ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹೊರಗಿನವರು, ದಾರಿ ತಪ್ಪಿದವರು ಏನೋ ಹೇಳ್ತಾರೆಂದು ಅದನ್ನೆಲ್ಲ ಕೇಳಕ್ಕಾಗಲ್ಲ..!

09-05-26 11:51 pm       Mangalore Correspondent   ಕರಾವಳಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕೊರಗಜ್ಜ ಸರ್ಕಲ್ ವಿವಾದ ಕುರಿತು ಯು.ಟಿ ಖಾದೆರ್ ಪ್ರತಿಕ್ರಿಯೆ ನೀಡಿದ್ದು, ಕೆಲವರ ಹೇಳಿಕೆಗಳಿಗೆ ಅನಗತ್ಯ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಮಂಗಳೂರು, ಮೇ 9, 2026 : ಉಳ್ಳಾಲದ ಕುತ್ತಾರು ಜಂಕ್ಷನ್ನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ವಿಚಾರದಲ್ಲಿ ಮುಸ್ಲಿಂ ಗುಂಪೊಂದರ ಆಕ್ಷೇಪ ಕೇಳಿಬಂದಿದ್ದರಿಂದ ಸ್ಥಳೀಯ ಶಾಸಕ ಮತ್ತು ಸ್ಪೀಕರ್ ಯುಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ಯಾರೋ ದಾರಿ ತಪ್ಪಿದವರು ಏನೋ ಹೇಳ್ತಾರೆ, ಸೋಶಿಯಲ್ ಮೀಡಿಯಾದಲ್ಲಿ ಏನೋ ಮಾಡ್ತಾರೆ ಅಂತ ಅದನ್ನೆಲ್ಲ ಕೇಳ್ಕೊಂಡು ಇರಕ್ಕಾಗಲ್ಲ ಎಂದು ಹೇಳಿದ್ದಾರೆ.

ಯಾರೋ ಕೆಲವರು ದಾರಿ ತಪ್ಪಿದವರು ಇದ್ದಾರೆ, ಅವರೇನು ಮದನಿ‌ ನಗರದವರು ಅಲ್ಲ. ಬೇರೆ ಸಂಘಟನೆಗೆ ಸೇರಿದವರು. ಅಲ್ಲದೆ, ಹೊರಗಿನಿಂದ ಬಂದವರು. ಅಲ್ಲಿ ಏನು ಆಗುತ್ತೋ ಒಳ್ಳೆಯದಕ್ಕೇ ಆಗುತ್ತದೆ. ಅದು ಆದನಂತರ ನಿಮ್ಮೆಲ್ಲರನ್ನೂ ಕರೆಯುತ್ತೇವೆ. ಅಲ್ಲಿ ಯಾರಿಗೂ ಆಕ್ಷೇಪ ಇಲ್ಲ‌.‌ ಎಲ್ಲ ಜನರೂ ಒಳ್ಳೆಯವರೇ ಇದ್ದಾರೆ ಎಂದವರು ಖಾದರ್ ಹೇಳಿದ್ದಾರೆ. 

ಕುತ್ತಾರ್ ಜಂಕ್ಷನ್ನಲ್ಲಿ ಕೊರಗಜ್ಜ ಹೆಸರಿನಲ್ಲಿ ಸರ್ಕಲ್ ನಿರ್ಮಿಸಲಾಗುತ್ತದೆ ಎಂದು ಹೇಳಿ ಮುಸ್ಲಿಮರ ಒಂದು ಗುಂಪು ಸ್ಪೀಕರ್ ಖಾದರ್ ಅವರನ್ನು ತಡೆದು ಆಕ್ಷೇಪಿಸಿದ್ದಲ್ಲದೆ, ಅದರ ವಿಡಿಯೋ ಮಾಡಿ ವೈರಲ್ ಮಾಡಿತ್ತು. ಈ ವಿಡಿಯೋ ವಿವಾದಕ್ಕೆ ಗುರಿಯಾಗಿದ್ದು ಪರ- ವಿರೋಧ ಅಭಿಪ್ರಾಯ ಕೇಳಿಬಂದಿದೆ.