ಬ್ರೇಕಿಂಗ್ ನ್ಯೂಸ್
14-02-26 04:38 pm Mangaluru Staffer ಕರಾವಳಿ
ಮಂಗಳೂರು, ಫೆ.13: ಮಂಗಳೂರಿನ ಹೆಸರಾಂತ ಬಿಲ್ಡರ್, ಬಿಜೆಪಿ ಮುಖಂಡ ಜಿತೇಂದ್ರ ಕೊಟ್ಟಾರಿ ಮತ್ತು ಅವರ ಪುತ್ರಿ ಆರಾಧ್ಯಾ ಎಂಬವರ ಮೇಲೆ ಬರ್ಕೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ತನುಷ್ ಶೆಟ್ಟಿ ಅವರ ಖಾಸಗಿ ದೂರಿನಂತೆ ಮಂಗಳೂರಿನ ಆರನೇ ಜೆಎಂಎಫ್ ಕೋರ್ಟ್ ಆದೇಶದಂತೆ, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
2024ರ ಅಕ್ಟೋಬರ್ 9ರಂದು ತನುಷ್ ಶೆಟ್ಟಿ ಮತ್ತು ಅವರ ಸ್ನೇಹಿತ ಅಂಕಿತ್ ಶೆಟ್ಟಿ ಎಂಬವರು ಜಿತೇಂದ್ರ ಕೊಟ್ಟಾರಿ ಜೊತೆಗೆ ಮಾತಿಗೆ ಮಾತು ಬೆಳೆಸಿ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾಗಿ ಎಫ್ಐಆರ್ ದಾಖಲಾಗಿತ್ತು. ಇದರಂತೆ, ತನುಷ್ ಮತ್ತು ಅಂಕಿತ್ ಜೈಲು ಸೇರಿದ್ದರು. ಆದರೆ ತಾವೇನೂ ಹಲ್ಲೆ ಮಾಡಿಲ್ಲ, ತಮ್ಮ ಮೇಲೆ ಗನ್ ತೋರಿಸಿ ಜೀವ ಬೆದರಿಕೆ ಒಡ್ಡಿದ್ದಾರೆಂದು ಪೊಲೀಸರಿಗೆ ಹೇಳಿಕೆ ನೀಡಿದ್ದರು. ಪುತ್ರಿ ಪೊಲೀಸರ ಎದುರಲ್ಲೇ ಅವರನ್ನು ಗನ್ನಲ್ಲಿ ಶೂಟ್ ಮಾಡಿ ಕೊಲ್ಲುವಂತೆ ತಂದೆಗೆ ಪ್ರಚೋದನೆ ನೀಡಿದ್ದರು. ಈ ಬಗ್ಗೆ ಪ್ರತಿ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲು ಮಾಡಿರಲಿಲ್ಲ.

ಜೈಲಿನಿಂದ ಹೊರಬಂದ ಯುವಕರಿಬ್ಬರು ಮಂಗಳೂರು ಕೋರ್ಟಿಗೆ ಖಾಸಗಿ ದೂರು ಸಲ್ಲಿಸಿದ್ದರು. ಅಲ್ಲದೆ, ಪೊಲೀಸ್ ಠಾಣೆಯಲ್ಲಿ ತಮ್ಮ ಮೇಲೆ ಜಿತೇಂದ್ರ ಕೊಟ್ಟಾರಿ ಮತ್ತು ಅವರ ಪುತ್ರಿ ಅವಾಚ್ಯ ನಿಂದಿಸಿ ಬೆದರಿಕೆ ಹಾಕಿದ ಬಗ್ಗೆ ವಿಡಿಯೋ ನೀಡುವಂತೆ ಆರ್ಟಿಐನಡಿ ಮಾಹಿತಿ ಕೇಳಿದ್ದರು. ಆದರೆ ಪೊಲೀಸರು ಅಪರಾಧ ತನಿಖೆಯಲ್ಲಿರುವ ನೆಪವೊಡ್ಡಿ ವಿಡಿಯೋ ಫೂಟೇಜ್ ನೀಡಲು ಸಾಧ್ಯವಿಲ್ಲ ಎಂದು ಹೇಳಿ ನಿರಾಕರಿಸಿದ್ದರು. ಯುವಕರ ಹೇಳಿಕೆ ಮತ್ತು ತಮ್ಮ ಮೇಲೆ ಗನ್ ತೋರಿಸಿ ಬೆದರಿಕೆ ಹಾಕಿದ್ದನ್ನು ತನಿಖೆ ಮಾಡುವ ಸಲುವಾಗಿ ಕೋರ್ಟ್ ಪೊಲೀಸರಿಗೆ ತನಿಖೆ ಮಾಡುವಂತೆ ಒಂದು ವರ್ಷದ ಬಳಿಕ ಆದೇಶ ಮಾಡಿದೆ. ಇದರಂತೆ ಪೊಲೀಸರು ಜಿತೇಂದ್ರ ಕೊಟ್ಟಾರಿ ಮತ್ತು ಅವರ ಪುತ್ರಿಯ ಮೇಲೆ ಫೆ.5ರಂದು ಎಫ್ಐಆರ್ ದಾಖಲಿಸಿದ್ದಾರೆ.
ತನುಷ್ ಶೆಟ್ಟಿ ಮತ್ತು ಅಂಕಿತ್ ಶೆಟ್ಟಿ ಬಜ್ಪೆಯಿಂದ ಕದ್ರಿಗೆ ತಮ್ಮ ಕಾರಿನಲ್ಲಿ ಬರುತ್ತಿದ್ದಾಗ ಜಿತೇಂದ್ರ ಕೊಟ್ಟಾರಿ ತಮ್ಮ ಆಡಿ ಕಾರಿನಲ್ಲಿ ಬಂದಿದ್ದು ಈ ವೇಳೆ ಬೋಂದೆಲ್ ನಲ್ಲಿ ಸೈಡ್ ಕೊಡುವ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿತ್ತು. ಯುವಕರಿಬ್ಬರು ಆಬಳಿಕ ಕೊಟ್ಟಾರಿ ಅವರಿದ್ದ ಕಾರನ್ನು ಬೆನ್ನತ್ತಿ ಬಂದಿದ್ದು ಕೊಡಿಯಾಲ್ ಬೈಲಿನ ಮನೆಯ ಕಂಪೌಂಡ್ ಒಳಗಡೆಗೂ ಬಂದಿದ್ದಾರೆ. ಈ ವೇಳೆ, ಜಿತೇಂದ್ರ ಕೊಟ್ಟಾರಿ ತನ್ನ ಗನ್ ತೆಗೆದು ಶೂಟ್ ಮಾಡುವುದಾಗಿ ಬೆದರಿಸಿದ್ದಾರೆ. ಆದರೆ ಪ್ರತಿಯಾಗಿ ಕೊಟ್ಟಾರಿ ಕೈಯನ್ನು ಎಳೆದು ಯುವಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ, ಅವರ ಪುತ್ರಿ ಮೊಬೈಲಿನಲ್ಲಿ ಶೂಟ್ ಮಾಡಿದ್ದು ಅವರನ್ನು ಬಿಡಬೇಡ, ಗುಂಡಿಟ್ಟು ಕೊಲ್ಲಬೇಕು ಎಂದು ಹೇಳಿದ್ದರೆಂದು ತನುಷ್ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.
An FIR has been registered at Barke Police Station against noted city builder and BJP leader Jithendra Kottary and his daughter Aradhya, following directions from the Sixth JMFC Court in Mangaluru. The case stems from a private complaint filed by Tanush Shetty in connection with a road rage incident that occurred in October 2024. According to the complaint, the incident dates back to October 9, 2024, when Tanush Shetty and his friend Ankit Shetty allegedly had a heated exchange with Kottari over a “giving way” issue near Bondel while travelling from Bajpe to Kadri. Kottari was reportedly driving an Audi car at the time.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am