ಬ್ರೇಕಿಂಗ್ ನ್ಯೂಸ್
21-10-20 01:26 pm Mangalore Correspondent ಕರಾವಳಿ
ಮಂಗಳೂರು, ಅಕ್ಟೋಬರ್ 21: ಕೃಷ್ಣಾಷ್ಟಮಿಯಂದು ಪುಟಾಣಿ ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ, ಸಂಭ್ರಮಿಸುವುದನ್ನು ನೋಡಿದ್ದೇವೆ. ಈ ಬಾರಿ ಗಣೇಶೋತ್ಸವ, ನವರಾತ್ರಿಗೂ ಆ ಟ್ರೆಂಡ್ ಮುಂದುವರಿದಿದೆ. ನವರಾತ್ರಿಯ ಸಂಭ್ರಮದ ನಡುವೆ ತಮ್ಮ ಮಗುವನ್ನೂ ನವದುರ್ಗೆಯಾಗಿ ನೋಡಲು ಹೆತ್ತವರು ಇನ್ನಿಲ್ಲದ ಕಸರತ್ತು ಮಾಡಿದ್ದಾರೆ. ನುರಿತ ಛಾಯಾಗ್ರಾಹಕರ ಕೈಚಳಕದಲ್ಲಿ ಮೂಡಿಬಂದ ನವದುರ್ಗೆಯರ ಫೋಟೋಗಳು ಜಾಲತಾಣದಲ್ಲಿ ಈಗ ಭಾರೀ ವೈರಲ್ ಆಗಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಜಮಾನ ಉಪ್ಪಿನಕಾಯಿ ಮೂಲಕ ಫೇಮಸ್ ಆಗಿರುವ ಬಂಟ್ವಾಳದ ವರದರಾಯ ಪೈ – ಸಂಧ್ಯಾ ಪೈಯವರ ಮಗಳು ವಿಷ್ಣುಪ್ರಿಯಾ. ಸಂಗೀತ, ಭರತನಾಟ್ಯ, ಅಭಿನಯ ಚತುರೆ ಆಗಿರುವ ವಿಷ್ಣುಪ್ರಿಯಾಳನ್ನು ಈ ಬಾರಿ ಹೆತ್ತವರು ನವದುರ್ಗೆಯ ರೂಪದಲ್ಲಿ ಕಂಡಿದ್ದಾರೆ. ದೇವಿ ಲಕ್ಷ್ಮಿಯ ಅವತಾರಗಳಾಗಿರುವ ಆದಿಶಕ್ತಿ, ಸ್ಕಂದಮಾತ, ಭದ್ರಕಾಳಿ, ಶಾರದೆ, ಕಾತ್ಯಾಯಿನಿ, ಬ್ರಹ್ಮಚಾರಿಣಿ, ಮಹಾಗೌರಿ, ಸಿದ್ಧಿಧಾತ್ರಿ, ದುರ್ಗಾಮಾತೆ ಹೀಗೆ ನವರೂಪಗಳನ್ನು ಧರಿಸಿ, ಸಾಕ್ಷಾತ್ ನವಶಕ್ತಿಯರ ಅವತಾರಗಳಲ್ಲಿ ವಿಷ್ಣುಪ್ರಿಯಾಳನ್ನು ಫೋಟೋಶೂಟ್ ಮಾಡಿಸಿದ್ದಾರೆ. ಕಾರಿಂಜ ಮತ್ತು ಕುದ್ರೋಳಿ ದೇವಸ್ಥಾನಗಳಲ್ಲಿ ಈ ಫೋಟೋಗಳನ್ನು ಶೂಟ್ ಮಾಡಲಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.




ಅಂದಹಾಗೆ, 4ನೇ ತರಗತಿ ಕಲಿಯುತ್ತಿರುವ ವಿಷ್ಣುಪ್ರಿಯಾ ಮೂಡುಬಿದ್ರೆ ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿನಿ. ಬಾಲಕಿಯ ನವದುರ್ಗೆಯರ ಸ್ವರೂಪಗಳು ಮಂಗಳೂರಿನ ಛಾಯಾಗ್ರಾಹಕ ಪುನೀಕ್ ಶೆಟ್ಟಿ ಕ್ಯಾಮರಾ ಕಣ್ಣಲ್ಲಿ ಕಂಡಿದ್ದು ಹೀಗೆ..
ಇನ್ನಷ್ಟು ಪೋಟೋಗಳಿಗೆ: Photo Gallery
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm