ಬ್ರೇಕಿಂಗ್ ನ್ಯೂಸ್
05-08-25 04:29 pm Mangalore Correspondent ಕರಾವಳಿ
ಮಂಗಳೂರು, ಆ.5 : ಪಾಕಿಸ್ಥಾನ ವಿರುದ್ಧ 1965 ಮತ್ತು 1971ರಲ್ಲಿ ಸೇನಾ ಕಾರ್ಯಾಚರಣೆಯಲ್ಲಿ ಬಳಕೆಯಾಗಿದ್ದ ಭಾರತೀಯ ಭೂಸೇನೆಯ ಯುದ್ಧ ಟ್ಯಾಂಕರ್ ಟಿ-55 ಸಂಸದ ಕ್ಯಾ.ಬ್ರಿಜೇಶ್ ಚೌಟರ ಕೋರಿಕೆ ಮೇರೆಗೆ ಮಂಗಳೂರಿಗೆ ಆಗಮಿಸಿದ್ದು, ಸದ್ಯಕ್ಕೆ ನಗರದ ಕದ್ರಿ ಸರ್ಕಿಟ್ ಹೌಸ್ ಬಳಿಯಲ್ಲಿ ಇರಿಸಲಾಗಿದೆ.
ಭಾರತೀಯ ಸೇನೆಯಲ್ಲಿ 1961ರಿಂದ 2001ರ ವರೆಗೆ ಸೇವೆಯಲ್ಲಿದ್ದ ಈ ಯುದ್ಧ ಟ್ಯಾಂಕರನ್ನು ಪುಣೆಯ ಕಿರ್ಕಿಯಲ್ಲಿರುವ ಭಾರತೀಯ ಸೇನೆಯ ಡಿಪೋದಲ್ಲಿ ಇರಿಸಲಾಗಿತ್ತು. ಅದನ್ನು ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ವಿಶೇಷ ಟ್ರೈಲರ್ ನಲ್ಲಿ ಮಂಗಳೂರಿಗೆ ತರಿಸಲಾಗಿದೆ. ಇತ್ತೀಚೆಗೆ ಸಂಸದ ಬ್ರಿಜೇಶ್ ಚೌಟ, ಸೇನೆಯಲ್ಲಿ ಸೇವೆಗೈದ ಟ್ಯಾಂಕರ್ ಒಂದನ್ನು ಉಚಿತವಾಗಿ ಮಂಗಳೂರಿಗೆ ನೀಡಬೇಕೆಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದರು. ಇದರಂತೆ, ಯುದ್ಧ ಟ್ಯಾಂಕ್ ಅನ್ನು ಮಂಗಳೂರು ನಗರಕ್ಕೆ ತರಿಸಲಾಗಿದೆ.
ಅಂದಹಾಗೆ, ಈ ಯುದ್ಧ ಟ್ಯಾಂಕ್ ಅನ್ನು ಕದ್ರಿಯಲ್ಲಿರುವ ವಾರ್ ಮೆಮೋರಿಯಲ್ ಬಳಿಯಲ್ಲೇ ಇರಿಸುವ ಯೋಜನೆ ಇದೆಯಂತೆ. ವೀರ ಯೋಧರನ್ನು ಸ್ಮರಿಸುವ ಮತ್ತು ಸೇನೆಗೆ ಸೇರುವ ಯುವಕರಿಗೆ ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಯುದ್ಧ ಟ್ಯಾಂಕರನ್ನು ಮಂಗಳೂರು ನಗರ ಮಧ್ಯದಲ್ಲಿ ಇರಿಸಬೇಕೆಂದು ಸಂಸದ ಚೌಟರು ಯೋಚನೆ ಹೊಂದಿದ್ದಾರೆ. ಸಾಮಾನ್ಯವಾಗಿ ಯುದ್ಧದಲ್ಲಿ ಪಾಲ್ಗೊಂಡು ಸೇವೆಯಿಂದ ನಿವೃತ್ತಿಯಾಗಿರುವ ಟ್ಯಾಂಕ್ ಮತ್ತಿತರ ಸೇನೆಯ ಆಯುಧಗಳನ್ನು ಯುದ್ಧ ಸ್ಮರಣಿಕೆ ರೀತಿಯಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ. ಕದ್ರಿ ಯುದ್ಧ ಸ್ಮಾರಕದ ಬಳಿಯಲ್ಲಿ ಸೂಕ್ತ ವೇದಿಕೆಯನ್ನು ನಿರ್ಮಿಸಿ ಯುದ್ಧ ಟ್ಯಾಂಕರ್ ಇರಿಸಬೇಕೆಂಬ ಯೋಜನೆ ಇದೆಯೆಂದು ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಬರೋಬ್ಬರಿ 40 ಟನ್ ತೂಕವಿರುವ ಟಿ-55 ಯುದ್ಧ ಟ್ಯಾಂಕರ್ ಶುಕ್ರವಾರ ಪುಣೆಯಿಂದ ಹೊರಟಿದ್ದು ಮೂರು ದಿನದ ಪ್ರಯಾಣದ ಬಳಿಕ ಸೋಮವಾರ ರಾತ್ರಿ ಮಂಗಳೂರು ತಲುಪಿದೆ.
A historic T-55 battle tank, which was part of India’s military operations during the 1965 and 1971 wars against Pakistan, has arrived in Mangaluru and is currently stationed near the Kadri Circuit House. The tank has been brought to the city following a request by MP Capt. Brijesh Chowta.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 10:58 pm
HK News Desk
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
05-08-25 10:34 pm
Mangalore Correspondent
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
05-08-25 10:39 pm
Bangalore Correspondent
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm