ಬ್ರೇಕಿಂಗ್ ನ್ಯೂಸ್
06-02-26 10:56 pm Mangalore Correspondent ಕರಾವಳಿ
ಪುತ್ತೂರು, ಫೆ.6 : ಬಿಜೆಪಿಯವರು ಎಷ್ಟೇ ತಿಪ್ಪರಲಾಗ ಹೊಡೆದ್ರೂ ಏನೂ ಆಗಲ್ಲ. ಮತ್ತೆ ನಮ್ಮದೇ ಸರ್ಕಾರ ತರೋದು ನಮಗೆ ಗೊತ್ತಿದೆ. ಚುನಾವಣಾ ಆಯೋಗದಿಂದ ಎಸ್ಐಆರ್ ಬರ್ತಾ ಇದೆ, ಇದರ ಬಗ್ಗೆ ಬಹಳ ಜಾಗೃತೆಯಾಗಿರಿ ಎಂದು ಡಿಸಿಎಂ ಡಿಕೆ ಶಿವಕುಮಾರ್, ಕಾಂಗ್ರೆಸ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.
ಪುತ್ತೂರಿನಲ್ಲಿ ಕಾಂಗ್ರೆಸ್ ಭವನ ಶಿಲಾನ್ಯಾಸ ನೆರವೇರಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಷಣ ಮಾಡಿದ್ದಾರೆ. ಪುತ್ತೂರಿನಲ್ಲಿ ಇವತ್ತು ಕಾಂಗ್ರೆಸ್ ದೇವಸ್ಥಾನದ ಭೂಮಿ ಪೂಜೆ ನಡೆದಿದೆ. ಇದು ಕಾಂಗ್ರೆಸ್ ಕಚೇರಿ ಅಲ್ಲ, ಕಾಂಗ್ರೆಸ್ ಕಾರ್ಯಕರ್ತರ ಪಾಲಿಗೆ ದೇವಸ್ಥಾನ. ಉಡುಪಿ, ಮಂಗಳೂರಿನಲ್ಲಿ ಇಬ್ಬರು ಶಾಸಕರು ಬಿಟ್ಟರೆ ನಮಗೆ ಯಾರೂ ಇಲ್ಲ. ಆದರೂ ನಮ್ಮ ಗ್ಯಾರಂಟಿ ಯೋಜನೆ ಎಲ್ಲರಿಗೂ ತಲುಪುತ್ತಿದೆ, ಬಿಜೆಪಿಯವರಿಗೂ ಇದೆ. ಮತ ಹಾಕಿದವರಿಗೂ, ಹಾಕದವರಿಗೂ ಎಲ್ಲ ಜನರಿಗೂ ಇದೆ. ಕಾಂಗ್ರೆಸ್ ಸರ್ಕಾರದಲ್ಲಿ ಭೇದ ಇಲ್ಲ. ಟೀಕೆ ಮಾಡೋರು ಗ್ಯಾರಂಟಿ ಯೋಜನೆ ನಮಗೆ ಬೇಡ ಅಂತ ಬಿಟ್ಟು ಬಿಡಲಿ.
ಎಸ್ಐಆರ್ ಅನ್ನು ಪ್ರತೀ ಬೂತ್ ನಲ್ಲೂ ಮಾಡ್ತಾರೆ, ಇದು ಯಾವ ರೀತಿ ಆಗತ್ತೆ ಅಂತ ಕಾರ್ಯಕರ್ತರು ಗಮನಿಸಬೇಕು. ಪ್ರತಿ ಕ್ಷಣದಲ್ಲೂ ಸವಾಲುಗಳು ಬರುತ್ತದೆ, ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಸ್ವಲ್ಪ ಹುಷಾರಾಗಿರಬೇಕು ಎಂದು ಡಿಕೆಶಿ ಹೇಳಿದ್ದಾರೆ.
ಮಾಧ್ಯಮಗಳಲ್ಲಿ ನಮ್ಮಲ್ಲಿ ಭಿನ್ನಾಭಿಪ್ರಾಯ, ಗುಂಪುಗಳಿವೆ ಅಂತೆಲ್ಲಾ ಸುದ್ದಿ ಮಾಡ್ತಾರೆ. ಆದರೆ ನಮ್ಮಲ್ಲಿ ಯಾವುದೇ ಗುಂಪುಗಳಿಲ್ಲ, ನಮ್ಮಲ್ಲಿ ಇರೋದು ಒಂದೇ ಕಾಂಗ್ರೆಸ್ ಗುಂಪು ಮಾತ್ರ. ಹೈಕಮಾಂಡ್ ಹೇಳಿದ ಹಾಗೆ ನಾವು ಮಾಡೋದು, ಬೇರೆ ಏನಿರಲ್ಲ ಎಂದು ಹೇಳಿದರು.
ಮಾತಿನ ಮಧ್ಯೆ ಸಿಎಂ ಆಗಿ ಬರಬೇಕೆಂಬ ಪಕ್ಷದ ಮುಖಂಡರ ಆಶಯದ ಬಗ್ಗೆಯೂ ಡಿಸಿಎಂ ಮಾತನಾಡಿದ್ದು, ನಾನು ಸಿಎಂ ಆಗಬೇಕೆಂದು ಕಾರ್ಯಕರ್ತರು ಆಸೆ ಪಡೋದು ತಪ್ಪಲ್ಲ, ಅದು ಅವರ ಪ್ರಾರ್ಥನೆ. ಪ್ರಯತ್ನ ವಿಫಲ ಆಗಬಹುದು, ಆದರೆ ಪ್ರಾರ್ಥನೆ ವಿಫಲ ಆಗಲ್ಲ ಎಂದು ಮಾರ್ಮಿಕ ನುಡಿಗಳನ್ನಾಡಿದ್ದಾರೆ. ಇದೇ ವೇಳೆ, ಪುತ್ತೂರು ಕಾಂಗ್ರೆಸ್ ಕಚೇರಿಗೆ ಕೆಪಿಸಿಸಿಯಿಂದ 10 ಲಕ್ಷ ರೂ. ಘೋಷಣೆ ಮಾಡಿದರು.
ಸಮಾರಂಭದಲ್ಲಿ ಶಾಸಕ ಅಶೋಕ್ ರೈ, ಮಾಜಿ ಸಚಿವ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್, ಇನಾಯತ್ ಆಲಿ, ಮೊಹಮ್ಮದ್ ನಲಪಾಡ್, ಕಾವು ಹೇಮನಾಥ ಶೆಟ್ಟಿ, ಮಿಥುನ್ ರೈ ಮತ್ತಿತರರು ಇದ್ದರು.
Deputy CM D.K. Shivakumar said the BJP cannot regain power despite efforts and asserted that Congress knows how to form the government again. Addressing party workers in Puttur, he urged vigilance over the upcoming SIR process and dismissed reports of internal rifts, reaffirming unity within the Congress.
06-02-26 12:30 pm
Bangalore Correspondent
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
06-02-26 10:58 pm
HK News Desk
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
ಮೇಘಾಲಯದಲ್ಲಿ ಕರಾಳ ದುರಂತ ; 'ಅಕ್ರಮ' ಕಲ್ಲಿದ್ದಲು ಗ...
06-02-26 09:54 am
06-02-26 10:56 pm
Mangalore Correspondent
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
D k Shivakumar, Mangalore: "ಯತೀಂದ್ರ ಅವರೇ ನಮ್ಮ...
06-02-26 03:09 pm
ನಿರ್ಲಕ್ಷ್ಯದಿಂದ ಹೆದ್ದಾರಿಗೆ ಬೈಕ್ ನುಗ್ಗಿಸಿದ ತ್ರಿ...
06-02-26 01:55 pm
06-02-26 06:36 pm
HK News Desk
ಹುಬ್ಬಳ್ಳಿಯ ಆಟೋ ಚಾಲಕನ ಖಾತೆಯಲ್ಲಿ ಕೋಟ್ಯಂತರ ಹಣದ ವ...
06-02-26 01:36 pm
Manjeshwar Double Murder: ಮಂಜೇಶ್ವರ ; ಪತ್ನಿ ಮೇ...
03-02-26 01:05 pm
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm