ಬ್ರೇಕಿಂಗ್ ನ್ಯೂಸ್
13-05-26 11:02 pm HK News Desk ಕರಾವಳಿ
ಮಂಗಳೂರು, ಮೇ 13: ಬೀಗ ಹಾಕಿರುವ ಮನೆಗಳಲ್ಲಿ ಸಂಭಾವ್ಯ ಕಳ್ಳತನವನ್ನು ತಡೆಯುವ ನಿಟ್ಟಿನಲ್ಲಿ ಅಂತಹ ಮನೆಗಳ ಮೇಲೆ ನಿಯಮಿತ ಪೊಲೀಸ್ ನಿಗಾವಹಿಸಲು ರಾಜ್ಯದ ವಿವಿಧೆಡೆ ಜಾರಿಗೆ ಬಂದಿರುವ "ಲಾಕ್ಡ್ ಹೌಸ್ ಬೀಟ್ ಸಿಸ್ಟಮ್' (ಎಲ್ಎಚ್ಬಿಎಸ್) ಅನ್ನು ಉಡುಪಿ ನಂತರ ಇದೀಗ ಮಂಗಳೂರು ಕಮಿನಷರೆಟ್ ವ್ಯಾಪ್ತಿಯಲ್ಲೂ ಅನುಷ್ಠಾನ ಮಾಡಲಾಗಿದೆ.
ಸಮುದಾಯ ಪೊಲೀಸ್ ಉಪಕ್ರಮದ ಭಾಗವಾಗಿರುವ "ಲಾಕ್ಸ್ ಹೌಸ್ ಬೀಟ್ ಸಿಸ್ಟಮ್' ಯೋಜನೆ ಮನೆಯನ್ನು ಕಳ್ಳತನದಿಂದ ರಕ್ಷಿಸಲು ಸಹಾಯ ಮಾಡಲಿದೆ. ಬೀಗ ಹಾಕಿರುವ ಮನೆಗಳ ಮೇಲೆ ನಿಯಮಿತ ನಿಗಾ ವಹಿಸುವ ಮೂಲಕ ಮನೆಯ ಮಾಲಕರು ವಾಪಾಸು ಬರುವವ ವರೆಗೆ ಸಂಪೂರ್ಣ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸಲಾಗಿತ್ತದೆ.
ಮನೆ ಮಾಲಕರು ಪ್ರವಾಸ, ಇತರ ಕಾರ್ಯಕ್ರಮಗಳಿಗಾಗಿ ಮನೆಗೆ ಬೀಗ ಹಾಕಿ ತಾತ್ಕಾಲಿಕವಾಗಿ ಹೊರಗೆ ಹೋಗುವ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡುವುದರಿಂದ ಅಂತಹ ಮನೆಗಳ ಮೇಲೆ ಹೆಚ್ಚಿನ ನಿಗಾ ವಹಿಸಲು ಸಾಧ್ಯವಾಗಲಿದೆ. ಈ ಯೋಜನೆ ವೈಯಕ್ತಿಕ ಮನೆಗಳಿಗೆ ಮಾತ್ರ ಅನ್ವಯಿಸುತ್ತದೆ. ಅಪಾರ್ಟ್ ಮೆಂಟ್ ಅಥವಾ ವಾಣಿಜ್ಯ ಕಟ್ಟಡಗಳಿಗೆ ಅನ್ವಯಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ನೀಡಿದವರ ಮನೆಯ ಪರಿಸರದಲ್ಲಿ ಪೊಲೀಸ್ ಬೀಟ್ ಹೆಚ್ಚಿಸಲಾಗುತ್ತದೆ. ರಾತ್ರಿಯ ಹೊತ್ತು ಪೊಲೀಸರು ಈ ಭಾಗದಲ್ಲಿ ಹೆಚ್ಚು ಓಡಾಟ ನಡೆಸುತ್ತಾರೆ. ಮನೆಯ ಸುತ್ತಮುತ್ತ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿದ್ದರೆ ಗಮನಹರಿಸಲಿದ್ದಾರೆ.
ಯೋಜನೆಯ ಉದ್ದೇಶಗಳು;
ಬೀಗ ಹಾಕಿರುವ ಮನೆಗಳಲ್ಲಿ ಕಳ್ಳತನ ತಡೆಗಟ್ಟುವುದು.
ರಾತ್ರಿ ಗಸ್ತನ್ನು ಹೆಚ್ಚು ಪರಿಣಾಮಕಾರಿ ಆಗಿಸುವುದು.
ಅಪರಾಧ ತಡೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಹೆಚ್ಚಳ
ಸಾರ್ವಜನಿಕರು ಏನು ಮಾಡಬೇಕು ?
ಸಾರ್ವಜನಿಕರು ಮನೆಯನ್ನು ಕೆಲ ದಿನಗಳ ಮಟ್ಟಿಗೆ ಖಾಲಿ ಬಿಟ್ಟು ಹೋಗಲು ನಿರ್ಧರಿಸಿದ್ದರೆ ಅಂತಹ ಸಂದರ್ಭದಲ್ಲಿ ಪೊಲೀಸ್ ಕಂಟ್ರೋಲ್ ರೂಂ.ನ ವಾಟ್ಸ್ ಆ್ಯಪ್ ಸಂಖ್ಯೆಗೆ ಮಾಹಿತಿ ನೀಡಬಹುದು. ವಾಟ್ಸ್ ಆ್ಯಪ್ ನಲ್ಲಿ ಮನೆ ಮಾಲಕರ ಹೆಸರು, ಪೂರ್ಣ ವಿಳಾಸ, ಗೂಗಲ್ ಲೊಕೇಶನ್, ಮನೆಯಲ್ಲಿ ಇಲ್ಲದಿರುವ ದಿನಾಂಕ ಹಾಗೂ ಮನೆಯೊಂದಿಗೆ ಒಂದು ಸೆಲ್ಪಿಯನ್ನು ಕಳುಹಿಸಬೇಕು. ವಾಟ್ಸ್ ಆ್ಯಪ್ ಕಳುಹಿಸಬೇಕಾದ ಸಂಖ್ಯೆ 9480802321.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am