ಬ್ರೇಕಿಂಗ್ ನ್ಯೂಸ್
03-11-20 01:16 pm Mangalore Correspondent ಕರಾವಳಿ
ಉಳ್ಳಾಲ, ನವಂಬರ್ 03 : ಹೇಳುವುದೊಂದು, ಮಾಡುವುದು ಇನ್ನೊಂದು ಅಂತಾರಲ್ಲ.. ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಕೇಸ್ ಹಾಕುವ ಟ್ರಾಫಿಕ್ ಪೊಲೀಸರೇ ಕಾನೂನು ಉಲ್ಲಂಘಿಸಿದ ಪ್ರಸಂಗ ತೊಕ್ಕೊಟ್ಟಿನಲ್ಲಿ ನಡೆದಿದೆ.
ತೊಕ್ಕೊಟ್ಟು ಮೇಲ್ಸೇತುವೆ ಕೊನೆಯಲ್ಲಿ ಇತ್ತೀಚೆಗೆ ಅಪಘಾತ ನಡೆದ ಬಳಿಕ ಟ್ರಾಫಿಕ್ ಪೊಲೀಸರು ನಿಗಾ ಇಟ್ಟಿದ್ದಾರೆ. ಅಬಳಿಕ ಉಳ್ಳಾಲಕ್ಕೆ ತಿರುಗುತ್ತಿದ್ದ ಪಾಸಿಂಗ್ ಸೌಲಭ್ಯವನ್ನು ಬಂದ್ ಮಾಡಿದ್ದು ಮುಂದೆ ಹೋಗಿ ತಿರುವು ಪಡೆಯಲು ಅವಕಾಶ ಕೊಡಲಾಗಿದೆ. ಹೀಗಾಗಿ ಉಳ್ಳಾಲದತ್ತ ಹೋಗುವ - ಬರುವ ಜನರು ಸಂಕಷ್ಟ ಪಡುತ್ತಿದ್ದಾರೆ.
ಈ ಮಧ್ಯೆ, ತೊಕ್ಕೊಟ್ಟು- ಕಾಪಿಕಾಡು ಹೆದ್ದಾರಿಯಲ್ಲಿ ( ಕೊಲ್ಯದಿಂದ- ತೊಕ್ಕೊಟ್ಟಿನ ಕಡೆಗೆ) ಪೊಲೀಸರ ವಾಹನ ವಿರುದ್ಧ ದಿಕ್ಕಿನಲ್ಲಿ ಚಲಿಸಿದೆ. ಜನಸಾಮಾನ್ಯರು ಇಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸಿದರೆ ಕಾನೂನು ಪಾಠ ಹೇಳುವ ಪೊಲೀಸರೇ ರೂಲ್ಸ್ ಬ್ರೇಕ್ ಮಾಡಿರುವುದನ್ನ ಕಂಡ ಜನರು ಜನರಿಗೊಂದು, ಪೊಲೀಸರಿಗೊಂದು ಕಾನೂನೇ ಎಂದು ಪ್ರಶ್ನಿಸುವಂತಾಗಿದೆ.


ತೊಕ್ಕೊಟ್ಟು ಓವರ್ ಬ್ರಿಡ್ಜ್ ಕಡೆಯಿಂದ ಎರಡನೇ ಕೊಲ್ಯದ ವರೆಗಿನ ಸುಮಾರು 2 ಕಿ.ಮೀ ರಸ್ತೆಯಲ್ಲಿ ವಾಹನಗಳು ಹೆದ್ದಾರಿ ಕ್ರಾಸ್ ಮಾಡಲು ಯಾವುದೇ ತಿರುವುಗಳಿಲ್ಲ. ಸಂಬಂಧ ಪಟ್ಟ ನವಯುಗ ಕನ್ಸ್ಟ್ರಕ್ಷನ್ ಕಂಪನಿಯವರು ಇದುವರೆಗೂ ಇಲ್ಲಿ ಸರ್ವಿಸ್ ರಸ್ತೆ ನಿರ್ಮಿಸಿಲ್ಲ. ಪರಿಣಾಮ ಕೊಲ್ಯದಿಂದ- ಓವರ್ ಬ್ರಿಡ್ಜ್ ನ ನಡುವೆ ಓಡಾಡುವ ವಾಹನ ಸವಾರರು ಸಮಯದ ಅಭಾವದಿಂದಲೋ, ದುಬಾರಿ ಇಂಧನ ಉಳಿಸುವ ಆಸೆಯಿಂದಲೋ ಇಲ್ಲಿ ನಿತ್ಯವೂ ರಾಂಗ್ ಸೈಡ್ ನಿಂದ ಸಂಚರಿಸಿ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ದು ಫೈನ್ ಕಟ್ಟಿಸಿಕೊಳ್ತಾರೆ.
ಈ ಪ್ರದೇಶದಲ್ಲಿ ಸರ್ವಿಸ್ ರಸ್ತೆ ಇಲ್ಲದೇ ಇರುವುದೇ ವಾಹನ ಸವಾರರು ರಾಂಗ್ ಸೈಡ್ ಚಲಿಸಲು ಮುಖ್ಯ ಕಾರಣವಾಗಿದ್ದರೂ, ಪೊಲೀಸರು ಸಂಬಂಧ ಪಟ್ಟ ನವಯುಗ ಕಂಪನಿಯ ವಿರುದ್ಧ ಕೇಸ್ ಹಾಕುವ ಧೈರ್ಯ ಮಾಡದೆ ಬಡ ವಾಹನ ಸವಾರರ ಮೇಲೆ ಫೈನ್ ಹಾಕಿ ದರ್ಪ ತೋರಿಸುತ್ತಾರೆ !
ಇಂದು ಟ್ರಾಫಿಕ್ ಪೊಲೀಸರೇ ಈ ರಸ್ತೆಯಲ್ಲಿ ರಾಂಗ್ ಸೈಡಲ್ಲಿ ಸಂಚರಿಸಿ, ಟ್ರಾಫಿಕ್ ಉಲ್ಲಂಘಿಸುವ ಮಂದಿಗೆ ಮಾದರಿಯಾಗಿದ್ದಾರೆ !!
A Traffic Police Jeep violating traffic rules by going on the opposite direction at Thokottu near the bridge has gone viral on social media.
20-12-25 03:05 pm
Bangalore Correspondent
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 10:53 pm
Mangalore Correspondent
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
21-12-25 01:18 pm
Mangalore Correspondent
Fraud Abroad Job Scam, Mangalore, Armenia: ಅರ...
18-12-25 04:53 pm
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm