ಬ್ರೇಕಿಂಗ್ ನ್ಯೂಸ್
27-11-20 11:59 am Mangalore Correspondent ಕರಾವಳಿ
ಬಂಟ್ವಾಳ, ನವೆಂಬರ್ 27: ಜಾಗದ ಪಹಣಿ ಪತ್ರದಲ್ಲಿ ಸರ್ವೆ ನಂಬ್ರ ಬದಲಾಗಿದ್ದನ್ನು ಸರಿಪಡಿಸಲು ಒಂದು ಸಾವಿರ ಲಂಚ ಕೇಳಿದ ಬಂಟ್ವಾಳದ ಉಪ ತಹಸೀಲ್ದಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಬಂಟ್ವಾಳ ತಾಲೂಕು ಕಚೇರಿಯಲ್ಲಿ ಉಪ ತಹಸೀಲ್ದಾರ್ ಆಗಿರುವ ರವಿಚಂದ್ರ ಲಂಚ ಪಡೆಯುತ್ತಿರುವಾಗಲೇ ಸಿಕ್ಕಿಬಿದ್ದವರು. ಪಜೀರು ನಿವಾಸಿ ವೆರೋನಿಕಾ ರೋಡ್ರಿಗಸ್ ಎಂವಬರು, ಬೆಂಜನಪದವಿನ ತಮ್ಮ ಜಾಗದ ದಾಖಲೆ ಪತ್ರದಲ್ಲಿ ಸರ್ವೆ ನಂಬ್ರ ಬದಲಾಗಿದ್ದನ್ನು ಸರಿಪಡಿಸಲು ಅರ್ಜಿ ಸಲ್ಲಿಸಿದ್ದರು.
ಸರ್ವೆ ನಂಬರ್ 107-14 ಆಗಬೇಕಾಗಿದ್ದಲ್ಲಿ 107-1ಎಚ್ ಎಂದು ನಮೂದಾಗಿತ್ತು. ಸಣ್ಣ ಬದಲಾವಣೆಯನ್ನು ಸರಿಪಡಿಸಲು 2018ರ ಜೂನ್ 12ರಂದು ತಹಸೀಲ್ದಾರ್ ಕಚೇರಿಗೆ ಅರ್ಜಿ ಬರೆದಿದ್ದರು. ಆದರೆ, ವರ್ಷ ಕಳೆದರೂ ಅರ್ಜಿ ಅಲ್ಲಿಂದ ಕದಲಿರಲಿಲ್ಲ. ಮತ್ತೆ ಮತ್ತೆ ತಹಸೀಲ್ದಾರ್ ಅವರನ್ನು ಭೇಟಿಯಾಗಿ ಗೋಗರೆದಾಗ, 2019 ಮೇ ತಿಂಗಳಲ್ಲಿ ಅರ್ಜಿ ಮೇರಮಜಲು ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಬಂದಿತ್ತು. ಆನಂತರವೂ ತಮ್ಮ ಕೆಲಸ ಆಗಲೇ ಇಲ್ಲ.
ಮತ್ತೊಂದು ವರ್ಷ ಕಳೆದ ಬಳಿಕ, 2020ರಲ್ಲಿ ಅರ್ಜಿ ಗ್ರಾಮಾಧಿಕಾರಿಯಿಂದ ಮತ್ತೆ ತಹಸೀಲ್ದಾರ್ ಕಚೇರಿಗೆ ಅಪ್ರೂವಲ್ ಗೆ ಬಂದಿತ್ತು. ಗ್ರಾಮಾಧಿಕಾರಿ ಕೊಟ್ಟ ಉಲ್ಲೇಖ ಪತ್ರಕ್ಕೆ ತಹಸೀಲ್ದಾರ್ ಸಹಿ ಹಾಕಿ ಅರ್ಜಿಯನ್ನು ಮುಂದಕ್ಕೆ ಕೊಡಬೇಕಿತ್ತು. ಅರ್ಜಿದಾರರು ಮತ್ತೆ ಮತ್ತೆ ಉಪ ತಹಸೀಲ್ದಾರ್ ಅವರನ್ನು ಭೇಟಿಯಾಗಿದ್ದು, ಕೊನೆಗೆ ಸಹಿ ಹಾಕಿ ಕೊಡಲು ಹಣದ ಬೇಡಿಕೆ ಇಟ್ಟಿದ್ದಾರೆ.
ಅರ್ಜಿದಾರ ವೆರೋನಿಕಾ ರೋಡ್ರಿಗಸ್, ಈ ವಿಚಾರವನ್ನು ಮಂಗಳೂರಿನ ಎಸಿಬಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಅಧಿಕಾರಿಗಳು ಮೊದಲೇ ಕೊಟ್ಟಿದ್ದ ಒಂದು ಸಾವಿರ ರೂ. ಹಣವನ್ನು ಅರ್ಜಿದಾರರಿಂದ ಪಡೆಯುತ್ತಿದ್ದಾಗಲೇ ಉಪ ತಹಸೀಲ್ದಾರ್ ಈಗ ಎಸಿಬಿ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಎಸಿಬಿ ಡಿವೈಎಸ್ಪಿ ಕೆ.ಸಿ ಪ್ರಕಾಶ್ ನೇತೃತ್ವದಲ್ಲಿ ಇನ್ ಸ್ಪೆಕ್ಟರ್ ಗಳಾದ ಗುರುರಾಜ್ ಮತ್ತು ಶ್ಯಾಮಸುಂದರ್ ದಾಳಿ ಕಾರ್ಯಾಚರೆ ನಡೆಸಿದ್ದರು. ಒಂದು ಸಣ್ಣ ಫೈಲ್ ಮುಂದಿಟ್ಟು ಕಂದಾಯ ಇಲಾಖೆ ಅಧಿಕಾರಿಗಳು ಹೇಗೆಲ್ಲಾ ಪೀಡಿಸುತ್ತಾರೆ, ಹಣ ಕೊಡದಿದ್ದರೆ ವರ್ಷಗಟ್ಟಲೆ ಹೇಗೆ ಸತಾಯಿಸುತ್ತಾರೆ ಎಂಬುದಕ್ಕೆ ಈ ಪ್ರಕರಣ ನಿದರ್ಶನ.
The Anti-Corruption Bureau (ACB) officials caught deputy tahsildar in Bantwal taluk office, Ravishankar, when accepting a bribe.
17-03-25 11:54 am
Bangalore Correspondent
Yatnal, Pramod Muthalik: ' ಬಾಂಬ್ ಹಾಕಿ ಹೊಟ್ಟೆ...
16-03-25 10:32 pm
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
17-03-25 10:57 pm
HK News Desk
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
17-03-25 11:02 pm
Udupi Correspondent
Mangalore Accident, Kallapu: ನಿಯಂತ್ರಣ ತಪ್ಪಿ ಆ...
17-03-25 08:01 pm
Mangalore, Chakravarthy Sulibele, FIR: ಅನ್ಯಧರ...
17-03-25 04:27 pm
Mangalore Accident, Harekala, Death: ಹರೇಕಳದಲ್...
17-03-25 11:29 am
UT Khader, Mangalore, Tulu Academy: ತುಳು ಕಲಿತ...
16-03-25 10:55 pm
17-03-25 07:51 pm
Mangalore Correspondent
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm