ಬ್ರೇಕಿಂಗ್ ನ್ಯೂಸ್
07-06-25 09:15 pm Mangalore Correspondent ಕರಾವಳಿ
ಮಂಗಳೂರು, ಜೂನ್ 7 : ಆರ್ ಸಿಬಿ ವಿಜಯೋತ್ಸವ ಸಂದರ್ಭ ಕಾಲ್ತುಳಿತ ಆಗುತ್ತಿದ್ದಾಗ ರಾಜ್ಯದ ಮುಖ್ಯಮಂತ್ರಿಯಾದವರು ದೋಸೆ ತಿನ್ನುತ್ತಿದ್ದರು ಅನ್ನುವ ಸುದ್ದಿ ಸತ್ಯವೇ ಆಗಿದ್ದರೆ, ದುರಂತದಲ್ಲಿ ಮಕ್ಕಳನ್ನು ಕಳಕೊಂಡ ಕುಟುಂಬದ ಶಾಪ ತಟ್ಟುತ್ತದೆ. ದೇವರು ಕೂಡ ಕ್ಷಮಿಸಲಿಕ್ಕಿಲ್ಲ. ಆದರೆ ಆ ರೀತಿ ಆಗಿರಲಿಕ್ಕಿಲ್ಲ ಎಂದು ಭಾವಿಸುತ್ತೇನೆ ಎಂಬುದಾಗಿ ಬಿಜೆಪಿ ಮುಖಂಡ ಸಿಟಿ ರವಿ ಹೇಳಿದ್ದಾರೆ.
ಬೆಂಗಳೂರಿನ ಕಾಲ್ತುಳಿತ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ದೋಸೆ ಸವಿಯುತ್ತಿದ್ದರು ಎನ್ನುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಸಿಟಿ ರವಿ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಯಾರೇ ಆಗಲಿ, ಇಂಥ ದುರಂತ ಆಗಿದ್ದಾಗ ದೋಸೆ ಸವಿಯುವಂಥ ಕೆಲಸ ಮಾನವೀಯತೆ ಇದ್ದವರು ಮಾಡಲಿಕ್ಕಿಲ್ಲ. ಅದು ಸತ್ಯವೇ ಆಗಿದ್ದರೆ ಇದಕ್ಕೂ ಆಫ್ರಿಕಾದಲ್ಲಿ ಮಕ್ಕಳ ಮೆದುಳನ್ನು ತಿನ್ನುವ ಇದಿ ಅಮೀನ್ ಗೂ ವ್ಯತ್ಯಾಸ ಇಲ್ಲ ಎಂದು ಟೀಕಿಸಿದ್ದಾರೆ.

ಆರ್ ಸಿಬಿ ಗೆಲುವಿನ ವಿಜಯೋತ್ಸವ ಆಚರಿಸಲು ಅದರ ಮಾಲೀಕರು ಕರ್ನಾಟಕದವರಾ. ಸಿಎಂ ಅಥವಾ ಅವರ ಕಡೆಯವರು ಇದರಲ್ಲಿ ಸೀಕ್ರೆಟ್ ಇನ್ವೆಸ್ಟ್ ಮಾಡಿದ್ದಾರೆಯೇ.. ಎಂದು ಪ್ರಶ್ನಿಸಿದ ಸಿಟಿ ರವಿ, ಅಷ್ಟು ತರಾತುರಿಯಲ್ಲಿ ವಿಜಯೋತ್ಸವ ಮಾಡುವುದಕ್ಕೇನು ದರ್ದು ಇತ್ತು. ಇವರ ಬೇಜಾವಾಬ್ದಾರಿ ತೋರಿಸದೇ ಇರುತ್ತಿದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವ ಸ್ಥಿತಿ ಬರುತ್ತಿತ್ತಾ.. ಹೊರಗಡೆ ಜೀವ ಹೋಗುತ್ತಾ ಇದ್ರೂ ಡಿಸಿಎಂ ಟ್ರೋಫಿ ಎತ್ತಿ ಕುಣೀತಾ ಇದ್ರಲ್ವಾ.. ಈ ಘಟನೆಗೆ ಯಾರು ರೆಸ್ಪಾನ್ಸಿಬಲ್. ಕಾಲ್ತುಳಿತ ಆದಾಗ ಗಾಯಾಳುಗಳನ್ನು ಪೊಲೀಸರು ಕೈಯಲ್ಲಿ ಎತ್ಕೊಂಡು ಹೋಗುವ ಸ್ಥಿತಿಯಾಗಿತ್ತಲ್ವೇ.. ಆಂಬುಲೆನ್ಸ್ ಇಟ್ಕೊಳ್ಳೋಕೂ ಯೋಗ್ಯತೆ ಇರಲಿಲ್ವಾ ಎಂದರು.
ಪೊಲೀಸ್ ಅಧಿಕಾರಿಗಳನ್ನು ಕಾರಣಕರ್ತರೆಂದು ಸಸ್ಪೆಂಡ್ ಮಾಡಿದ್ದೀರಿ. ಆರ್ ಸಿಬಿ ಗೆಲುವಿನ ವಿಜಯೋತ್ಸವ ಆಯೋಜಿಸಿದ್ದು ಕಮಿಷನರ್ ದಯಾನಂದ್. ಒಟ್ಟು ಕಾರ್ಯಕ್ರಮವನ್ನು ಅವರೇ ಮಾಡಿದ್ರು ಅಂತ ಹೊಣೆ ಎಲ್ಲ ಅವರ ತಲೆಗೆ ಕಟ್ಟಿದಂತೆ ಸಿಎಂ, ಡಿಸಿಎಂ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
Siddaramaiah, DK Shivakumar Must Take Responsibility for RCB Stampede, Not Blame Police, CT Ravi.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm