ಬ್ರೇಕಿಂಗ್ ನ್ಯೂಸ್
10-08-20 05:37 am Mangalore Reporter ಕರಾವಳಿ
ಮಂಗಳೂರು, ಆಗಸ್ಟ್ 9: ಯಾವತ್ತೂ ಮಲ್ಲಿಗೆ ಹೂವಿನ ಕೊರತೆಯನ್ನೇ ಎದುರಿಸಿರದ ಬಪ್ಪನಾಡು ದುರ್ಗಾಪರಮೇಶ್ವರಿ ದೇವಿ ಈ ಬಾರಿ ಲಾಕ್ ಡೌನ್ ಸಂದರ್ಭದಲ್ಲಿ ಮಲ್ಲಿಗೆ ಅಟ್ಟೆಯ ಅಭಾವ ಕಂಡಿದ್ದಳಂತೆ. ದೇವಿಯ ಪೂಜೆಗೂ ಹೀಗಾಯ್ತಲ್ಲ ಅಂತ ಅಲ್ಲಿನ ಅರ್ಚಕರು ಮರುಕವನ್ನೂ ಪಟ್ಟಿದ್ದರಂತೆ. ಈ ಮಾತು ಕೇಳಿದ ಶಾಸಕರೊಬ್ವರ ಮನವೂ ಕರಗಿತ್ತಂತೆ..
ಹೌದು.. ಮೂಲ್ಕಿ ಸೀಮೆಯ ತಾಯಿ ಬಪ್ಪನಾಡು ದೇವಿಗೆ ಇನ್ನು ಯಾವತ್ತೂ ಮಲ್ಲಿಗೆಯ ಕೊರತೆ ಎದುರಾಗಬಾರದು. ಯಾವುದೇ ಲಾಕ್ ಡೌನ್ ಬರಲಿ, ಮುಷ್ಕರವೇ ಎದುರಾಗಲಿ.. ಪ್ರತಿ ದಿನವೂ ಮಲ್ಲಿಗೆ ಅಟ್ಟೆ ದೇವಿಗೆ ಅರ್ಪಣೆಯಾಗಲೇಬೇಕು ಎಂದು ನಿರ್ಧರಿಸಿದ್ದು ಮೂಡುಬಿದ್ರೆಯ ಮಾಜಿ ಶಾಸಕ ಅಭಯಚಂದ್ರ ಜೈನ್. ದೇವಸ್ಥಾನಕ್ಕೆ ತೆರಳಿದ್ದ ವೇಳೆ ಅರ್ಚಕರ ಮಾತು ಕೇಳಿದ ಅಭಯಚಂದ್ರ ಜೈನ್, ವರ್ಷದ 365 ದಿನವೂ ತಾನೇ ಮಲ್ಲಿಗೆ ಅಟ್ಟೆ ಅರ್ಪಿಸುತ್ತೇನೆ ಎಂದು ಅಭಯ ನೀಡಿದ್ದಾರೆ.


ಆದರೆ, ಅಭಯರು ತಾವು ಅರ್ಪಿಸುವ ಮಲ್ಲಿಗೆ ಅಟ್ಟೆಯ ಅರ್ಪಣೆಯ ಹಿಂದೆ ರಾಜಕೀಯ ಉದ್ದೇಶ ಇಟ್ಟುಕೊಂಡಿದ್ದಾರೆ. ರಾಜ್ಯದ ಕಾಂಗ್ರೆಸ್ ಸಾರಥ್ಯ ವಹಿಸಿರುವ ಡಿ.ಕೆ.ಶಿವಕುಮಾರ್ ಹೆಸರಲ್ಲಿ ಮಲ್ಲಿಗೆ ಅಟ್ಟೆ ದೇವಿಗೆ ಅರ್ಪಣೆಯಾಗಲಿ ಎಂದಿದ್ದಾರೆ. ತಮ್ಮ ಹೆಸರು ಬೇಡ. ಡಿಕೆಶಿ ಹೆಸರಿನಲ್ಲಿಯೇ ದೇವಿಗೆ ಮಲ್ಲಿಗೆ ಸೇವೆ ರೂಪದಲ್ಲಿ ಅರ್ಪಿಸುವುದಾಗಿ ದೇವಸ್ಥಾನದಲ್ಲಿ ಬರೆಸಿಕೊಂಡಿದ್ದಾರಂತೆ. ದೇವಿಯ ಅಭಯ ಡಿಕೆಶಿಗೆ ಸದಾ ಇರಲೆಂದು ಅಭಯರು ಹಾರೈಸಿದ್ದಾರೆಂದು ಜೈನರ ಆಪ್ತರು ತಿಳಿಸಿದ್ದಾರೆ.
ಮುಲ್ಕಿ ಅರಸರಾದ ದುಗ್ಗಣ್ಣ ಸಾವಂತರ ಸಮ್ಮುಖದಲ್ಲಿ ಅಭಯಚಂದ್ರ ಜೈನ್ ಮತ್ತು ಕಾಂಗ್ರೆಸ್ ಪ್ರಮುಖರು ಸೇರಿ ಮಲ್ಲಿಗೆ ಸೇವೆ ಅರ್ಪಿಸಿದ್ದು ವಿಶೇಷ.
03-11-25 05:17 pm
Bangalore Correspondent
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
03-11-25 05:20 pm
Mangalore Correspondent
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm