ಬ್ರೇಕಿಂಗ್ ನ್ಯೂಸ್
09-06-25 11:03 pm Mangalore Correspondent ಕರಾವಳಿ
ಮಂಗಳೂರು, ಜೂನ್ 9 : ಕೇರಳದ ಕೊಚ್ಚಿಯ ಬೇಪೂರ್ ಸಮುದ್ರ ತೀರದಿಂದ 78 ನಾಟಿಕಲ್ ಮೈಲು ದೂರದಲ್ಲಿ ಸಿಂಗಾಪುರ ಮೂಲದ ಕಂಟೇನರ್ ಹಡಗಿನಲ್ಲಿ ಬೆಂಕಿ ಹತ್ತಿಕೊಂಡಿದ್ದು, ಅದರಲ್ಲಿದ್ದ 18 ಮಂದಿಯನ್ನು ನೌಕಾಪಡೆ ಮತ್ತು ಇಂಡಿಯನ್ ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿದೆ. ನಾಲ್ವರು ಸಿಬಂದಿ ನಾಪತ್ತೆಯಾಗಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ.
ಐವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕ ಇದೆಯೆಂದು ಅಧಿಕಾರಿಗಳು ತಿಳಿಸಿದ್ದು, ಅವರನ್ನು ಐಎನ್ಎಸ್ ಸೂರತ್ ಶಿಪ್ ಮೂಲಕ ಪಣಂಬೂರು ಬಂದರಿಗೆ ತರಲಾಗಿದೆ. ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆಯಿದೆ. ಎಂವಿ ವ್ಯಾನ್ ಹೈ 503 ಹೆಸರಿನ ಸಿಂಗಾಪುರದ ಕಂಟೇನರ್ ಹಡಗು ಶ್ರೀಲಂಕಾದ ಕೊಲಂಬೋದಿಂದ ಮುಂಬೈ ತೆರಳುತ್ತಿದ್ದಾಗ ಕೇರಳ ಸಮುದ್ರ ತೀರದಲ್ಲಿ ದುರಂತಕ್ಕೀಡಾಗಿದೆ.




ಕೊಲಂಬೋದಿಂದ ಹಡಗು ಹೊರಟಿದ್ದಾಗ ಒಟ್ಟು 22 ಸಿಬಂದಿ ಇದ್ದರು. ಎಂಟು ಚೈನಾ, ನಾಲ್ಕು ತೈವಾನ್, ನಾಲ್ಕು ಮ್ಯಾನ್ಮಾರ್, ಇಬ್ಬರು ಇಂಡೋನೇಶ್ಯಾ ಮೂಲದವರು ಇದ್ದರು. ಈಗ 18 ಸಿಬಂದಿಯನ್ನು ರಕ್ಷಣೆ ಮಾಡಲಾಗಿದ್ದು ನಾಲ್ಕು ಮಂದಿ ಸಮುದ್ರದಲ್ಲಿ ನಾಪತ್ತೆಯಾಗಿದ್ದು ಅವರ ರಕ್ಷಣೆಗಾಗಿ ಹುಡುಕಾಟ ಮುಂದುವರಿದಿದೆ. ಮಂಗಳೂರು ಕೋಸ್ಟ್ ಗಾರ್ಡ್ ಪಡೆಯ ಐಸಿಜಿಎಸ್ ರಾಜದೂತ್, ಕೊಚ್ಚಿಯ ಐಸಿಜಿಎಸ್ ಅರ್ನ್ವೇಶ್, ಅಗತ್ತಿಯ ಐಸಿಜಿಎಸ್ ಸಾಚೆಟ್ ಹಡಗಿನ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ನಾಪತ್ತೆಯಾದವರಲ್ಲಿ ಇಬ್ಬರು ತೈವಾನ್, ಒಬ್ಬ ಇಂಡೋನೇಶ್ಯಾ ಮತ್ತು ಇನ್ನೊಬ್ಬ ಮ್ಯಾನ್ಮಾರ್ ಮೂಲದವರು ಇದ್ದಾರೆ. ಹಡಗಿನಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿಸಲಾಗಿದೆ.
ಎರಡನೇ ಹಡಗು ದುರಂತ
ಇತ್ತೀಚೆಗೆ ಮೇ 25ರಂದು ಕೇರಳ ಕರಾವಳಿಯಲ್ಲಿ ಲೈಬೀರಿಯಾ ಮೂಲದ 30 ವರ್ಷ ಹಳೆಯ ಬೃಹತ್ ಕಂಟೇನರ್ ಹಡಗು ಮುಳುಗಡೆಯಾಗಿತ್ತು. ಅದರಲ್ಲಿ 640 ಕಂಟೇನರ್ ಗಳಿದ್ದು, ಆ ಪೈಕಿ 12 ಕಂಟೇನರ್ ಗಳಲ್ಲಿ ಅತ್ಯಂತ ವಿಷಕಾರಿ ರಾಸಾಯನಿಕಗಳು ತುಂಬಿದ್ದವು. ಕೆಲವು ಕಂಟೇನರ್ ಗಳು ಕೇರಳ ಕರಾವಳಿ ದಡಕ್ಕೆ ತೇಲಿ ಬಂದಿದ್ದು ದಡಕ್ಕೆ ಬಡಿಯುತ್ತಲೇ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡಿದ್ದವು. ಇದರಿಂದಾಗಿ ಕೇರಳದ ಕರಾವಳಿ ಸಮುದ್ರ ತೀರ ತೀವ್ರ ಮಲಿನಗೊಳ್ಳುವ ಆತಂಕ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಕಂಟೇನರ್ ಹಡಗು ದುರಂತಕ್ಕೀಡಾಗಿದೆ.
Fire Breaks Out on Singapore Container Ship Off Kerala Coast; 18 Crew Rescued, 4 Missing, Injured Brought to Mangalore by Coast Guard
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm