ಬ್ರೇಕಿಂಗ್ ನ್ಯೂಸ್
02-11-20 05:50 pm Mangalore Correspondent ಕರಾವಳಿ
ಮಂಗಳೂರು, ನವೆಂಬರ್ 02: ಕೊಲ್ಲಿ ರಾಷ್ಟ್ರಗಳನ್ನು ಅವಲಂಬಿಸಿರುವ ಇಂಧನ ಬಳಕೆಯನ್ನು ಕಡಿಮೆಗೊಳಿಸಿ ಬಯೋ ಡೀಸೆಲ್ ಉತ್ಪಾದನೆಗೆ ಒತ್ತು ಕೊಡಬೇಕೆಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಅಮೆರಿಕ, ಇಂಗ್ಲೆಂಡ್, ಜರ್ಮನಿಯಂತಹ ದೇಶಗಳು ಸಾಕಷ್ಟು ಸಂಶೋಧನೆ ನಡೆಸಿದ್ದರೂ, ಭಾರತದಲ್ಲಿ ಈ ಕುರಿತು ಹೆಚ್ಚು ಸಂಶೋಧನೆ ನಡೆದಿಲ್ಲ. ಇಂಥದ್ರಲ್ಲಿ, ಕರಾವಳಿಯ ಹಳ್ಳಿಗಾಡಿನ ಸಾಧಕರೊಬ್ಬರು ಬಯೋ ಡೀಸೆಲ್ ಉತ್ಪಾದಿಸಿ ದೇಶಕ್ಕೆ ಸ್ವಾವಲಂಬನೆಯ ಪಾಠ ಹೇಳಿದ್ದಾರೆ.
ಅದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಅಳಕೆಮಜಲು ಎಂಬಲ್ಲಿರುವ ಬಯೋ ಡೀಸೆಲ್ ಪಂಪ್. ಸುಳ್ಯ ತಾಲೂಕಿನ ಚೊಕ್ಕಾಡಿ ಗ್ರಾಮದ ನಿವಾಸಿ ಕೇಶವಮೂರ್ತಿ ಸ್ಥಾಪಿಸಿರುವ ಈ ಡೀಸೆಲ್ ಪಂಪ್ ವಿಭಿನ್ನವಾದ್ದು. ಅಂದರೆ, ಈ ಪಂಪ್ ನಲ್ಲಿ ಯಾವುದೇ ಇತರೇ ಕಂಪೆನಿಗಳ ಪೆಟ್ರೋಲ್, ಡೀಸೆಲ್ ಅನ್ನು ಮಾರಾಟ ಮಾಡಲ್ಲ. ಕೇಶವಮೂರ್ತಿ ತಮ್ಮದೇ ಫ್ಯಾಕ್ಟರಿಯಲ್ಲಿ ತರಕಾರಿ ತ್ಯಾಜ್ಯಗಳಿಂದ ಉತ್ಪಾದಿಸಿದ ಬಯೋ ಡೀಸೆಲನ್ನು ಮಾರಾಟ ಮಾಡುತ್ತಾರೆ.



ಸೋಯಾಬೀನ್, ಜೋಳ ಹಾಗೂ ಜತ್ರೋಪ ಗಿಡಗಳ ಬೀಜಗಳನ್ನು ಎಣ್ಣೆ ತಯಾರಿಕೆ ಬಳಸಲಾಗುತ್ತದೆ. ಹೀಗೆ ಎಣ್ಣೆಗೆ ಬಳಸಿದ ಬಳಿಕ ಉಳಿಯುವ ತ್ಯಾಜ್ಯಗಳನ್ನು ಬಳಸ್ಕೊಂಡು ಡೀಸೆಲ್ ತಯಾರಿಸುತ್ತೇವೆ. ನೋಡಲು ಜ್ಯೂಸ್ ತರ ಕಾಣುವ ಈ ಡೀಸೆಲ್ ಗೆ ಬೆಂಕಿ ಹತ್ತಿಕೊಳ್ಳಲ್ಲ. ಇದರಲ್ಲಿ ಗಂಧಕದ ಅಂಶ ಇರದ ಕಾರಣ ಬೆಂಕಿ ಹಾಕಿದರೂ ಉರಿಯುವುದಿಲ್ಲ ಎನ್ನುತ್ತಾ ಕೇಶವಮೂರ್ತಿ ಪ್ರಾತ್ಯಕ್ಷಿಕೆ ತೋರಿಸುತ್ತಾರೆ.
