ಬ್ರೇಕಿಂಗ್ ನ್ಯೂಸ್
13-03-26 09:58 pm Mangalore Correspondent ಕರಾವಳಿ
ಮಂಗಳೂರು, ಮಾರ್ಚ್ 13: ಸುರತ್ಕಲ್ ಬಳಿಯ ಚೇಳಾಯರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಧ್ಯ ಗ್ರಾಮದಲ್ಲಿ ಕೊರಗ ನಿವಾಸಿಗಳ ಕಾಲನಿಗೆ ಬಿಲ್ ಕಟ್ಟಿಲ್ಲವೆಂದು ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸಿ ಅಧಿಕಾರಿಗಳು ಅಮಾನವೀಯ ವರ್ತನೆ ತೋರಿದ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾಧ್ಯಮದ ಗಮನ ಸೆಳೆದಿದ್ದಲ್ಲದೆ, ಜಿಲ್ಲಾಡಳಿತದ ಗಮನಕ್ಕೂ ತಂದಿದ್ದಾರೆ. ಕೊರಗ ಕಾಲನಿಯಲ್ಲಿ 26 ಮನೆಗಳಿದ್ದು 120ಕ್ಕೂ ಹೆಚ್ಚು ನಿವಾಸಿಗಳಿದ್ದಾರೆ. ಆದರೆ ಇಲ್ಲಿನ ನಿವಾಸಿಗಳಿಗೆ ಒಂದು ಕೊಳವೆ ಬಾವಿಯನ್ನು ಕೊರೆಸಿದ್ದು, ಅದರಲ್ಲಿ ಬರುವ ನೀರೂ ಕೆಂಪಾಗಿದ್ದು ಕಲುಷಿತವಾಗಿದೆ.




ಕಲುಷಿತ ನೀರಾಗಿದ್ದರೂ, ತಿಂಗಳಿಗೆ ಪ್ರತಿ ಮನೆಯಿಂದ ನೂರು ರೂಪಾಯಿ ಬಿಲ್ ನೀಡಬೇಕೆಂದು ಪಂಚಾಯತ್ ಅಧಿಕಾರಿಗಳು ವಸೂಲಿ ಮಾಡುತ್ತಿದ್ದರು. ನೀರು ಸರಿ ಇಲ್ಲ, ಉತ್ತಮ ನೀರನ್ನು ಕೊಡಿ ಎಂದು ಸ್ಥಳೀಯರು ಕೇಳಿದರೂ, ದಪ್ಪ ಚರ್ಮದ ಅಧಿಕಾರಿಗಳು ಕೊರಗ ಸಮುದಾಯದ ನಿವಾಸಿಗಳಿಗೆ ತಾರತಮ್ಯ ಎಸಗಿದ್ದಾರೆ. ಕೆಲವು ಮನೆಗಳವರು ನೀರಿನ ಬಿಲ್ ಕೊಡದೆ ಪ್ರತಿಭಟನೆ ತೋರಿದ್ದರು.
ಇದೇ ನೆಪದಲ್ಲಿ ಪಂಚಾಯತ್ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ನೀರಿನ ಸಂಪರ್ಕವನ್ನೇ ಕಡಿತಗೊಳಿಸಿ ಅಮಾನವೀಯತೆ ತೋರಿದ್ದಾರೆ. ಅಲ್ಲದೆ, ಅಲ್ಲಿಯೇ ಪರಿಸರದಲ್ಲಿರುವ ಸಾರ್ವಜನಿಕ ಟ್ಯಾಂಕಿನ ಸಂಪರ್ಕವನ್ನೂ ಕಡಿತಗೊಳಿಸಿದ್ದಾರೆ. ಇದರಿಂದ ಕಂಗೆಟ್ಟ ನಿವಾಸಿಗಳು ನೀರಿಗಾಗಿ ಹಾಹಾಕಾರ ಮಾಡಿದ್ದು, ಸಾಮಾಜಿಕ ಕಾರ್ಯಕರ್ತರ ಗಮನಕ್ಕೆ ತಂದಿದ್ದಾರೆ. ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಸಾಮಾಜಿಕ ಕಾರ್ಯಕರ್ತರು ಸ್ಥಳಕ್ಕೆ ತೆರಳಿ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆದಿದ್ದಾರೆ.
ಸಂಜೆ ವೇಳೆಗೆ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಸ್ಥಳಕ್ಕೆ ತೆರಳಿದ್ದು ಸ್ಥಳೀಯರು ತಮಗಾದ ಅನ್ಯಾಯದ ಬಗ್ಗೆ ಅಧಿಕಾರಿಯಲ್ಲಿ ಅಲವತ್ತುಕೊಂಡಿದ್ದಾರೆ. ಕೂಡಲೇ ನೀರಿನ ಸಂಪರ್ಕವನ್ನು ಮರು ಸ್ಥಾಪಿಸಲು ಅಧಿಕಾರಿ ಪಂಚಾಯತ್ ಸಿಬಂದಿಗೆ ಸೂಚಿಸಿದ್ದು, ನೀರಿನ ಬಿಲ್ಲನ್ನು ಅರ್ಧದಷ್ಟು ಸರಕಾರದ ವತಿಯಿಂದ ಕಟ್ಟಲಾಗುವುದು. ಉಳಿದ ಅರ್ಧ ಭಾಗವನ್ನು ಮುಂದಿನ ಮಾರ್ಚ್ 17ರ ವೇಳೆಗೆ ಪಂಚಾಯತ್ ನಲ್ಲಿ ಕಟ್ಟುವಂತೆ ಹೇಳಿದ್ದಾರೆ.
ಕುಡಿಯುವ ನೀರು ಒದಗಿಸುವುದು ಮೂಲಭೂತ ಕರ್ತವ್ಯವಾಗಿದ್ದು, ಪಂಚಾಯತ್ ಆಗಲೀ, ಜಿಲ್ಲಾಡಳಿತ ಆಗಲೀ ನೀರಿನ ಸಂಪರ್ಕವನ್ನು ಕಡಿತ ಮಾಡುವುದಕ್ಕೆ ಅವಕಾಶ ಇಲ್ಲ. ಸ್ಥಳೀಯರು ಹೇಳುವಂತೆ, ಅಲ್ಲಿನ ನೀರಿನ ಮೂಲವೇ ಅತ್ಯಂತ ಕಲುಷಿತವಾಗಿದ್ದು, ಬಾಟಲಿಯಲ್ಲಿ ಸಂಗ್ರಹಿಸಿದರೆ ಕಸದ ರೀತಿ ಧೂಳಿನ ಕಣಗಳಿದ್ದು ಕೆಂಪಗಿರುವುದನ್ನು ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಗಮನಿಸಿದ್ದಾರೆ.
ಹಾಗಿದ್ದರೂ, ಈ ನೀರಿಗಾಗಿ ಬಿಲ್ ತೆರುವಂತೆ ಸತಾಯಿಸಿದ್ದು ಅಕ್ಷಮ್ಯ. ತೀರಾ ಹಿಂದುಳಿದ, ಕರಾವಳಿ ಭಾಗದ ಅತ್ಯಂತ ತಳ ಸಮುದಾಯ ಆಗಿರುವ ಕೊರಗರ ಅಭಿವೃದ್ಧಿಗೆ ಸಾಕಷ್ಟು ಅನುದಾನ, ಸರ್ಕಾರದಲ್ಲಿ ಪ್ರತ್ಯೇಕ ಇಲಾಖೆ ಇದ್ದರೂ ಮಧ್ಯ ಗ್ರಾಮದಲ್ಲಿ ನಿವಾಸಿಗಳನ್ನೇ ನೀರಿನ ಬಿಲ್ ನೀಡಿಲ್ಲವೆಂದು ಕಲುಷಿತ ನೀರು ಕೊಟ್ಟು ಸತಾಯಿಸಿದ್ದಲ್ಲದೆ, ಅದರ ಸಂಪರ್ಕವನ್ನೂ ಕಡಿತಗೊಳಿಸಿರುವುದು ಶೋಷಿತ ಸಮುದಾಯಕ್ಕೆ ಎಸಗಿದ ಅನ್ಯಾಯ. ಇದಕ್ಕಾಗಿ ಪಂಚಾಯತ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am