ತಿಕೊಂಡು ಹರಿಯುವ ಫಲ್ಗುಣಿ ನದಿಯ ನೀರು ದಿಢೀರ್ ಕಪ್ಪುಬಣ್ಣಕ್ಕೆ ತಿರುಗಿದೆ. ಕೆಲವು ಕಡೆ ನೀರಿನಲ್ಲಿ ಮೀನುಗಳು ಸತ್ತು ಬಿದ್ದಿರುವುದು ಕಂಡುಬಂದಿದೆ.
ಇತ್ತ ನದಿ ನೀರು ಕಲುಷಿತ ಆಗಿರುವ ಮಧ್ಯೆಯೇ ಉಳಾಯಿಬೆಟ್ಟು, ಗುರುಪುರ, ಕಾರಮೊಗರು, ಏತಮೊಗರು ಆಸುಪಾಸಿನ ಪ್ರದೇಶಗಳಲ್ಲಿ ನದಿ ತೀರದ ನಿವಾಸಿಗಳ ಬಾವಿ ನೀರು ಕೂಡ ಕಪ್ಪಾಗಿದ್ದು ಮಾಲಿನ್ಯ ಮಿಶ್ರಿತವಾಗಿರುವುದು ಕಂಡುಬಂದಿದೆ.
ಗೋಳಿದಡಿಗುತ್ತಿನ ಶ್ರೀ ಮಹಾಕಾಲೇಶ್ವರ ದೇವರ ಉಜ್ಜೈನಿ ತೀರ್ಥಬಾವಿಯ ನೀರು ಸಂಪೂರ್ಣವಾಗಿ ಕಲುಷಿತವಾಗಿದೆ. ಎಂಆರ್ ಪಿಎಲ್, ಎಸ್ ಇಝೆಡ್ ವ್ಯಾಪ್ತಿಯ ಕಾರ್ಖಾನೆಗಳಿಂದ ನದಿಗೆ ಬಿಡುತ್ತಿರುವ ನೀರಿನಿಂದಾಗಿ ಮಳವೂರು ಡ್ಯಾಂನಲ್ಲಿ ಮತ್ತು ನದಿಯ ನೀರು ಕಪ್ಪಾಗಿದೆ. ಅಲ್ಲದೆ, ಆಸುಪಾಸಿನ ಬಾವಿಗಳ ನೀರು ಮಲಿನವಾಗಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಗುರುಪುರ, ಕಂದಾವರ, ಗಂಜಿಮಠ ಹಾಗೂ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಗೆ ಫಲ್ಗುಣಿ ನದಿಯಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ನದಿ ನೀರನ್ನು ಶುದ್ದೀಕರಿಸಿ ಪೂರೈಕೆ ಮಾಡಲಾಗುತ್ತದೆ ಎಂದು ಪಂಚಾಯತ್ ಅಧಿಕಾರಿಗಳು ಹೇಳುತ್ತಿದ್ದರೂ ಈ ನೀರು ಕುಡಿಯಲು ಯೋಗ್ಯವಲ್ಲ. ಶುದ್ದೀಕರಣ ಘಟಕವೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ದೂರಿನ ಪ್ರಕಾರ, ಉಪ ತಹಶೀಲ್ದಾರ್ ಶಿವಪ್ರಸಾದ್ ಮತ್ತು ಕಂದಾಯ ನಿರೀಕ್ಷಕ ನವನೀತ ಮಾಳವ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಈ ಹಿಂದೆ ಪಿಲಿಕುಳ ನಿಸರ್ಗಧಾಮದ ಬಳಕೆಗೆ ನೀಡಲಾಗುತ್ತಿದ್ದ ಮಂಗಳೂರು ನಗರಪಾಲಿಕೆಯ ವ್ಯಾಪ್ತಿಯ ತ್ಯಾಜ್ಯ ನೀರನ್ನು ಈಗ ಪಚ್ಚನಾಡಿಯಿಂದ ಮಂಜಲ್ಪಾದೆಯಾಗಿ ಫಲ್ಗುಣಿ ನದಿಗೆ ನೇರವಾಗಿ ಬಿಡಲಾಗುತ್ತಿದೆ. ಶುದ್ಧೀಕರಿಸದೆ ನೀರನ್ನು ಕೊಡುತ್ತಿದ್ದುದಕ್ಕೆ ಪಿಲಿಕುಳ ನಿಸರ್ಗಧಾಮ ಆಡಳಿತ ಆಕ್ಷೇಪಿಸಿ, ಪಾಲಿಕೆಯ ತ್ಯಾಜ್ಯ ನೀರನ್ನೇ ನಿರಾಕರಿಸಿತ್ತು. ಆನಂತರ ತ್ಯಾಜ್ಯ ನೀರನ್ನು ಮಂಜಲ್ಪಾದೆಯಿಂದ ನೇರವಾಗಿ ಫಲ್ಗುಣಿ ನದಿಗೆ ಬಿಡಲಾಗುತ್ತಿದೆ.
ಈ ಬಗ್ಗೆ ಹಿಂದೊಮ್ಮೆ ಮೂಡುಶೆಡ್ಡೆಯಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದೂ ಆಗಿತ್ತು. ಈಗ ನದಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು ಕಾರ್ಖಾನೆಗಳ ತ್ಯಾಜ್ಯದ ಜೊತೆಗೆ ಇಂಥ ತ್ಯಾಜ್ಯ ನೀರಿನ ಮಾಲಿನ್ಯವೂ ಕಾರಣವಾಗಿದೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಇನ್ನೂ ಜಾಗೃತಗೊಂಡಿಲ್ಲ.
Factories Pollution surrounding river Phalguni in Mangalore has turned the river black by killing large number of fishes.
01-04-25 10:45 pm
HK News Desk
Karnataka diesel price hike: ಹಾಲು, ಟೋಲ್, ಕರೆಂ...
01-04-25 09:35 pm
ರಾಜ್ಯ ಸರ್ಕಾರದಿಂದ ಯುಗಾದಿಗೆ ಬೆಲೆ ಏರಿಕೆ ಕೊಡುಗೆ ;...
01-04-25 03:49 pm
Karnataka toll hike, Milk: ರಾಜ್ಯದ ಜನತೆಗೆ ಎಪ್ರ...
01-04-25 12:26 pm
ಕಳೆದ 11 ವರ್ಷಗಳಿಂದ ನೀವೇ ಅಧಿಕಾರದಲ್ಲಿ ಮೊಳೆ ಹೊಡೆ...
31-03-25 07:41 pm
31-03-25 09:34 pm
HK News Desk
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
01-04-25 09:38 pm
Mangalore Correspondent
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
Belthangady Accident, Mangalore: ಯಕ್ಷಗಾನ ಮುಗಿ...
31-03-25 12:26 pm
CCB Police, CM Medal, Mangalore: ಮಂಗಳೂರು ಪೊಲೀ...
30-03-25 11:02 pm
01-04-25 11:07 pm
Mangalore Correspondent
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm
Mangalore Muda Commissioner, FIR, Noor Zahara...
31-03-25 09:29 pm
Mangalore Derlakatte Robbery attempt; ದೇರಳಕಟ್...
30-03-25 08:59 am