ಬ್ರೇಕಿಂಗ್ ನ್ಯೂಸ್
08-08-25 09:25 pm Mangalore Correspondent ಕರಾವಳಿ
ಬೆಳ್ತಂಗಡಿ, ಆ.8 : ತೀವ್ರ ಕುತೂಹಲ ಮೂಡಿಸಿದ್ದ ಧರ್ಮಸ್ಥಳ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬಳಿಯ ಕಲ್ಲೇರಿ ಕಾಡಿನಲ್ಲಿ ಹೂತಿಟ್ಟಿದ್ದಾನೆ ಎನ್ನಲಾಗಿದ್ದ ಜಾಗದಲ್ಲಿ ಎಸ್ಐಟಿ ಅಧಿಕಾರಿಗಳು ಶೋಧ ಕಾರ್ಯ ಮಾಡಿದ್ದಾರೆ. 15ನೇ ನಂಬರ್ ಎಂದು ಗುರುತು ಹಾಕಿ, ದೂರುದಾರ ಹೇಳಿದ ರೀತಿಯಲ್ಲೇ ಆಸುಪಾಸಿನ ನಾಲ್ಕು ಕಡೆ ಅಗೆದರೂ ಅಸ್ಥಿಪಂಜರದ ಯಾವುದೇ ಕುರುಹು ಸಿಕ್ಕಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಶಾಲಾ ಸಮವಸ್ತ್ರದಲ್ಲಿಯೇ 15 ವರ್ಷದ ಬಾಲಕಿಯನ್ನು ಕಲ್ಲೇರಿ ಎಂಬಲ್ಲಿ ಹೂತಿದ್ದೆ ಎಂದು ದೂರುದಾರ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದು ಒಟ್ಟು ಪ್ರಕರಣ ತೀವ್ರ ಸಂಚಲನ ಎಬ್ಬಿಸಲು ಕಾರಣವಾಗಿತ್ತು. ಧರ್ಮಸ್ಥಳ ಸ್ನಾನಘಟ್ಟದ ಬಳಿಯ 14 ಗುರುತು ಬಳಿಕ ಶುಕ್ರವಾರ ಮಧ್ಯಾಹ್ನ ನೇರವಾಗಿ ದೂರುದಾರ ಕಲ್ಲೇರಿ- ಬೋಳಿಯಾರಿನ ದಟ್ಟ ಅರಣ್ಯಕ್ಕೆ ಕರೆದೊಯ್ದಿದ್ದ. ಇದರಂತೆ ಕಾರ್ಮಿಕರು ಮತ್ತು ಸಣ್ಣ ಹಿಟಾಚಿಯ ಜೊತೆಗೇ ಅಧಿಕಾರಿಗಳು ಕಾಡಿಗೆ ತೆರಳಿದ್ದು ದೂರುದಾರ ಹೇಳಿದಂತೆ ಗುರುತು ಹಾಕಿದ್ದಾರೆ. ಆನಂತರ, ಅಲ್ಲಿನ ರಹಸ್ಯ ಭೇದಿಸುವ ಸಲುವಾಗಿ ಅಗೆತ ಮಾಡಿದ್ದಾರೆ.


15ನೇ ಮಾರ್ಕ್ ಹಾಕಿ, ಶೋಧ ಕಾರ್ಯ ನಡೆಸಿದ್ದಾರೆ. ಆನಂತರ, ಯಾವುದೇ ಅಸ್ಥಿಪಂಜರದ ಕುರುಹು ಸಿಗದೇ ಇದ್ದುದರಿಂದ ಅಲ್ಲಿಯೇ ಅಕ್ಕ ಪಕ್ಕದಲ್ಲಿ ನಾಲ್ಕು ಕಡೆ ತೋರಿಸಿದಂತೆ ಅಲ್ಲಿಯೂ ಅಗೆತ ಮಾಡಿದ್ದಾರೆ. ಮೊದಲು ಗುರುತು ಹಾಕಿದ್ದು 15 ಮತ್ತು ಆನಂತರದ್ದು 15 ಎ ಎಂದು ಗುರುತು ಹಾಕಿ ಅಗೆಯಲಾಗಿದೆ. ಮತ್ತೆರಡು ಪಾಯಿಂಟ್ ಗಳಿಗೆ ನಂಬರ್ ನಮೂದಿಸಿಲ್ಲ. ಆದರೂ ಅಲ್ಲಿ ಅಗೆದು ನೋಡಿದರೂ ಯಾವುದೇ ಅಸ್ಥಿಪಂಜರದ ಕುರುಹು ಸಿಕ್ಕಿಲ್ಲ ಎನ್ನುವ ಮಾಹಿತಿ ಎಸ್ಐಟಿ ಮೂಲಗಳಿಂದ ತಿಳಿದುಬಂದಿದೆ. 2010ರಲ್ಲಿ ಕಲ್ಲೇರಿ ಎಂಬಲ್ಲಿ 15 ವರ್ಷದ ಶಾಲಾ ಬಾಲಕಿಯನ್ನು ಮೇಲ್ವಿಚಾರಕರ ಸೂಚನೆಯಂತೆ ಹೂತು ಹಾಕಿದ್ದೆ ಎಂದು ದೂರುದಾರ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಐಟಿ ಅಧಿಕಾರಿಗಳು ಆ ಜಾಗಕ್ಕೆ ನೇರವಾಗಿ ಕರೆದೊಯ್ದು ಸ್ಥಳ ಶೋಧ ನಡೆಸಿದ್ದಾರೆ.
ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಹೋಗುವ ಹೆದ್ದಾರಿಯಲ್ಲಿ ಎರಡು ಕಿಮೀ ಸಾಗಿದಾಗ ಕಲ್ಲೇರಿ- ಬೋಳಿಯಾರ್ ಸಿಗುತ್ತದೆ. ಹೆದ್ದಾರಿಯಿಂದ ಒಳಭಾಗದ ಕಾಡಿಗೆ ದೂರುದಾರ ಪೊಲೀಸರನ್ನು ಕರೆದೊಯ್ದಿದ್ದ. ಇದೇ ಸ್ಥಳದಲ್ಲಿ ಹೂತಿದ್ದೇನೆ ಎಂದು ಹೇಳಿ ಅಗೆತ ಮಾಡಿದರೂ ಅಲ್ಲಿ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಅಲ್ಲಿನ ಶೋಧ ಕಾರ್ಯದ ಬಳಿಕ ಎಸ್ಐಟಿ ತಂಡ ಸಂಜೆ 6 ಗಂಟೆ ವೇಳೆಗೆ ಅಲ್ಲಿಂದ ಮರಳಿತ್ತು.
In a development that had stirred intense curiosity, the Special Investigation Team (SIT) on Thursday conducted a search in the dense Kalleri forest near the Dharmasthala–Subrahmanya state highway, at a spot where a complainant had claimed to have buried a 15-year-old schoolgirl in uniform.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm