Ut Khader, Mangalore: ಡಿಸಿಎಂ ಆಗೋದು ಮಾಧ್ಯಮದಲ್ಲಿ ನೋಡಿದ್ದೇನೆ, ನಾನ್ಯಾವುದೇ ಸ್ಥಾನದ ಆಕಾಂಕ್ಷಿ ಅಲ್ಲ, ಶಾಸಕನಾದವ ಒಮ್ಮೆಯಾದ್ರೂ ಸ್ಪೀಕರ್ ಆಗ್ಬೇಕು ; ಯುಟಿ ಖಾದರ್ ಪ್ರತಿಕ್ರಿಯೆ

02-06-26 01:06 pm       HK News Staffer   ಕರಾವಳಿ

ಡಿಸಿಎಂ ಆಗುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ, ಆದ್ರೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಈಗಲೂ ಸ್ಪೀಕರ್ ಆಗಿಯೇ ಇದ್ದೇನೆ. ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಸ್ಪೀಕರ್ ಯು.ಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ‌

ಮಂಗಳೂರು, ಜೂನ್ 2: ಡಿಸಿಎಂ ಆಗುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ, ಆದ್ರೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಈಗಲೂ ಸ್ಪೀಕರ್ ಆಗಿಯೇ ಇದ್ದೇನೆ. ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಸ್ಪೀಕರ್ ಯು.ಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ‌

ಡಿಕೆಶಿ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಸೇರಲು ಭಾರೀ ಪೈಪೋಟಿ ಎದುರಾಗಿರುವ ಹಿನ್ನೆಲೆಯಲ್ಲಿ ಕೇಳಿದ ಪ್ರಶ್ನೆಗೆ, ಸಚಿವ ಸ್ಥಾನ ಯಾರಿಗೆ ಕೊಡಬೇಕು, ಯಾವ ಖಾತೆ ಕೊಡಬೇಕು ಎನ್ನೋದು ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಬಿಟ್ಟಿದ್ದು.‌ ಸ್ಥಾನಮಾನ‌ ಕೊಡೋದಾದರೆ ಈವರೆಗಿನ ನನ್ನ ಕೆಲಸ ನೋಡಿ ಕೊಡುತ್ತಾರೆ.‌ 

2023 ರಲ್ಲಿ ಮಂತ್ರಿ ಸ್ಥಾನ ಅಂತ ಇತ್ತು, ಆದ್ರೆ ಸಭಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ.‌ ಅದನ್ನ ನಿಷ್ಠೆಯಿಂದ ನಿಭಾಯಿಸಿದ್ದೇನೆ. ನನಗೆ ಪೋಸ್ಟ್ ಇಂಪೋರ್ಟೆಂಟ್ ಅಲ್ಲ, ವರ್ಕ್ ಇಂಪೋರ್ಟೆಂಟ್. ಸಭಾಧ್ಯಕ್ಷ ಸ್ಥಾನ ಬಿಟ್ಟು ಬಂದ ಮೇಲೆ ರಾಜಕೀಯ ವಿಚಾರದ ಬಗ್ಗೆ ಮಾತನಾಡುತ್ತೇನೆ. ಇಂದು ಮತ್ತೆ ನಾಳೆ ಬೆಂಗಳೂರಿನಲ್ಲಿ ಇರಲಿದ್ದೇನೆ ಎಂದು ಹೇಳಿದರು. 

ರಾಜಕೀಯ ಬೇರೆ, ವರಿಷ್ಠ ನಾಯಕರನ್ನು ಭೇಟಿಯಾಗುವ ವಿಚಾರ ಬೇರೆ. ಶಾಸಕರು ಅಂದ ಮೇಲೆ ಹಿತೈಷಿಗಳಾಗಿ ಭೇಟಿಯಾಗುತ್ತೇವೆ ಎಂದು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವವರ ಬಗ್ಗೆ ಪ್ರತಿಕ್ರಿಯಿಸಿದ ಖಾದರ್, ಸದ್ಯ ಸ್ಪೀಕರ್ ಆಗಿ ಖುಷಿಯಿಂದ ಇದ್ದೇನೆ. ಶಾಸಕನಾದವ ಒಮ್ಮೆಯಾದರೂ ಜೀವನದಲ್ಲಿ ಸ್ಪೀಕರ್ ಆಗಬೇಕು. ನಮ್ಮನ್ನು ಇಷ್ಟು ಬೆಳಸಿದ್ದು ಪಕ್ಷ, ಕಾರ್ಯಕರ್ತರು ಮತ್ತು ಮತದಾರರು. ಮೂರು ವರ್ಷ ಸ್ಪೀಕರ್ ಆಗಿ ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ನನ್ನ ಕೆಲಸ ನೋಡಿ ಬೇರೆ ಜವಾಬ್ದಾರಿ ಕೊಟ್ಟರೆ ನೋಡಿಕೊಳ್ಳುತ್ತೇನೆ ಎಂದು ಮಂಗಳೂರಿನಲ್ಲಿ ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ.