ಬ್ರೇಕಿಂಗ್ ನ್ಯೂಸ್
18-02-26 11:24 pm Mangaluru Staffer ಕರಾವಳಿ
ಮಂಗಳೂರು, ಫೆ.18: ಕಳೆದ ಮಳೆಗಾಲದಲ್ಲಿ ಮನೆ ಕುಸಿದು ತನ್ನೆರಡು ಮಕ್ಕಳನ್ನು ಮತ್ತು ಎರಡೂ ಕಾಲುಗಳನ್ನು ಕಳಕೊಂಡ ಮಂಜನಾಡಿಯ ಅಶ್ವಿನಿ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ, ಸರ್ಕಾರದ ಪರಿಹಾರವೂ ಸಿಕ್ಕಿಲ್ಲ ಎಂದು ಆಕೆಯ ಕುಟುಂಬಸ್ಥರು ಹಾಗೂ ಸಾಮಾಜಿಕ ಕಾರ್ಯಕರ್ತರು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ ಭಟ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಗುಡ್ಡ ಕುಸಿತದಿಂದ ಸಾವು ಬದುಕಿನ ನಡುವೆ ಹೋರಾಡಿದ್ದ ಅಶ್ವಿನಿ ಎರಡು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದು ಎರಡು ಕಾಲುಗಳನ್ನೂ ಕಳಕೊಂಡಿದ್ದರು. ಸದ್ಯ, ತನ್ನದಲ್ಲದ ತಪ್ಪಿಗೆ ಇನ್ನೊಬ್ಬರ ಆಸರೆಯಲ್ಲಿ ಬದುಕುವ ಸ್ಥಿತಿಯಾಗಿದೆ. ಇವರ ಕುಟುಂಬಕ್ಕೆ ಅತ್ತ ಮನೆಯೂ ಸಿಕ್ಕಿಲ್ಲ, ಇತ್ತ ಪರಿಹಾರವೂ ಸಿಕ್ಕಿಲ್ಲ. ನ್ಯಾಯಕ್ಕಾಗಿ ಅಧಿಕಾರಿಗಳ ಬಳಿ ಅಲೆದು ಸುಸ್ತಾಗಿ ಈಗ ಮಂಗಳೂರಿಗೆ ಬಂದ ಮಾನವ ಹಕ್ಕು ಆಯೋಗದ ಅಧ್ಯಕ್ಷರನ್ನು ಭೇಟಿಯಾಗಿ ನೋವು ಹೇಳಿಕೊಂಡಿದ್ದಾರೆ.

2025ರ ಮೇ 30 ರಂದು ಉಳ್ಳಾಲ ತಾಲೂಕಿನ ಮಂಜನಾಡಿ ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದು ದುರಂತ ಸಂಭವಿಸಿತ್ತು. ಮನೆಯ ಅಡಿಯಲ್ಲಿ ಸಿಲುಕಿದ್ದ ಅಶ್ವಿನಿ ಅವರ ಇಬ್ಬರು ಮಕ್ಕಳು ಮತ್ತು ಅತ್ತೆ ಸಾವನ್ನಪ್ಪಿದ್ದರು. ಮಾವ ಕಾಂತಪ್ಪ ಪೂಜಾರಿ ಅವರೂ ತೀವ್ರ ಏಟು ಬಿದ್ದು ಆಸ್ಪತ್ರೆ ಸೇರಿದ್ದರು. ತೀವ್ರ ಗಾಯಗೊಂಡಿದ್ದ ಅಶ್ವಿನಿ ಅವರ ಎರಡು ಕಾಲುಗಳನ್ನು ಆಸ್ಪತ್ರೆಯಲ್ಲಿ ಕತ್ತರಿಸಬೇಕಾಗಿ ಬಂದಿತ್ತು. ಸರ್ಕಾರ ನೈಸರ್ಗಿಪ ವಿಕೋಪ ಅಂತ ಎರಡು ಲಕ್ಷ ಪರಿಹಾರ ಕೊಟ್ಟು ಕೈತೊಳೆದುಕೊಂಡಿತ್ತು. ಆದ್ರೆ ಇದು ಪ್ರಾಕೃತಿಕ ವಿಕೋಪ ಅಲ್ಲ. ಮಾನವ ನಿರ್ಮಿತ ಕೃತ್ಯದ ಘಟನೆ ಅಂತ ಅಶ್ವಿನಿ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದ್ರೆ ಅಲ್ಲಿ ರಸ್ತೆ ಮಾಡಲು ಗುಡ್ಡ ಕಡಿಯಲಾಗಿದೆ ಎಂದು ನೆಪ ಹೇಳಿ ಜಿಪಂ ಎಂಜಿನಿಯರ್ ಗಳು ತಮ್ಮ ವರದಿಯನ್ನೇ ಬುಡಮೇಲು ಮಾಡಿದ್ದರು. ಮಾನವೀಯ ಗುಣವನ್ನೆ ಸಾಯುವಂತೆ ಮಾಡಿದ್ದರು.
ಆಬಳಿಕ ಪದೇ ಪದೇ ಆಂಬುಲೆನ್ಸ್ ನಲ್ಲಿ ಬಂದು ಜಿಲ್ಲಾಧಿಕಾರಿ ಮೊರೆ ಹೋದರೂ ನ್ಯಾಯ ಸಿಕ್ಕಿಲ್ಲ. ಕ್ಷೇತ್ರದ ಶಾಸಕ ಖಾದರ್ ಸ್ಪೀಕರ್ ಆಗಿದ್ದರೂ ನ್ಯಾಯದ ಕದ ತೆರೆಯಲಿಲ್ಲ. ಅಶ್ವಿನಿ ಅವರನ್ನು ವೀಲ್ ಚೇರ್ ನಲ್ಲಿ ಕೂರಿಸಿಕೊಂಡು ಬುಧವಾರ ಮಂಗಳೂರಿನ ಜಿಪಂ ಕಚೇರಿಗೆ ಬಂದಿದ್ದ ಕುಟುಂಬಸ್ಥರು ಮಾನವ ಹಕ್ಕು ಆಯೋಗದ ಅಧ್ಯಕ್ಷ ಶ್ಯಾಂ ಭಟ್ ಅವರನ್ನು ಭೇಟಿ ಮಾಡಿಸಿದ್ದಾರೆ. ಜಿಲ್ಲಾಡಳಿತ ಕೊಟ್ಟ ಪರಿಹಾರ ಅಶ್ವಿನಿಯ ಚಿಕಿತ್ಸೆಗೂ ಸಾಕಾಗಿಲ್ಲ. ಸದ್ಯಕ್ಕೆ ಈಕೆಯನ್ನು ತಾಯಿಯೇ ಆರೈಕೆ ಮಾಡಿ ನೋಡಿಕೊಳ್ಳುತ್ತಿದ್ದಾರೆ. ಮುಂದೆ ಅವರಿಂದ ಆಗದಿದ್ರೆ ಅಶ್ವಿನಿಗೆ ಭಿಕ್ಷೆ ಬೇಡುವ ಸ್ಥಿತಿ ಬರುತ್ತೆ. ಇತ್ತ ಇದ್ದ ಮನೆಯೂ ಇಲ್ಲ. ಆದ್ದರಿಂದ ಮಾನವ ಕೃತ ದುರಂತ ಆಗಿರುವುದರಿಂದ 5 ಕೋಟಿ ಗರಿಷ್ಠ ಪರಿಹಾರ ನೀಡಬೇಕು ಅನ್ನುವ ಬೇಡಿಕೆಯನ್ನು ಇಟ್ಟಿದ್ದಾರೆ. ಆಯೋಗದ ಅಧಿಕಾರಿಗಳು ಸರ್ಕಾರದ ಜೊತೆ ಮಾತುಕತೆ ಮಾಡುತ್ತೇವೆಂದು ಹೇಳಿ ತೆರಳಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am