ಬ್ರೇಕಿಂಗ್ ನ್ಯೂಸ್
27-12-20 10:51 pm Mangaluru Correspondent ಕರಾವಳಿ
ಮಂಗಳೂರು, ಡಿ.27: ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇಂದು ಮಧ್ಯಾಹ್ನ ಹೈ ಎಲರ್ಟ್ ಆಗಿತ್ತು. ನಿಗೂಢ ವಸ್ತುವೊಂದು ಆಕಾಶ ಮಾರ್ಗದಲ್ಲಿ ಹಳೆ ಏರ್ಪೋರ್ಟ್ ಆವರಣದಲ್ಲಿ ಬಂದು ಬಿದ್ದಿದ್ದು ಅಲ್ಲಿನ ಭದ್ರತಾ ಸಿಬಂದಿಯನ್ನು ಚಕಿತರನ್ನಾಗಿಸಿತ್ತು.
ನಿಗೂಢ ವಸ್ತು ಬರುತ್ತಲೇ ಸಿಐಎಸ್ಎಫ್ ಭದ್ರತಾ ಸಿಬಂದಿ ಹೈ ಎಲರ್ಟ್ ಆಗಿದ್ದರು. ಯಾವುದೇ ಕ್ಷಣವನ್ನು ಎದುರಿಸಲು ಸಜ್ಜಾಗಿದ್ದರು. ನೀಲ ಬಣ್ಣದ ಬೆಳಕು ಬೀರುತ್ತಿದ್ದ ಸಣ್ಣ ರೀತಿಯ ವಸ್ತು ಹಳೆ ಏರ್ಪೋರ್ಟ್ ಆವರಣದಲ್ಲಿ ಬಂದು ಬಿದ್ದಿತ್ತು. ವಸ್ತು ಬಿದ್ದ ಬಳಿಕವೂ ಮಿನುಗುತ್ತಲೇ ಇತ್ತು. ಹೀಗೆ ಮಿನುಗುತ್ತಿದ್ದುದೇ ಅಲ್ಲಿನ ಭದ್ರತಾ ಪಡೆಗಳ ಚಿಂತೆಗೆ ಕಾರಣವಾಗಿತ್ತು. ಕಳೆದ ವರ್ಷ ಆದಿತ್ಯ ರಾವ್ ಎಂಬಾತ ಸಜೀವ ಬಾಂಬನ್ನೇ ಇಟ್ಟಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಇದು ಮತ್ತೊಂದು ರೀತಿಯ ಬಾಂಬ್ ಆಗಿದ್ದಿರಲೂಬಹುದು ಎಂಬ ಅನುಮಾನ, ಭಯ ಭದ್ರತಾ ಸಿಬಂದಿಯನ್ನು ಕಾಡಿತ್ತು. ಆದರೂ, ವಿಷಯ ಹೊರಗಿನ ಮಂದಿಗೆ ಗೊತ್ತಾಗದ ರೀತಿ ಸಿಐಎಸ್ಎಫ್ ಕಾರ್ಯಾಚರಣೆ ನಡೆಸಿತ್ತು.

ಹಳೆ ಏರ್ಪೋರ್ಟ್ ಆವರಣದಲ್ಲಿ ನಿಗೂಢ ವಸ್ತು ಬಂದು ಬಿದ್ದ ಜಾಗಕ್ಕೆ ನಿಧಾನಕ್ಕೆ ತೆರಳಿದ್ದರು. ಸ್ಥಳಕ್ಕೆ ತೆರಳಿ ನೋಡಿದಾಗ, ಆಟಿಕೆ ರೀತಿಯ ಹೆಲಿಕಾಪ್ಟರ್ ಅಲ್ಲಿ ಬಿದ್ದಿತ್ತು. ಆದರೂ ನೀಲ ಬಣ್ಣದ ಲೈಟ್ ಅದರಲ್ಲಿ ಮಿನುಗುತ್ತಲೇ ಇತ್ತು. ಸಿಐಎಸ್ಎಫ್ ವಿಭಾಗದ ತಜ್ಞ ಸಿಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಕೊನೆಗೆ, ಅದು ಬರೀಯ ಹೆಲಿಕಾಪ್ಟರ್ ಆಟಿಕೆ ಎಂಬುದಾಗಿ ನಿರ್ಧಾರಕ್ಕೆ ಬಂದರು. ರಿಮೋಟ್ ಕಂಟ್ರೋಲ್ ಮೂಲಕ ಚಾಲನೆಯಾಗುವ ಹೆಲಿಕಾಪ್ಟರ್ ಅದಾಗಿತ್ತು.
ಹಳೆ ಏರ್ಪೋರ್ಟ್ ಬಳಿ ಆಸುಪಾಸಿನಲ್ಲಿ ಒಂದಷ್ಟು ಮನೆಗಳು ಇವೆ. ಅಪಾರ್ಟ್ಮೆಂಟ್ ಕೂಡ ಇದೆ. ಅಲ್ಲಿನ ಮಕ್ಕಳು ರಿಮೋಟ್ ಆಧರಿತ ಹೆಲಿಕಾಪ್ಟರ್ ಅನ್ನು ಆಕಾಶಕ್ಕೆ ಬಿಟ್ಟಿದ್ದರು. ಆದರೆ, ಆಕಾಶಕ್ಕೆ ಹಾರಿದ ಹೆಲಿಕಾಪ್ಟರ್ ಹಳೆ ಏರ್ಪೋರ್ಟ್ ಕಡೆಗೆ ಸಾಗುತ್ತಾ ಅಲ್ಲಿ ರಿಮೋಟ್ ನಿಯಂತ್ರಣಕ್ಕೆ ಸಿಗದೆ ನೆಲಕ್ಕೆ ಬಿದ್ದಿದೆ. ಆವರಣದಲ್ಲಿ ಬಿದ್ದ ರೀತಿ ಮಾತ್ರ ಭದ್ರತಾ ಸಿಬಂದಿಯನ್ನು ದಂಗು ಬಡಿಸಿತ್ತು.
Strange item that was found outside the Mangalore International Airport created panic among security personals and public. Later it was found that it was Helicopter Toy that had fallen accidentally when some children's were playing who reside nearby airport.
21-12-25 05:33 pm
HK News Desk
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
21-12-25 11:04 pm
Mangalore Correspondent
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
21-12-25 09:36 pm
Mangalore Correspondent
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm
Minor Girl Sexually Assaulted in Puttu: ಜೇನು...
21-12-25 01:18 pm
Fraud Abroad Job Scam, Mangalore, Armenia: ಅರ...
18-12-25 04:53 pm
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am