ಬ್ರೇಕಿಂಗ್ ನ್ಯೂಸ್
27-12-20 10:51 pm Mangaluru Correspondent ಕರಾವಳಿ
ಮಂಗಳೂರು, ಡಿ.27: ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇಂದು ಮಧ್ಯಾಹ್ನ ಹೈ ಎಲರ್ಟ್ ಆಗಿತ್ತು. ನಿಗೂಢ ವಸ್ತುವೊಂದು ಆಕಾಶ ಮಾರ್ಗದಲ್ಲಿ ಹಳೆ ಏರ್ಪೋರ್ಟ್ ಆವರಣದಲ್ಲಿ ಬಂದು ಬಿದ್ದಿದ್ದು ಅಲ್ಲಿನ ಭದ್ರತಾ ಸಿಬಂದಿಯನ್ನು ಚಕಿತರನ್ನಾಗಿಸಿತ್ತು.
ನಿಗೂಢ ವಸ್ತು ಬರುತ್ತಲೇ ಸಿಐಎಸ್ಎಫ್ ಭದ್ರತಾ ಸಿಬಂದಿ ಹೈ ಎಲರ್ಟ್ ಆಗಿದ್ದರು. ಯಾವುದೇ ಕ್ಷಣವನ್ನು ಎದುರಿಸಲು ಸಜ್ಜಾಗಿದ್ದರು. ನೀಲ ಬಣ್ಣದ ಬೆಳಕು ಬೀರುತ್ತಿದ್ದ ಸಣ್ಣ ರೀತಿಯ ವಸ್ತು ಹಳೆ ಏರ್ಪೋರ್ಟ್ ಆವರಣದಲ್ಲಿ ಬಂದು ಬಿದ್ದಿತ್ತು. ವಸ್ತು ಬಿದ್ದ ಬಳಿಕವೂ ಮಿನುಗುತ್ತಲೇ ಇತ್ತು. ಹೀಗೆ ಮಿನುಗುತ್ತಿದ್ದುದೇ ಅಲ್ಲಿನ ಭದ್ರತಾ ಪಡೆಗಳ ಚಿಂತೆಗೆ ಕಾರಣವಾಗಿತ್ತು. ಕಳೆದ ವರ್ಷ ಆದಿತ್ಯ ರಾವ್ ಎಂಬಾತ ಸಜೀವ ಬಾಂಬನ್ನೇ ಇಟ್ಟಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಇದು ಮತ್ತೊಂದು ರೀತಿಯ ಬಾಂಬ್ ಆಗಿದ್ದಿರಲೂಬಹುದು ಎಂಬ ಅನುಮಾನ, ಭಯ ಭದ್ರತಾ ಸಿಬಂದಿಯನ್ನು ಕಾಡಿತ್ತು. ಆದರೂ, ವಿಷಯ ಹೊರಗಿನ ಮಂದಿಗೆ ಗೊತ್ತಾಗದ ರೀತಿ ಸಿಐಎಸ್ಎಫ್ ಕಾರ್ಯಾಚರಣೆ ನಡೆಸಿತ್ತು.

ಹಳೆ ಏರ್ಪೋರ್ಟ್ ಆವರಣದಲ್ಲಿ ನಿಗೂಢ ವಸ್ತು ಬಂದು ಬಿದ್ದ ಜಾಗಕ್ಕೆ ನಿಧಾನಕ್ಕೆ ತೆರಳಿದ್ದರು. ಸ್ಥಳಕ್ಕೆ ತೆರಳಿ ನೋಡಿದಾಗ, ಆಟಿಕೆ ರೀತಿಯ ಹೆಲಿಕಾಪ್ಟರ್ ಅಲ್ಲಿ ಬಿದ್ದಿತ್ತು. ಆದರೂ ನೀಲ ಬಣ್ಣದ ಲೈಟ್ ಅದರಲ್ಲಿ ಮಿನುಗುತ್ತಲೇ ಇತ್ತು. ಸಿಐಎಸ್ಎಫ್ ವಿಭಾಗದ ತಜ್ಞ ಸಿಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಕೊನೆಗೆ, ಅದು ಬರೀಯ ಹೆಲಿಕಾಪ್ಟರ್ ಆಟಿಕೆ ಎಂಬುದಾಗಿ ನಿರ್ಧಾರಕ್ಕೆ ಬಂದರು. ರಿಮೋಟ್ ಕಂಟ್ರೋಲ್ ಮೂಲಕ ಚಾಲನೆಯಾಗುವ ಹೆಲಿಕಾಪ್ಟರ್ ಅದಾಗಿತ್ತು.
ಹಳೆ ಏರ್ಪೋರ್ಟ್ ಬಳಿ ಆಸುಪಾಸಿನಲ್ಲಿ ಒಂದಷ್ಟು ಮನೆಗಳು ಇವೆ. ಅಪಾರ್ಟ್ಮೆಂಟ್ ಕೂಡ ಇದೆ. ಅಲ್ಲಿನ ಮಕ್ಕಳು ರಿಮೋಟ್ ಆಧರಿತ ಹೆಲಿಕಾಪ್ಟರ್ ಅನ್ನು ಆಕಾಶಕ್ಕೆ ಬಿಟ್ಟಿದ್ದರು. ಆದರೆ, ಆಕಾಶಕ್ಕೆ ಹಾರಿದ ಹೆಲಿಕಾಪ್ಟರ್ ಹಳೆ ಏರ್ಪೋರ್ಟ್ ಕಡೆಗೆ ಸಾಗುತ್ತಾ ಅಲ್ಲಿ ರಿಮೋಟ್ ನಿಯಂತ್ರಣಕ್ಕೆ ಸಿಗದೆ ನೆಲಕ್ಕೆ ಬಿದ್ದಿದೆ. ಆವರಣದಲ್ಲಿ ಬಿದ್ದ ರೀತಿ ಮಾತ್ರ ಭದ್ರತಾ ಸಿಬಂದಿಯನ್ನು ದಂಗು ಬಡಿಸಿತ್ತು.
Strange item that was found outside the Mangalore International Airport created panic among security personals and public. Later it was found that it was Helicopter Toy that had fallen accidentally when some children's were playing who reside nearby airport.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 11:28 am
HK News Staffer
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm