ಬ್ರೇಕಿಂಗ್ ನ್ಯೂಸ್
23-04-25 09:36 pm Mangalore Correspondent ಕರಾವಳಿ
ಮಂಗಳೂರು, ಎ.23 : ದಕ್ಷಿಣ ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಹೇಡಿತನದ ಭಯೋತ್ಪಾದಕ ದಾಳಿಯು ನನ್ನ ಮನಸ್ಸಿಗೆ ತೀವ್ರ ನೋವು ನೀಡುವ ಜತೆಗೆ ಬಹಳ ಆಕ್ರೋಶವನ್ನುಂಟು ಮಾಡಿದೆ. ಇದು ಕೇವಲ ಒಂದು ಪ್ರದೇಶ ಅಥವಾ ಗುಂಪಿನ ಮೇಲೆ ನಡೆದ ದಾಳಿಯಲ್ಲ ; ಬದಲಿಗೆ ಇದು ಪ್ರತಿ ಭಾರತೀಯರ ಹೃದಯದ ಮೇಲೆ ನಡೆದಿರುವ ದಾಳಿಯಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಉಗ್ರರು ಮುಗ್ಧ ಜನರ ಮೇಲೆ ನಡೆಸಿರುವ ಈ ದಾಳಿಯನ್ನು ಕಟುವಾಗಿ ಖಂಡಿಸಿರುವ ಕ್ಯಾ. ಚೌಟ, ಈ ದಾಳಿಯಲ್ಲಿ ಶಿವಮೊಗ್ಗ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ದೇಶದ ಹಲವೆಡೆಯಿಂದ ಕಾಶ್ಮೀರಕ್ಕೆ ಬಂದಿದ್ದ ಕುಟುಂಬಗಳು ತಮ್ಮ ಪ್ರೀತಿ-ಪಾತ್ರರನ್ನು ಕಳೆದುಕೊಂಡಿದ್ದಾರೆ. ಕಾಶ್ಮೀರವು ಶಾರದಾ ದೇಶ, ಅದು ಅನಾದಿ ಕಾಲದಿಂದ ದೇವಾಲಯಗಳನ್ನು ಮಡಿಲಲ್ಲಿ ಹೊತ್ತುಕೊಂಡ ಪವಿತ್ರ ಜ್ಞಾನದ ಭೂಮಿ. ಅಷ್ಟೇ ಅಲ್ಲ, ಅದು ನಮ್ಮ ಭಾರತದ ಮುಕುಟ ಮಣಿ. ಆದರೆ ಈ ಸತ್ಯವು ಶತ್ರುಗಳನ್ನು ಕಂಗೆಡಿಸುತ್ತಿದೆ. ಹೀಗಾಗಿ, ಈ ಹೇಡಿ ಭಯೋತ್ಪಾದಕರು ನಿರಾಯುಧ ನಾಗರಿಕರನ್ನು ಕೊಂದು ಭಯ ಹುಟ್ಟಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.




ಉಗ್ರರು ಹಾಗೂ ಅವರ ಹಿಂದಿನ ದುಷ್ಟರಿಗೆ ಜನರಲ್ಲಿ ಭಯ ಹುಟ್ಟಿಸುವುದೇ ಗುರಿ. ಕಾಶ್ಮೀರದ ಬೀದಿಗಳು ಬಿಕೋ ಎನ್ನಬೇಕು, ಅಲ್ಲಿ ವ್ಯಾಪಾರ ವಹಿವಾಟು- ಆರ್ಥಿಕತೆ ಹಾಳಾಗಬೇಕು, ಜನರು ನಿರಾಶರಾಗಬೇಕು ಎಂಬುದೇ ಅವರ ಮುಖ್ಯ ಉದ್ದೇಶ. ಆದರೆ ಭಾರತ ಬದಲಾಗಿದ್ದು ಜಗತ್ತು ಕೂಡ ಬದಲಾಗಿದೆ. ಇಂದು, ವಾಷಿಂಗ್ಟನ್ನಿಂದ ಪಶ್ಚಿಮ ಏಷ್ಯಾದ ವರೆಗೆ, ಜಾಗತಿಕ ಸಮುದಾಯವು ಭಾರತದೊಂದಿಗೆ ಹೆಗಲು ಕೊಟ್ಟು ನಿಂತಿದೆ. ಪ್ರಪಂಚದಾದ್ಯಂತ ಬಲಿಷ್ಠ ರಾಷ್ಟ್ರಗಳು ಈ ಭಯೋತ್ಪಾದಕ ಕೃತ್ಯವನ್ನು ಸ್ಪಷ್ಟವಾಗಿ ಖಂಡಿಸಿ ಭಾರತಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿವೆ. ಆಧುನಿಕ ಜಗತ್ತಿನಲ್ಲಿ ಭಯೋತ್ಪಾದನೆಗೆ ಯಾವುದೇ ಸ್ಥಾನವಿಲ್ಲ. ಭಾರತದಲ್ಲೂ ಇದಕ್ಕೆ ಕಿಂಚಿತ್ತೂ ಅವಕಾಶವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮೋಸ್ಟ್ ವಾಂಟೆಡ್ ಉಗ್ರ ತಹವ್ವೂರ್ ರಾಣಾ ಭಾರತದಲ್ಲಿ ಕಾನೂನಿನಡಿ ಕ್ರಮ ಎದುರಿಸಬೇಕಾಗಿರುವುದು, ದಶಕಗಳ ಕಾಲದ ಅನಿಯಂತ್ರಿತ ದುರ್ಬಳಕೆಯನ್ನು ಕೊನೆಗೊಳಿಸುವ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದಿರುವುದು, ಕಾಶ್ಮೀರದಲ್ಲಿ ಜನರನ್ನು ಭಯದ ವಾತಾವರಣದಲ್ಲಿಡುವ 370ನೇ ವಿಧಿ ರದ್ದುಗೊಳಿಸಿರುವುದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಹೆಮ್ಮೆಯ ನವ ಭಾರತದ ಉದಯವನ್ನು ಸಹಿಸಲಾಗದೆ ರಣಹೇಡಿ ಉಗ್ರರು ಅಮಾಯಕರನ್ನು ಗುರಿಯಾಗಿಸಿದ್ದಾರೆ ಎಂದು ಕ್ಯಾ. ಚೌಟ ಕಿಡಿಕಾರಿದ್ದಾರೆ.
ಈ ಹಿಂದೆ ದೇಶ ಸೇವೆಗೈದ ಓರ್ವ ಯೋಧನಾಗಿ ಹಾಗೂ ಇಂದು ನಿಮ್ಮ ಜನಪ್ರತಿನಿಧಿಯಾಗಿ ನಾನು ಹೇಳುವುದೇನೆಂದರೆ, ಪ್ರತಿಯೊಬ್ಬ ಭಾರತೀಯನೂ ಮಾನಸಿಕವಾಗಿ ಸೈನಿಕನಾಗಬೇಕಾದ ಸಮಯವಿದು. ನಮ್ಮ ದೇಶದ ಪ್ರತಿಯೊಂದು ಮನೆಯಿಂದಲೂ ಒಗ್ಗಟ್ಟಿನ ಶಕ್ತಿ ಹೊರಹೊಮ್ಮಲಿ. ಏಕೆಂದರೆ ಈ ಹೋರಾಟ ಕೇವಲ ಕಾಶ್ಮೀರಕ್ಕೆ ಸೀಮಿತವಾಗಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದವರ ವಿಕೃತ ಮನಸ್ಥಿತಿಗಳು, ವಕ್ಫ್ ಸುಧಾರಣೆಯನ್ನು ವಿರೋಧಿಸಿದ ಅದೇ ಗುಂಪು ಈ ಕೃತ್ಯಗಳ ಹಿಂದೆಯೂ ಇದೆ. ನಮ್ಮ ಬಲಿಷ್ಠ, ಸ್ವತಂತ್ರ ಮತ್ತು ಸಂಸ್ಕೃತಿಯನ್ನು ಗೌರವಿಸುವ ಭಾರತವನ್ನು ಕಂಡು ಭಯಪಡುವ ಶಕ್ತಿಗಳೇ ಇವೆಲ್ಲವನ್ನೂ ಮಾಡುತ್ತಿವೆ ಎಂದು ನೇರ ಆರೋಪ ಮಾಡಿದ್ದಾರೆ.
ಪಹಲ್ಗಾಮ್ನಲ್ಲಿ ಹತ್ಯೆಯಾದ ಶಿವಮೊಗ್ಗದ ಮಂಜುನಾಥ್ ಇರಬಹುದು, ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹೊಸ ಜೀವನವನ್ನು ಆರಂಭಿಸುತ್ತಿದ್ದ ನವ ದಂಪತಿಗಳಿರಬಹುದು ಮತ್ತು ರಜೆಯ ಖುಷಿ ಅನುಭವಿಸಬೇಕಾದ ಮುದ್ದು ಮಗು ಇರಬಹುದು; ಅವರೆಲ್ಲರೂ ನಮ್ಮಂತೆಯೇ ಇದ್ದರು. ಅವರಿಗೂ ಕನಸುಗಳಿದ್ದವು, ಭವಿಷ್ಯವಿತ್ತು. ಈ ದಾಳಿ ಕೇವಲ ಒಂದು ಪ್ರದೇಶಕ್ಕೆ ಆದ ಗಾಯವಲ್ಲ, ಇದು ಇಡೀ ದೇಶಕ್ಕೆ ಆದ ನೋವು. ಈ ದುರಂತ ನಮ್ಮೆಲ್ಲರ ಹೃದಯವನ್ನು ತಟ್ಟಿದೆ. ಭಾರತವು ಈ ನೋವಿಗೆ ಒಗ್ಗಟ್ಟಿನಿಂದ, ತನ್ನೆಲ್ಲಾ ಶಕ್ತಿಯಿಂದ ಮತ್ತು ದೃಢವಾದ ನಿರ್ಧಾರದಿಂದ ಉತ್ತರಿಸುತ್ತದೆ. ನಾವು ಈ ದಾಳಿಯನ್ನು ಎಂದಿಗೂ ಮರೆಯುವುದಿಲ್ಲ ಮತ್ತು ನಮ್ಮೆಲ್ಲರ ಏಕತೆಯೇ ಇದಕ್ಕೆ ಪ್ರಬಲವಾದ ಉತ್ತರವಾಗಲಿದೆ ಎಂದು ಕ್ಯಾ. ಚೌಟ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Kashmir, India's Crown Jewel Under Siege, Mangalore MP Brijesh Chowta Commits to Justice Against Terrorism during the protest held in city.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm