ಬ್ರೇಕಿಂಗ್ ನ್ಯೂಸ್
27-11-20 11:59 am Mangalore Correspondent ಕರಾವಳಿ
ಬಂಟ್ವಾಳ, ನವೆಂಬರ್ 27: ಜಾಗದ ಪಹಣಿ ಪತ್ರದಲ್ಲಿ ಸರ್ವೆ ನಂಬ್ರ ಬದಲಾಗಿದ್ದನ್ನು ಸರಿಪಡಿಸಲು ಒಂದು ಸಾವಿರ ಲಂಚ ಕೇಳಿದ ಬಂಟ್ವಾಳದ ಉಪ ತಹಸೀಲ್ದಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಬಂಟ್ವಾಳ ತಾಲೂಕು ಕಚೇರಿಯಲ್ಲಿ ಉಪ ತಹಸೀಲ್ದಾರ್ ಆಗಿರುವ ರವಿಚಂದ್ರ ಲಂಚ ಪಡೆಯುತ್ತಿರುವಾಗಲೇ ಸಿಕ್ಕಿಬಿದ್ದವರು. ಪಜೀರು ನಿವಾಸಿ ವೆರೋನಿಕಾ ರೋಡ್ರಿಗಸ್ ಎಂವಬರು, ಬೆಂಜನಪದವಿನ ತಮ್ಮ ಜಾಗದ ದಾಖಲೆ ಪತ್ರದಲ್ಲಿ ಸರ್ವೆ ನಂಬ್ರ ಬದಲಾಗಿದ್ದನ್ನು ಸರಿಪಡಿಸಲು ಅರ್ಜಿ ಸಲ್ಲಿಸಿದ್ದರು.
ಸರ್ವೆ ನಂಬರ್ 107-14 ಆಗಬೇಕಾಗಿದ್ದಲ್ಲಿ 107-1ಎಚ್ ಎಂದು ನಮೂದಾಗಿತ್ತು. ಸಣ್ಣ ಬದಲಾವಣೆಯನ್ನು ಸರಿಪಡಿಸಲು 2018ರ ಜೂನ್ 12ರಂದು ತಹಸೀಲ್ದಾರ್ ಕಚೇರಿಗೆ ಅರ್ಜಿ ಬರೆದಿದ್ದರು. ಆದರೆ, ವರ್ಷ ಕಳೆದರೂ ಅರ್ಜಿ ಅಲ್ಲಿಂದ ಕದಲಿರಲಿಲ್ಲ. ಮತ್ತೆ ಮತ್ತೆ ತಹಸೀಲ್ದಾರ್ ಅವರನ್ನು ಭೇಟಿಯಾಗಿ ಗೋಗರೆದಾಗ, 2019 ಮೇ ತಿಂಗಳಲ್ಲಿ ಅರ್ಜಿ ಮೇರಮಜಲು ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಬಂದಿತ್ತು. ಆನಂತರವೂ ತಮ್ಮ ಕೆಲಸ ಆಗಲೇ ಇಲ್ಲ.
ಮತ್ತೊಂದು ವರ್ಷ ಕಳೆದ ಬಳಿಕ, 2020ರಲ್ಲಿ ಅರ್ಜಿ ಗ್ರಾಮಾಧಿಕಾರಿಯಿಂದ ಮತ್ತೆ ತಹಸೀಲ್ದಾರ್ ಕಚೇರಿಗೆ ಅಪ್ರೂವಲ್ ಗೆ ಬಂದಿತ್ತು. ಗ್ರಾಮಾಧಿಕಾರಿ ಕೊಟ್ಟ ಉಲ್ಲೇಖ ಪತ್ರಕ್ಕೆ ತಹಸೀಲ್ದಾರ್ ಸಹಿ ಹಾಕಿ ಅರ್ಜಿಯನ್ನು ಮುಂದಕ್ಕೆ ಕೊಡಬೇಕಿತ್ತು. ಅರ್ಜಿದಾರರು ಮತ್ತೆ ಮತ್ತೆ ಉಪ ತಹಸೀಲ್ದಾರ್ ಅವರನ್ನು ಭೇಟಿಯಾಗಿದ್ದು, ಕೊನೆಗೆ ಸಹಿ ಹಾಕಿ ಕೊಡಲು ಹಣದ ಬೇಡಿಕೆ ಇಟ್ಟಿದ್ದಾರೆ.
ಅರ್ಜಿದಾರ ವೆರೋನಿಕಾ ರೋಡ್ರಿಗಸ್, ಈ ವಿಚಾರವನ್ನು ಮಂಗಳೂರಿನ ಎಸಿಬಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಅಧಿಕಾರಿಗಳು ಮೊದಲೇ ಕೊಟ್ಟಿದ್ದ ಒಂದು ಸಾವಿರ ರೂ. ಹಣವನ್ನು ಅರ್ಜಿದಾರರಿಂದ ಪಡೆಯುತ್ತಿದ್ದಾಗಲೇ ಉಪ ತಹಸೀಲ್ದಾರ್ ಈಗ ಎಸಿಬಿ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಎಸಿಬಿ ಡಿವೈಎಸ್ಪಿ ಕೆ.ಸಿ ಪ್ರಕಾಶ್ ನೇತೃತ್ವದಲ್ಲಿ ಇನ್ ಸ್ಪೆಕ್ಟರ್ ಗಳಾದ ಗುರುರಾಜ್ ಮತ್ತು ಶ್ಯಾಮಸುಂದರ್ ದಾಳಿ ಕಾರ್ಯಾಚರೆ ನಡೆಸಿದ್ದರು. ಒಂದು ಸಣ್ಣ ಫೈಲ್ ಮುಂದಿಟ್ಟು ಕಂದಾಯ ಇಲಾಖೆ ಅಧಿಕಾರಿಗಳು ಹೇಗೆಲ್ಲಾ ಪೀಡಿಸುತ್ತಾರೆ, ಹಣ ಕೊಡದಿದ್ದರೆ ವರ್ಷಗಟ್ಟಲೆ ಹೇಗೆ ಸತಾಯಿಸುತ್ತಾರೆ ಎಂಬುದಕ್ಕೆ ಈ ಪ್ರಕರಣ ನಿದರ್ಶನ.
The Anti-Corruption Bureau (ACB) officials caught deputy tahsildar in Bantwal taluk office, Ravishankar, when accepting a bribe.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am