ಇಂಗ್ಲೆಂಡ್ ನಲ್ಲಿ ಐಟಿ ಕನ್ಸಲ್ಟೆಂಟ್ ಆಗಿ ಉದ್ಯೋಗದಲ್ಲಿದ್ದ ಕೇಶವ ಮೂರ್ತಿ, ಎರಡು ವರ್ಷಗಳ ಹಿಂದಷ್ಟೇ ತಾಯ್ನಾಡಿಗೆ ಬಂದು ಸ್ವೋದ್ಯೋಗದಲ್ಲಿ ತೊಡಗಿದ್ದಾರೆ. ವಿದೇಶದಲ್ಲಿ ಪ್ರಚಲಿತದಲ್ಲಿರುವ ಬಯೋ ಡೀಸೆಲ್ ಇಲ್ಲಿ ಯಾಕೆ ಮಾಡಬಾರದು ಎಂದು ಪ್ರಯತ್ನಿಸಿ ಯಶಸ್ಸು ಕಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸೋಯಾ, ಜತ್ರೋಪಾ, ಜೋಳ ಪೂರೈಕೆ ಇರುವುದರಿಂದ ಹುಬ್ಬಳ್ಳಿಯಲ್ಲಿ ಫ್ಯಾಕ್ಟರಿ ಸ್ಥಾಪಿಸಿದ್ದಾರೆ. ಸದ್ಯಕ್ಕೆ ವಿಟ್ಲದಲ್ಲಿ ಪಂಪ್ ಆರಂಭಿಸಿದ್ದು, ಮುಂದಕ್ಕೆ ಕುಮಟಾ ಮತ್ತು ತುಮಕೂರಿನಲ್ಲಿ ಆರಂಭಿಸುವ ಚಿಂತನೆ ಇದೆ ಎನ್ನುತ್ತಾರೆ. ಇತರೇ ಡೀಸೆಲಿನಿಂದ ಲೀಟರಿಗೆ ಎರಡು ರೂ. ಕಡಿಮೆ ಬೆಲೆ ಇರುವ ಈ ಬಯೋಡೀಸೆಲ್ ಬಳಕೆಯಿಂದ ವಾಹನದಲ್ಲಿ ಮೈಲೇಜ್ ಕೂಡ ಜಾಸ್ತಿ ಇದೆಯಂತೆ. ಹೀಗಾಗಿ ಕೇರಳ, ಮಂಗಳೂರಿನಿಂದ ದೂರಕ್ಕೆ ತೆರಳುವ ಮಂದಿ ಇಲ್ಲಿಯೇ ಡೀಸೆಲ್ ತುಂಬಿಕೊಂಡು ಹೋಗುತ್ತಾರೆ.


ಬಯೋ ಡೀಸೆಲ್ ಬಳಕೆಯಿಂದ ಇಂಜಿನ್ ತುಂಬ ಮೃದುವಾಗುತ್ತಿದೆ. ಸೌಂಡ್ ಬರುವುದಿಲ್ಲ ಎನ್ನುವ ಗ್ರಾಹಕರು ಕೇಶವಮೂರ್ತಿ ಪ್ರಯತ್ನಕ್ಕೆ ಶಹಭಾಷ್ ಹೇಳುತ್ತಾರೆ. ಅಲ್ಲದೆ, ರೈತರು ಬೆಳೆಯೋ ಉತ್ಪನ್ನಗಳಿಂದಲೇ ಡೀಸೆಲ್ ತಯಾರಿಸುವುದರಿಂದ ಇದಕ್ಕೆ ಸರಕಾರವೂ ಪ್ರೋತ್ಸಾಹ ನೀಡಬೇಕು ಎನ್ನುತ್ತಾರೆ. ಅಂದಹಾಗೆ, ದೇಶದಲ್ಲಿ ಸದ್ಯಕ್ಕೆ ಕೇವಲ ನಾಲ್ಕು ಬಯೋ ಡೀಸೆಲ್ ಬಂಕ್ಗಳು ಮಾತ್ರ ಇವೆ. ನಾಲ್ಕರಲ್ಲಿ ಒಂದು ಗುಜರಾತ್ ನಲ್ಲಿದ್ದರೆ, ಉಳಿದ ಮೂರು ಕರ್ನಾಟಕದಲ್ಲಿವೆ. ಇಂಧನ ಸ್ವಾವಲಂಬನೆ ದೃಷ್ಟಿಯಿಂದ ಬಯೋ ಡೀಸೆಲ್ ಉತ್ಪಾದನೆ ಅತ್ಯಂತ ಅವಶ್ಯವಾಗಿದೆ.
Video:
State’s First Soya & Corn oil manure made Bio-Diesel fuel pump in Vitla, Mangalore by Jaychandra has created a new upliftment in the field of the fuel industry.
20-12-25 03:05 pm
Bangalore Correspondent
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 10:53 pm
Mangalore Correspondent
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
21-12-25 01:18 pm
Mangalore Correspondent
Fraud Abroad Job Scam, Mangalore, Armenia: ಅರ...
18-12-25 04:53 pm
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm